<p><strong>ಚಿಕ್ಕಬಳ್ಳಾಪುರ</strong>: ₹10 ಲಕ್ಷ ನಮೂದಿಸುವ ವೇಳೆ ₹1 ಲಕ್ಷ ಎಂದು ನಮೂದಿಸಿದ ಚಿಕ್ಕಬಳ್ಳಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಿಬ್ಬಂದಿ. ಈ ಎಡವಟ್ಟಿನ ಕಾರಣದಿಂದ ನಾಲ್ಕು ತಿಂಗಳಾದರೂ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಗಳ 65 ಅತಿಥಿ ಶಿಕ್ಷಕರಿಗೆ ಮಾರ್ಚ್ ತಿಂಗಳ ಗೌರವ ಧನ ಇಂದಿಗೂ ಬಿಡುಗಡೆ ಆಗಿಲ್ಲ!</p>.<p>ಇಂತಹ ಎಡವಟ್ಟು ಚಿಕ್ಕಬಳ್ಳಾಪುರ ತಾಲ್ಲೂಕು ಶಿಕ್ಷಣ ಇಲಾಖೆಯಿಂದ ನಡೆದಿದೆ. ಅತಿಥಿ ಶಿಕ್ಷಕರು ‘ಮಾರ್ಚ್ ಗೌರವ ಧನ ಬಿಡುಗಡೆ ಮಾಡಿ’ ಎಂದು ಶಾಸಕರು, ಬಿಇಒಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಂದಿನ ಕ್ಷೇತ್ರ ಶಿಕ್ಷಣಾಧಿಕಾರಿ ನಿವೃತ್ತರಾಗಿದ್ದು ಈಗ ಹೊಸ ಬಿಇಒ ನೇಮಕವಾಗಿದ್ದಾರೆ.</p>.<p>ಗೌರವಧನ ಬರುತ್ತದೆ ಎಂದು ಅಧಿಕಾರಿಗಳು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಹೇಳುತ್ತಲೇ ಇದ್ದಾರೆ. ಆದರೆ ತಾವು ಕೆಲಸ ಮಾಡಿದ ಹಣ ಬರುತ್ತದೆ ಎನ್ನುವ ಖಚಿತ ನಂಬಿಕೆ ಅತಿಥಿ ಶಿಕ್ಷಕರಿಗೆ ಇಲ್ಲ.</p>.<p>2024–25ನೇ ಶೈಕ್ಷಣಿಕ ಸಾಲಿನಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು 65 ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಅತಿಥಿ ಶಿಕ್ಷಕರಿಗೆ ಮಾಸಿಕ ₹10 ಸಾವಿರ ಗೌರವಧನವನ್ನು ಇಲಾಖೆ ಪಾವತಿಸುತ್ತದೆ.</p>.<p>ಜಿಲ್ಲೆಯ ಚಿಕ್ಕಬಳ್ಳಾಪುರ ಹೊರತುಪಡಿಸಿ ಉಳಿದ ಎಲ್ಲ ತಾಲ್ಲೂಕುಗಳ ಅತಿಥಿ ಶಿಕ್ಷಕರಿಗೆ ಮಾರ್ಚ್ನಲ್ಲಿ ಗೌರವಧನ ಬಿಡುಗಡೆಯಾಗಿದೆ. ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ತಾಲ್ಲೂಕಿನ ಅತಿಥಿಗಳಿಗೆ ಮಾತ್ರ ಗೌರವಧನದ ಭಾಗ್ಯವಿಲ್ಲ!</p>.<p>ಚಿಕ್ಕಬಳ್ಳಾಪುರ ತಾಲ್ಲೂಕಿನ ಅತಿಥಿ ಶಿಕ್ಷಕರಿಗೆ ನೀಡಲು ₹47.41 ಲಕ್ಷ ಹಾಗೂ ₹1 ಲಕ್ಷವು ತಲಾ ಎರಡು ಬಾರಿ ಬಿಡುಗಡೆಯಾಗಿದೆ. ಈ ಮೂಲಕ ಒಟ್ಟು ₹48.41 ಲಕ್ಷ ಅನುದಾನ ಬಿಡುಗಡೆಯಾಗಿದೆ.</p>.<p>ಆದರೆ ಎರಡನೇ ಕಂತಿಗೆ ಗೌರವಧನ ನೀಡುವ ಸಲುವಾಗಿ ₹10 ಲಕ್ಷ ಅನುದಾನ ಕೊರತೆ ಎದುರಾಗಿತ್ತು. ಅನುದಾನ ದೊರಕಿಸಿಕೊಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯು ಕೋರಿತ್ತು. ಈ ಕೋರಿಕೆ ವೇಳೆ ₹10 ಲಕ್ಷಕ್ಕೆ ಬದಲಾಗಿ ₹1 ಲಕ್ಷ ಬಿಡುಗಡೆಯಾಗಿದೆ.</p>.<p>‘ಈ ಕಚೇರಿಯಿಂದ ₹10 ಲಕ್ಷಗಳ ಅನುದಾನ ಬೇಡಿಕೆ ಸಲ್ಲಿಸಲಾಗಿತ್ತು. ಮೇಲಿನ ಕಚೇರಿಯಲ್ಲಿ ಕ್ರೋಡೀಕರಣದ ವೇಳೆ ಕೈ ತಪ್ಪಿನಿಂದ ₹1 ಲಕ್ಷ ಎಂದು ನಮೂದಿಸಿ ಸಲ್ಲಿಸಿರುವ ಪ್ರಯುಕ್ತ ಅನುದಾನದ ಕೊರತೆ ಆಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಏಪ್ರಿಲ್ನಲ್ಲಿ ಚಿಕ್ಕಬಳ್ಳಾಪುರ ಡಿಡಿಪಿಐ ಅವರಿಗೆ ಪತ್ರ ಸಹ ಬರೆದಿದ್ದಾರೆ.</p>.<p>‘ಈ ಕಾರಣದಿಂದ ಮಾರ್ಚ್ ಗೌರವಧನ ನೀಡಲು ಸಾಧ್ಯವಾಗಿಲ್ಲ. 2024–25ನೇ ಸಾಲಿನಲ್ಲಿ ₹48.41 ಲಕ್ಷ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ₹48.19 ಲಕ್ಷ ವೆಚ್ಚವಾಗಿದೆ. ₹21,725 ಅನುದಾನ ಉಳಿಕೆ ಇದೆ. ₹6.5 ಲಕ್ಷ ಹೆಚ್ಚುವರಿ ಅನುದಾನದ ಅಗತ್ಯವಿದೆ. ಈ ಅನುದಾನ ಮಂಜೂರು ಮಾಡಿಸಿಕೊಡಲು ಕೋರಿದೆ’ ಎಂದು ಪತ್ರದಲ್ಲಿ ಬಿಇಒ ಮನವಿ ಮಾಡಿದ್ದಾರೆ.</p>.<p><strong>ಅತಿಥಿ ಶಿಕ್ಷಕರ ಒಕ್ಕೂಟವೂ ಮನವಿ:</strong> ಗೌರವಧನ ಬಿಡುಗಡೆ ಮಾಡುವಂತೆ ಅತಿಥಿ ಶಿಕ್ಷಕರ ಒಕ್ಕೂಟ ಮನವಿ ಸಹ ಮಾಡುತ್ತಿದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿಯೂ ಅತಿಥಿ ಶಿಕ್ಷಕರಿಗೆ ಮಾರ್ಚ್ ಗೌರವಧನವು ಬಿಡುಗಡೆಯಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಸಹ ಗಮನಹರಿಸಬೇಕು ಎಂದು ಒಕ್ಕೂಟವು ಕೋರಿದೆ.</p>.<p><strong>‘ಕನಿಷ್ಠ ವೇತನ ನಂಬಿ ಜೀವನ’</strong></p><p>ಕೊಡುವ ಅಲ್ಪ ವೇತನದಲ್ಲೇ ಬಹಳಷ್ಟು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಅತಿಥಿ ಶಿಕ್ಷಕರು ಬಡತನ ರೇಖೆಗಿಂತ ಕೆಳಗಿರುವವರೇ ಆಗಿದ್ದಾರೆ. ಕೇವಲ ₹10 ಸಾವಿರ ಕನಿಷ್ಠ ವೇತನ ನಂಬಿ ಸಂಕಷ್ಟದಿಂದ ಜೀವನ ಸಾಗಿಸುತ್ತಿದ್ದಾರೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಅತಿಥಿ ಶಿಕ್ಷಕರ ಒಕ್ಕೂಟದ ಅಧ್ಯಕ್ಷ ರಾಜಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.</p><p>ಕಳೆದ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದ ಎಲ್ಲ ಶೈಕ್ಷಣಿಕ ಚಟುವಟಿಕೆಗಳನ್ನು ಪೂರ್ಣಗೊಳಿಸಿದ್ದೇವೆ. ನಾಲ್ಕು ತಿಂಗಳು ಕಳೆದರೂ ಮಾರ್ಚ್ನ ಅತಿಥಿ ಶಿಕ್ಷಕರ ವೇತನ ನಮ್ಮ ಕೈ ಸೇರದೆ ಇರುವುದು ದುರ್ದೈವ. ಈ ಬಗ್ಗೆ ಶಾಸಕರ ಕಚೇರಿಗೂ ಮನವಿ ನೀಡಿದ್ದೇವೆ. ದಯವಿಟ್ಟು ನಮಗೆ ಗೌರವಧನ ದೊರಕಿಸಿಕೊಡಬೇಕು ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ</strong>: ₹10 ಲಕ್ಷ ನಮೂದಿಸುವ ವೇಳೆ ₹1 ಲಕ್ಷ ಎಂದು ನಮೂದಿಸಿದ ಚಿಕ್ಕಬಳ್ಳಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಿಬ್ಬಂದಿ. ಈ ಎಡವಟ್ಟಿನ ಕಾರಣದಿಂದ ನಾಲ್ಕು ತಿಂಗಳಾದರೂ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಗಳ 65 ಅತಿಥಿ ಶಿಕ್ಷಕರಿಗೆ ಮಾರ್ಚ್ ತಿಂಗಳ ಗೌರವ ಧನ ಇಂದಿಗೂ ಬಿಡುಗಡೆ ಆಗಿಲ್ಲ!</p>.<p>ಇಂತಹ ಎಡವಟ್ಟು ಚಿಕ್ಕಬಳ್ಳಾಪುರ ತಾಲ್ಲೂಕು ಶಿಕ್ಷಣ ಇಲಾಖೆಯಿಂದ ನಡೆದಿದೆ. ಅತಿಥಿ ಶಿಕ್ಷಕರು ‘ಮಾರ್ಚ್ ಗೌರವ ಧನ ಬಿಡುಗಡೆ ಮಾಡಿ’ ಎಂದು ಶಾಸಕರು, ಬಿಇಒಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಂದಿನ ಕ್ಷೇತ್ರ ಶಿಕ್ಷಣಾಧಿಕಾರಿ ನಿವೃತ್ತರಾಗಿದ್ದು ಈಗ ಹೊಸ ಬಿಇಒ ನೇಮಕವಾಗಿದ್ದಾರೆ.</p>.<p>ಗೌರವಧನ ಬರುತ್ತದೆ ಎಂದು ಅಧಿಕಾರಿಗಳು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಹೇಳುತ್ತಲೇ ಇದ್ದಾರೆ. ಆದರೆ ತಾವು ಕೆಲಸ ಮಾಡಿದ ಹಣ ಬರುತ್ತದೆ ಎನ್ನುವ ಖಚಿತ ನಂಬಿಕೆ ಅತಿಥಿ ಶಿಕ್ಷಕರಿಗೆ ಇಲ್ಲ.</p>.<p>2024–25ನೇ ಶೈಕ್ಷಣಿಕ ಸಾಲಿನಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು 65 ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಅತಿಥಿ ಶಿಕ್ಷಕರಿಗೆ ಮಾಸಿಕ ₹10 ಸಾವಿರ ಗೌರವಧನವನ್ನು ಇಲಾಖೆ ಪಾವತಿಸುತ್ತದೆ.</p>.<p>ಜಿಲ್ಲೆಯ ಚಿಕ್ಕಬಳ್ಳಾಪುರ ಹೊರತುಪಡಿಸಿ ಉಳಿದ ಎಲ್ಲ ತಾಲ್ಲೂಕುಗಳ ಅತಿಥಿ ಶಿಕ್ಷಕರಿಗೆ ಮಾರ್ಚ್ನಲ್ಲಿ ಗೌರವಧನ ಬಿಡುಗಡೆಯಾಗಿದೆ. ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ತಾಲ್ಲೂಕಿನ ಅತಿಥಿಗಳಿಗೆ ಮಾತ್ರ ಗೌರವಧನದ ಭಾಗ್ಯವಿಲ್ಲ!</p>.<p>ಚಿಕ್ಕಬಳ್ಳಾಪುರ ತಾಲ್ಲೂಕಿನ ಅತಿಥಿ ಶಿಕ್ಷಕರಿಗೆ ನೀಡಲು ₹47.41 ಲಕ್ಷ ಹಾಗೂ ₹1 ಲಕ್ಷವು ತಲಾ ಎರಡು ಬಾರಿ ಬಿಡುಗಡೆಯಾಗಿದೆ. ಈ ಮೂಲಕ ಒಟ್ಟು ₹48.41 ಲಕ್ಷ ಅನುದಾನ ಬಿಡುಗಡೆಯಾಗಿದೆ.</p>.<p>ಆದರೆ ಎರಡನೇ ಕಂತಿಗೆ ಗೌರವಧನ ನೀಡುವ ಸಲುವಾಗಿ ₹10 ಲಕ್ಷ ಅನುದಾನ ಕೊರತೆ ಎದುರಾಗಿತ್ತು. ಅನುದಾನ ದೊರಕಿಸಿಕೊಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯು ಕೋರಿತ್ತು. ಈ ಕೋರಿಕೆ ವೇಳೆ ₹10 ಲಕ್ಷಕ್ಕೆ ಬದಲಾಗಿ ₹1 ಲಕ್ಷ ಬಿಡುಗಡೆಯಾಗಿದೆ.</p>.<p>‘ಈ ಕಚೇರಿಯಿಂದ ₹10 ಲಕ್ಷಗಳ ಅನುದಾನ ಬೇಡಿಕೆ ಸಲ್ಲಿಸಲಾಗಿತ್ತು. ಮೇಲಿನ ಕಚೇರಿಯಲ್ಲಿ ಕ್ರೋಡೀಕರಣದ ವೇಳೆ ಕೈ ತಪ್ಪಿನಿಂದ ₹1 ಲಕ್ಷ ಎಂದು ನಮೂದಿಸಿ ಸಲ್ಲಿಸಿರುವ ಪ್ರಯುಕ್ತ ಅನುದಾನದ ಕೊರತೆ ಆಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಏಪ್ರಿಲ್ನಲ್ಲಿ ಚಿಕ್ಕಬಳ್ಳಾಪುರ ಡಿಡಿಪಿಐ ಅವರಿಗೆ ಪತ್ರ ಸಹ ಬರೆದಿದ್ದಾರೆ.</p>.<p>‘ಈ ಕಾರಣದಿಂದ ಮಾರ್ಚ್ ಗೌರವಧನ ನೀಡಲು ಸಾಧ್ಯವಾಗಿಲ್ಲ. 2024–25ನೇ ಸಾಲಿನಲ್ಲಿ ₹48.41 ಲಕ್ಷ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ₹48.19 ಲಕ್ಷ ವೆಚ್ಚವಾಗಿದೆ. ₹21,725 ಅನುದಾನ ಉಳಿಕೆ ಇದೆ. ₹6.5 ಲಕ್ಷ ಹೆಚ್ಚುವರಿ ಅನುದಾನದ ಅಗತ್ಯವಿದೆ. ಈ ಅನುದಾನ ಮಂಜೂರು ಮಾಡಿಸಿಕೊಡಲು ಕೋರಿದೆ’ ಎಂದು ಪತ್ರದಲ್ಲಿ ಬಿಇಒ ಮನವಿ ಮಾಡಿದ್ದಾರೆ.</p>.<p><strong>ಅತಿಥಿ ಶಿಕ್ಷಕರ ಒಕ್ಕೂಟವೂ ಮನವಿ:</strong> ಗೌರವಧನ ಬಿಡುಗಡೆ ಮಾಡುವಂತೆ ಅತಿಥಿ ಶಿಕ್ಷಕರ ಒಕ್ಕೂಟ ಮನವಿ ಸಹ ಮಾಡುತ್ತಿದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿಯೂ ಅತಿಥಿ ಶಿಕ್ಷಕರಿಗೆ ಮಾರ್ಚ್ ಗೌರವಧನವು ಬಿಡುಗಡೆಯಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಸಹ ಗಮನಹರಿಸಬೇಕು ಎಂದು ಒಕ್ಕೂಟವು ಕೋರಿದೆ.</p>.<p><strong>‘ಕನಿಷ್ಠ ವೇತನ ನಂಬಿ ಜೀವನ’</strong></p><p>ಕೊಡುವ ಅಲ್ಪ ವೇತನದಲ್ಲೇ ಬಹಳಷ್ಟು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಅತಿಥಿ ಶಿಕ್ಷಕರು ಬಡತನ ರೇಖೆಗಿಂತ ಕೆಳಗಿರುವವರೇ ಆಗಿದ್ದಾರೆ. ಕೇವಲ ₹10 ಸಾವಿರ ಕನಿಷ್ಠ ವೇತನ ನಂಬಿ ಸಂಕಷ್ಟದಿಂದ ಜೀವನ ಸಾಗಿಸುತ್ತಿದ್ದಾರೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಅತಿಥಿ ಶಿಕ್ಷಕರ ಒಕ್ಕೂಟದ ಅಧ್ಯಕ್ಷ ರಾಜಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.</p><p>ಕಳೆದ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದ ಎಲ್ಲ ಶೈಕ್ಷಣಿಕ ಚಟುವಟಿಕೆಗಳನ್ನು ಪೂರ್ಣಗೊಳಿಸಿದ್ದೇವೆ. ನಾಲ್ಕು ತಿಂಗಳು ಕಳೆದರೂ ಮಾರ್ಚ್ನ ಅತಿಥಿ ಶಿಕ್ಷಕರ ವೇತನ ನಮ್ಮ ಕೈ ಸೇರದೆ ಇರುವುದು ದುರ್ದೈವ. ಈ ಬಗ್ಗೆ ಶಾಸಕರ ಕಚೇರಿಗೂ ಮನವಿ ನೀಡಿದ್ದೇವೆ. ದಯವಿಟ್ಟು ನಮಗೆ ಗೌರವಧನ ದೊರಕಿಸಿಕೊಡಬೇಕು ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>