ಸಂಘದ ತಾಲ್ಲೂಕು ಅಧ್ಯಕ್ಷ ಗುಂಡಾಪುರ ಲೋಕೇಶ್ಗೌಡ ಮಾತನಾಡಿ, ಮಹಾತ್ಮರ ಹೆಸರಲ್ಲಿ ಕೆರೆ ಗೋಕುಂಟೆಗಳನ್ನು ಆಕ್ರಮಿಸಿಕೊಂಡು ಭವನಗಳನ್ನು ನಿರ್ಮಿಸಿಸುವುದು ನಿಲ್ಲಸಬೇಕು. ಭವನಗಳನ್ನು ಸರ್ಕಾರಿ ಜಾಗದಲ್ಲಿ ನಿರ್ಮಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಅಶ್ವತ್ಥಗೌಡ, ಆದಿನಾರಾಯಣಪ್ಪ, ನರಸಿಂಹರೆಡ್ಡಿ, ಜಯಣ್ಣ, ವೆಂಕಟೇಶ್, ಸನತ್ಕುಮಾರ್ ಬಾಬು, ನಂದರೆಡ್ಡಿ ಭಾಗವಹಿಸಿದ್ದರು.