<p><strong>ಚೇಳೂರು (ಚಿಕ್ಕಬಳ್ಳಾಪುರ):</strong>ಆಂಧ್ರ ಗಡಿ ಭಾಗದಲ್ಲಿರುವ ಊದವಾರಪಲ್ಲಿ ಗ್ರಾಮದಲ್ಲಿಬುಧವಾರ ಕುಂಟೆಯಲ್ಲಿ (ಸಣ್ಣ ಕೆರೆ) ಈಜಲು ಹೋಗಿದ್ದ ನಾಲ್ವರು ಬಾಲಕರು ಮೃತಪಟ್ಟಿದ್ದಾರೆ.</p>.<p>ಮೃತಪಟ್ಟ ಬಾಲಕರನ್ನು ವರುಣ್, ಸಂತೋಷ್, ಬದ್ರಿನಾಥ್ ಮತ್ತು ಮಹೇಶ್ ಎಂದು ಗುರುತಿಸಲಾಗಿದ್ದು, ಎಲ್ಲರೂ 12 ವರ್ಷ ವಯಸ್ಸಿನವರು. ಈ ಪೈಕಿ ವರುಣ್ ಮತ್ತು ಸಂತೋಷ್ ಇಬ್ಬರೂ ಸಹೋದರರು.</p>.<p>ಬುರುಡಗುಂಟೆ ಗ್ರಾಮ ಪಂಚಾಯಿತಿಯ ಸಾಲಮಾಕಲಪಲ್ಲಿ ಗ್ರಾಮದ ವರುಣ್ ಮತ್ತು ಸಂತೋಷ ಊದವಾರಪಲ್ಲಿ ಗ್ರಾಮದ ತಮ್ಮ ಅತ್ತೆ ಅನಸೂಯಮ್ಮ ಅವರ ಮನೆಗೆ ಬಂದಿದ್ದರು.ಆಂಧ್ರ ಪ್ರದೇಶದ ಪಿ.ಟಿ.ಎಂ. ಮಂಡಲ್ ವಡ್ಡಿವಾಂಡ್ಲಪಲ್ಲಿ ಗ್ರಾಮದ ಬದ್ರಿನಾಥ್ (13) ಕೂಡ ಸಜ್ಜಲವಾರಪಲ್ಲಿ ಗ್ರಾಮದ ಸಂಬಂಧಿ ಮನೆಗೆ ಬಂದಿದ್ದ.</p>.<p>ಅನಸೂಯಮ್ಮ ಅವರ ಮಗ ಮಹೇಶಈ ಮೂವರು ಬಾಲಕರನ್ನು ಜತೆಯಲ್ಲಿ ಕರೆದುಕೊಂಡು ಮನೆಗಳಲ್ಲಿದ್ದ ಜಾನುವಾರುಗಳನ್ನು ಮೇಯಿಸಲು ಹೋಗಿದ್ದ. ಸಜ್ಜಲವಾರಪಲ್ಲಿ ಗ್ರಾಮದ ಬಳಿಯಿರುವ ಕೊತ್ತಕುಂಟೆಯಲ್ಲಿ ಇತ್ತೀಚೆಗೆ ಬಿದ್ದ ಮಳೆಯಿಂದ ನೀರು ಸಂಗ್ರಹವಾಗಿತ್ತು. ಕುಂಟೆ ದಡದಲ್ಲಿ ಜಾನುವಾರು ಕಟ್ಟಿಹಾಕಿ, ನಾಲ್ವರೂ ಈಜಾಡಲು ನೀರಿಗೆ ಇಳಿದಿದ್ದರು.</p>.<p>ಮಧ್ಯಾಹ್ನ ಜಾನುವಾರುಗಳಿಗೆ ನೀರು ಕುಡಿಸಲು ಕುಂಟೆಗೆ ಬಂದ ಗ್ರಾಮಸ್ಥರಿಗೆ ನೀರಿನಲ್ಲಿ ತೇಲುತ್ತಿದ್ದ ಬಾಲಕನ ಶವ ಕಂಡಿದೆ. ಆತ ಗ್ರಾಮದವರಿಗೆ ಸುದ್ದಿ ಮುಟ್ಟಿಸಿದ. ಗ್ರಾಮಸ್ಥರು ಬಾಲಕನ ಶವವನ್ನು ಹೊರತೆಗೆದರು. ಅಗ್ನಿಶಾಮಕ ದಳದ ಸಿಬ್ಬಂದಿಸಂಜೆಯ ವೇಳೆಗೆ ಉಳಿದ ಮೂವರು ಬಾಲಕರ ಶವಗಳನ್ನು ಹೊರ ತೆಗೆದಿದ್ದಾರೆ.</p>.<p>‘ಕುಂಟೆಯಲ್ಲಿ ಹೂಳು ಹೆಚ್ಚಾಗಿದ್ದರಿಂದ ಬಾಲಕರು ಅದರಲ್ಲಿ ಸಿಲುಕಿ ಮೃತಪಟ್ಟಿರಬಹುದು’ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ.ಸರ್ಕಲ್ ಇನ್ಸ್ಪೆಕ್ಟರ್ ಕೆ.ಎಂ.ನಯಾಜ್ ಬೇಗ್ , ರೆವಿನ್ಯೂ ಅಧಿಕಾರಿ ಎನ್. ರಮಾನಂದ್ ಸ್ಥಳದಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೇಳೂರು (ಚಿಕ್ಕಬಳ್ಳಾಪುರ):</strong>ಆಂಧ್ರ ಗಡಿ ಭಾಗದಲ್ಲಿರುವ ಊದವಾರಪಲ್ಲಿ ಗ್ರಾಮದಲ್ಲಿಬುಧವಾರ ಕುಂಟೆಯಲ್ಲಿ (ಸಣ್ಣ ಕೆರೆ) ಈಜಲು ಹೋಗಿದ್ದ ನಾಲ್ವರು ಬಾಲಕರು ಮೃತಪಟ್ಟಿದ್ದಾರೆ.</p>.<p>ಮೃತಪಟ್ಟ ಬಾಲಕರನ್ನು ವರುಣ್, ಸಂತೋಷ್, ಬದ್ರಿನಾಥ್ ಮತ್ತು ಮಹೇಶ್ ಎಂದು ಗುರುತಿಸಲಾಗಿದ್ದು, ಎಲ್ಲರೂ 12 ವರ್ಷ ವಯಸ್ಸಿನವರು. ಈ ಪೈಕಿ ವರುಣ್ ಮತ್ತು ಸಂತೋಷ್ ಇಬ್ಬರೂ ಸಹೋದರರು.</p>.<p>ಬುರುಡಗುಂಟೆ ಗ್ರಾಮ ಪಂಚಾಯಿತಿಯ ಸಾಲಮಾಕಲಪಲ್ಲಿ ಗ್ರಾಮದ ವರುಣ್ ಮತ್ತು ಸಂತೋಷ ಊದವಾರಪಲ್ಲಿ ಗ್ರಾಮದ ತಮ್ಮ ಅತ್ತೆ ಅನಸೂಯಮ್ಮ ಅವರ ಮನೆಗೆ ಬಂದಿದ್ದರು.ಆಂಧ್ರ ಪ್ರದೇಶದ ಪಿ.ಟಿ.ಎಂ. ಮಂಡಲ್ ವಡ್ಡಿವಾಂಡ್ಲಪಲ್ಲಿ ಗ್ರಾಮದ ಬದ್ರಿನಾಥ್ (13) ಕೂಡ ಸಜ್ಜಲವಾರಪಲ್ಲಿ ಗ್ರಾಮದ ಸಂಬಂಧಿ ಮನೆಗೆ ಬಂದಿದ್ದ.</p>.<p>ಅನಸೂಯಮ್ಮ ಅವರ ಮಗ ಮಹೇಶಈ ಮೂವರು ಬಾಲಕರನ್ನು ಜತೆಯಲ್ಲಿ ಕರೆದುಕೊಂಡು ಮನೆಗಳಲ್ಲಿದ್ದ ಜಾನುವಾರುಗಳನ್ನು ಮೇಯಿಸಲು ಹೋಗಿದ್ದ. ಸಜ್ಜಲವಾರಪಲ್ಲಿ ಗ್ರಾಮದ ಬಳಿಯಿರುವ ಕೊತ್ತಕುಂಟೆಯಲ್ಲಿ ಇತ್ತೀಚೆಗೆ ಬಿದ್ದ ಮಳೆಯಿಂದ ನೀರು ಸಂಗ್ರಹವಾಗಿತ್ತು. ಕುಂಟೆ ದಡದಲ್ಲಿ ಜಾನುವಾರು ಕಟ್ಟಿಹಾಕಿ, ನಾಲ್ವರೂ ಈಜಾಡಲು ನೀರಿಗೆ ಇಳಿದಿದ್ದರು.</p>.<p>ಮಧ್ಯಾಹ್ನ ಜಾನುವಾರುಗಳಿಗೆ ನೀರು ಕುಡಿಸಲು ಕುಂಟೆಗೆ ಬಂದ ಗ್ರಾಮಸ್ಥರಿಗೆ ನೀರಿನಲ್ಲಿ ತೇಲುತ್ತಿದ್ದ ಬಾಲಕನ ಶವ ಕಂಡಿದೆ. ಆತ ಗ್ರಾಮದವರಿಗೆ ಸುದ್ದಿ ಮುಟ್ಟಿಸಿದ. ಗ್ರಾಮಸ್ಥರು ಬಾಲಕನ ಶವವನ್ನು ಹೊರತೆಗೆದರು. ಅಗ್ನಿಶಾಮಕ ದಳದ ಸಿಬ್ಬಂದಿಸಂಜೆಯ ವೇಳೆಗೆ ಉಳಿದ ಮೂವರು ಬಾಲಕರ ಶವಗಳನ್ನು ಹೊರ ತೆಗೆದಿದ್ದಾರೆ.</p>.<p>‘ಕುಂಟೆಯಲ್ಲಿ ಹೂಳು ಹೆಚ್ಚಾಗಿದ್ದರಿಂದ ಬಾಲಕರು ಅದರಲ್ಲಿ ಸಿಲುಕಿ ಮೃತಪಟ್ಟಿರಬಹುದು’ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ.ಸರ್ಕಲ್ ಇನ್ಸ್ಪೆಕ್ಟರ್ ಕೆ.ಎಂ.ನಯಾಜ್ ಬೇಗ್ , ರೆವಿನ್ಯೂ ಅಧಿಕಾರಿ ಎನ್. ರಮಾನಂದ್ ಸ್ಥಳದಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>