<p><strong>ಚಿಂತಾಮಣಿ: </strong>ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ನೆಲ, ಜಲ, ಭಾಷೆಯ ಜತೆಗೆ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆಯೂ ಹೋರಾಟ ನಡೆಸಬೇಕು ಎಂದು ಜಯಕರ್ನಾಟಕ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್ ಸಲಹೆ ನೀಡಿದರು.</p>.<p>ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ನಗರ ಘಟಕ, ಚಿಲಕಲನೇರ್ಪು ಹಾಗೂ ಆಟೊ ಘಟಕಗಳ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.</p>.<p>ಸಂಘಟನೆಯ ಪದಾಧಿಕಾರಿಗಳು ಕೇವಲ ಪತ್ರಿಕಾ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಬಾರದು. ಸಾರ್ವಜನಿಕರ ಸಮಸ್ಯೆಗಳನ್ನು ಹಿಡಿದು ಹೋರಾಟ ನಡೆಸುವ ಮೂಲಕ ಜನರ ವಿಶ್ವಾಸ ಗಳಿಸಬೇಕು. ಜನರ ಪ್ರೀತಿ, ವಿಶ್ವಾಸ ಗಳಿಸಿದರೆ ಮಾತ್ರ ಸಂಘಟನೆ ಬಲಿಷ್ಠಗೊಳಿಸಲು ಸಾಧ್ಯ ಎಂದರು.</p>.<p>ಕನ್ನಡ ಜಲ, ನೆಲ, ಭಾಷೆಗೆ ಚ್ಯುತಿ ಬಂದಾಗ ಬೀದಿಗೆ ಇಳಿದು ಶಾಂತಿಯುತ ಹೋರಾಟಕ್ಕೆ ಸಿದ್ಧರಾಗಿರಬೇಕು. ಇತರೆ ಭಾಷೆಯ ಜನರಿಗೂ ಸ್ನೇಹ, ಸೌಹಾರ್ದದಿಂದ ನಾಡಿನ ಭಾಷೆಯ ಕಲಿಕೆಯ ಮಹತ್ವ ತಿಳಿಸಬೇಕು. ನಾಡಿನಲ್ಲಿ ವಾಸ ಮಾಡುವ ಪ್ರತಿಯೊಬ್ಬರೂ ಕನ್ನಡವನ್ನು ಕಲಿಯಲೇ ಬೇಕು ಎಂದರು.</p>.<p>ಜಯಕರ್ನಾಟಕ ಸಂಘಟನೆಯನ್ನು ರಾಜ್ಯದಾದ್ಯಂತ ಪುನರ್ ಸಂಘಟನೆಗೊಳಿಸಲಾಗುತ್ತಿದೆ. ಎಲ್ಲ ಕಡೆಯೂ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ. ಕಾರ್ಯಕರ್ತರು ಸಂಘಟನೆಯನ್ನು ಬಲಿಷ್ಠಗೊಳಿಸಲು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಮನವಿ ಮಾಡಿದರು.</p>.<p>ಪದಾಧಿಕಾರಿಗಳು: ನವೀನ್ ರೆಡ್ಡಿ-ನಗರ ಘಟಕದ ಅಧ್ಯಕ್ಷ, ಕೃಷ್ಣಾರೆಡ್ಡಿ-ಜಿಲ್ಲಾ ಕಾರ್ಯದರ್ಶಿ, ನರಸಿಂಹಯ್ಯ-ಆಟೊ ಘಟಕದ ಅಧ್ಯಕ್ಷ, ಆನಂದ-ಸಂಘಟನಾ ಕಾರ್ಯದರ್ಶಿ, ಮಸ್ತಾನ್, ವೆಂಕಟೇಶ್-ಸದಸ್ಯರು.</p>.<p><strong>ಕಸಬಾ ಹೋಬಳಿ:</strong> ನಾಗರಾಜ್– ಅಧ್ಯಕ್ಷ, ವಿ. ಮಂಜುನಾಥ್– ಉಪಾಧ್ಯಕ್ಷ, ಮುರಳಿ– ಕಾರ್ಯಾಧ್ಯಕ್ಷ, ದೇವರಾಜ್– ಸಹ ಕಾರ್ಯದರ್ಶಿ, ಅಶೋಕರೆಡ್ಡಿ– ಸಂಘಟನಾ ಕಾರ್ಯದರ್ಶಿ, ಮಂಜುನಾಥ್– ಸಂಚಾಲಕ.</p>.<p><strong>ಚಿಲಕಲನೇರ್ಪು ಹೋಬಳಿ: </strong>ಅಸ್ಲಾಂ– ಅಧ್ಯಕ್ಷ, ಆನಂದ್– ಕಾರ್ಯಾಧ್ಯಕ್ಷ, ಫೈರೋಜ್– ಸಂಘಟನಾ ಕಾರ್ಯದರ್ಶಿ.</p>.<p>ಸಂಘಟನೆಯ ಜಿಲ್ಲಾ ಕಾರ್ಯಾಧ್ಯಕ್ಷ ಪ್ರದೀಪ್, ತಾಲ್ಲೂಕು ಅಧ್ಯಕ್ಷ ರಮೇಶಕುಮಾರ್, ಕಾರ್ಯಾಧ್ಯಕ್ಷ ಸತ್ಯನಾರಾಯಣಸಿಂಗ್, ಉಪಾಧ್ಯಕ್ಷ ಮುನಿರೆಡ್ಡಿ, ಪ್ರಧಾನ ಕಾರ್ಯದರ್ಶಿ ಕೆ.ಎನ್. ಸದಾನಂದ, ಸಂಘಟನಾ ಕಾರ್ಯದರ್ಶಿ ಟಿ. ಸೀನಾ, ರವಿಕುಮಾರ್ ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂತಾಮಣಿ: </strong>ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ನೆಲ, ಜಲ, ಭಾಷೆಯ ಜತೆಗೆ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆಯೂ ಹೋರಾಟ ನಡೆಸಬೇಕು ಎಂದು ಜಯಕರ್ನಾಟಕ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್ ಸಲಹೆ ನೀಡಿದರು.</p>.<p>ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ನಗರ ಘಟಕ, ಚಿಲಕಲನೇರ್ಪು ಹಾಗೂ ಆಟೊ ಘಟಕಗಳ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.</p>.<p>ಸಂಘಟನೆಯ ಪದಾಧಿಕಾರಿಗಳು ಕೇವಲ ಪತ್ರಿಕಾ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಬಾರದು. ಸಾರ್ವಜನಿಕರ ಸಮಸ್ಯೆಗಳನ್ನು ಹಿಡಿದು ಹೋರಾಟ ನಡೆಸುವ ಮೂಲಕ ಜನರ ವಿಶ್ವಾಸ ಗಳಿಸಬೇಕು. ಜನರ ಪ್ರೀತಿ, ವಿಶ್ವಾಸ ಗಳಿಸಿದರೆ ಮಾತ್ರ ಸಂಘಟನೆ ಬಲಿಷ್ಠಗೊಳಿಸಲು ಸಾಧ್ಯ ಎಂದರು.</p>.<p>ಕನ್ನಡ ಜಲ, ನೆಲ, ಭಾಷೆಗೆ ಚ್ಯುತಿ ಬಂದಾಗ ಬೀದಿಗೆ ಇಳಿದು ಶಾಂತಿಯುತ ಹೋರಾಟಕ್ಕೆ ಸಿದ್ಧರಾಗಿರಬೇಕು. ಇತರೆ ಭಾಷೆಯ ಜನರಿಗೂ ಸ್ನೇಹ, ಸೌಹಾರ್ದದಿಂದ ನಾಡಿನ ಭಾಷೆಯ ಕಲಿಕೆಯ ಮಹತ್ವ ತಿಳಿಸಬೇಕು. ನಾಡಿನಲ್ಲಿ ವಾಸ ಮಾಡುವ ಪ್ರತಿಯೊಬ್ಬರೂ ಕನ್ನಡವನ್ನು ಕಲಿಯಲೇ ಬೇಕು ಎಂದರು.</p>.<p>ಜಯಕರ್ನಾಟಕ ಸಂಘಟನೆಯನ್ನು ರಾಜ್ಯದಾದ್ಯಂತ ಪುನರ್ ಸಂಘಟನೆಗೊಳಿಸಲಾಗುತ್ತಿದೆ. ಎಲ್ಲ ಕಡೆಯೂ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ. ಕಾರ್ಯಕರ್ತರು ಸಂಘಟನೆಯನ್ನು ಬಲಿಷ್ಠಗೊಳಿಸಲು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಮನವಿ ಮಾಡಿದರು.</p>.<p>ಪದಾಧಿಕಾರಿಗಳು: ನವೀನ್ ರೆಡ್ಡಿ-ನಗರ ಘಟಕದ ಅಧ್ಯಕ್ಷ, ಕೃಷ್ಣಾರೆಡ್ಡಿ-ಜಿಲ್ಲಾ ಕಾರ್ಯದರ್ಶಿ, ನರಸಿಂಹಯ್ಯ-ಆಟೊ ಘಟಕದ ಅಧ್ಯಕ್ಷ, ಆನಂದ-ಸಂಘಟನಾ ಕಾರ್ಯದರ್ಶಿ, ಮಸ್ತಾನ್, ವೆಂಕಟೇಶ್-ಸದಸ್ಯರು.</p>.<p><strong>ಕಸಬಾ ಹೋಬಳಿ:</strong> ನಾಗರಾಜ್– ಅಧ್ಯಕ್ಷ, ವಿ. ಮಂಜುನಾಥ್– ಉಪಾಧ್ಯಕ್ಷ, ಮುರಳಿ– ಕಾರ್ಯಾಧ್ಯಕ್ಷ, ದೇವರಾಜ್– ಸಹ ಕಾರ್ಯದರ್ಶಿ, ಅಶೋಕರೆಡ್ಡಿ– ಸಂಘಟನಾ ಕಾರ್ಯದರ್ಶಿ, ಮಂಜುನಾಥ್– ಸಂಚಾಲಕ.</p>.<p><strong>ಚಿಲಕಲನೇರ್ಪು ಹೋಬಳಿ: </strong>ಅಸ್ಲಾಂ– ಅಧ್ಯಕ್ಷ, ಆನಂದ್– ಕಾರ್ಯಾಧ್ಯಕ್ಷ, ಫೈರೋಜ್– ಸಂಘಟನಾ ಕಾರ್ಯದರ್ಶಿ.</p>.<p>ಸಂಘಟನೆಯ ಜಿಲ್ಲಾ ಕಾರ್ಯಾಧ್ಯಕ್ಷ ಪ್ರದೀಪ್, ತಾಲ್ಲೂಕು ಅಧ್ಯಕ್ಷ ರಮೇಶಕುಮಾರ್, ಕಾರ್ಯಾಧ್ಯಕ್ಷ ಸತ್ಯನಾರಾಯಣಸಿಂಗ್, ಉಪಾಧ್ಯಕ್ಷ ಮುನಿರೆಡ್ಡಿ, ಪ್ರಧಾನ ಕಾರ್ಯದರ್ಶಿ ಕೆ.ಎನ್. ಸದಾನಂದ, ಸಂಘಟನಾ ಕಾರ್ಯದರ್ಶಿ ಟಿ. ಸೀನಾ, ರವಿಕುಮಾರ್ ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>