<p><strong>ಚಿಕ್ಕಬಳ್ಳಾಪುರ: </strong>ಮಂಚೇನಹಳ್ಳಿ ಹೋಬಳಿಯ ಮಿಣಕಿನಗುರ್ಕಿ ಗ್ರಾಮದ ಚೌಡೇಶ್ವರಿ ದೇವಾಲಯಕ್ಕೆ ಸೇರಿದ ಇನಾಂತಿ ಜಮೀನಿನಲ್ಲಿ ಯಾವುದೇ ಅನುಮತಿ ಪಡೆಯದೆ ಹಿಂದೂಸ್ ಟವರ್ ಲಿಮಿಟೆಡ್ ಕಂಪನಿ ಅಕ್ರಮವಾಗಿ ಮೊಬೈಲ್ ಟವರ್ ನಿರ್ಮಿಸಿದೆ. ಈ ದೇಗುಲ ಮುಜರಾಯಿ ಇಲಾಖೆಗೆ ಸೇರಿದೆ.</p>.<p>ಟವರ್ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿ, ವಿದ್ಯುತ್ ಇಲಾಖೆ ಮತ್ತು ತಾಲ್ಲೂಕು ಆಡಳಿತದಿಂದ ಅನುಮತಿ ಪಡೆಯಬೇಕು. ಮುಜರಾಯಿ ಇಲಾಖೆ ಜಮೀನಿನಲ್ಲಿಯೇ ಟವರ್ ನಿರ್ಮಿಸಿದ್ದರೂ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಯಲಿಲ್ಲವೇ? ವಿದ್ಯುತ್ ಸಂಪರ್ಕ ಪಡೆದಿದ್ದಾದರೂ ಹೇಗೆ? ಹೀಗೆ ಸಾರ್ವಜನಿಕ ವಲಯದಲ್ಲಿ ಈ ಪ್ರಕರಣ ನಾನಾ ಚರ್ಚೆಗಳನ್ನು ಹುಟ್ಟಿಸಿದೆ.</p>.<p>ಚಿಕ್ಕಬಳ್ಳಾಪುರದ ಆರ್ಟಿಐ ಕಾರ್ಯಕರ್ತ ಸಿ. ಮೋಹನ್ ಕುಮಾರ್ ಈ ಅಕ್ರಮ ಮೊಬೈಲ್ ಟವರ್ಗೆ ಸಂಬಂಧಿಸಿದಂತೆ ಮುಜುರಾಯಿ ಇಲಾಖೆ, ತಹಶೀಲ್ದಾರ್ ಕಚೇರಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅಷ್ಟೇ ಏಕೆ ಪ್ರಧಾನಿ ಕಚೇರಿಗೂ ದೂರು ನೀಡಿದ್ದಾರೆ.</p>.<p>ತೋರಿದ್ದು ಒಂದು ಹಾಕಿದ್ದು ಮತ್ತೊಂದು ಕಡೆ:ಮಿಣಕಿನಗುರ್ಕಿಯ ಎಂ. ಕೃಷ್ಣಪ್ಪ ಎಂಬುವವರು ಗ್ರಾಮದ ಸರ್ವೆ ನಂ 69/1ರ 1.03 ಎಕರೆ ಜಮೀನು ಹೊಂದಿದ್ದಾರೆ. ಇಲ್ಲಿ 40*60 ಸುತ್ತಳತೆಯ 2,400 ಅಡಿಗಳ ವ್ಯಾಪ್ತಿಯಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ 2015ರ ಜೂನ್ನಲ್ಲಿ ಕಂಪನಿ ಜತೆ ಕರಾರು ಮಾಡಿಕೊಂಡಿ ದ್ದಾರೆ.ಜಮೀನಿನ ದಾಖಲೆಗಳನ್ನು ಹಿಂದೂಸ್ ಟವರ್ ಲಿಮಿಟೆಡ್ ಕಂಪನಿಗೆ ನೀಡಿದ್ದಾರೆ.</p>.<p>ಆದರೆ, ಇಲ್ಲಿ ಟವರ್ ಅವಳವಡಿಸುವ ಬದಲು ಗ್ರಾಮದ ಸರ್ವೆ ನಂ. 1ರಲ್ಲಿರುವ ಮುಜರಾಯಿ ಇಲಾಖೆಗೆ ಸೇರಿದ ಚೌಡೇಶ್ವರಿ ದೇಗುಲದ ಇನಾಂತಿ ಜಮೀನಿನಲ್ಲಿ ಟವರ್ ನಿರ್ಮಿಸಲಾಗಿದೆ. ಟವರ್ ನಿರ್ಮಾಣಕ್ಕೆ ಯಾವುದೇ ಇಲಾಖೆಯಿಂದಲೂ ಅನುಮತಿ ಪಡೆದಿಲ್ಲ.</p>.<p>ತಹಶೀಲ್ದಾರರಿಗೆಮೋಹನ್ ಕುಮಾರ್ ದೂರು ನೀಡುತ್ತಿದ್ದಂತೆ, 2021ರ ಡಿಸೆಂಬರ್ನಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಮಹಜರು ನಡೆಸಿದ್ದಾರೆ. ದೇಗುಲದ ಜಾಗದಲ್ಲಿ ಅಕ್ರಮವಾಗಿ ಟವರ್ ನಿರ್ಮಿಸಲಾಗಿದೆ ಎಂದು ತಹಶೀಲ್ದಾರರಿಗೆ ವರದಿ ನೀಡಿದ್ದಾರೆ. ಆ ವರದಿಯನ್ನು ತಹಶೀಲ್ದಾರರು ಕ್ರಮಕ್ಕೆ ಕೋರಿ ಜಿಲ್ಲಾಧಿಕಾರಿಗೆ ಸಲ್ಲಿಸಿದ್ದಾರೆ.</p>.<p>‘ಈ ಟವರ್ನಿಂದ ಬಂದ ಬಾಡಿಗೆಯನ್ನು ಚೌಡೇಶ್ವರಿ ದೇಗುಲದ ನಿರ್ಮಾಣಕ್ಕೆ ಉಪಯೋಗಿಸುತ್ತಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ’ ಎಂದು ಕಂದಾಯ ಇಲಾಖೆ ಅಧಿಕಾರಿಗಳು ವರದಿಯಲ್ಲಿ ಉಲ್ಲೇಖಿಸಿ<br />ದ್ದಾರೆ.</p>.<p>ಸಬಂಧಿಸಿದ ಇಲಾಖೆಗಳ ಅನುಮತಿ ಪಡೆಯದೆ ಮತ್ತು ಮುಜರಾಯಿ ಇಲಾಖೆ ಗಮನಕ್ಕೂ ತಾರದೆ ಸರ್ಕಾರಿ ಜಮೀನಿನಲ್ಲಿ ಮೊಬೈಲ್ ಟವರ್ ಅಳವಡಿಸಲಾಗಿದೆ. ಮೋಹನ್ ಕುಮಾರ್ ದೂರು ಮತ್ತು ಸ್ಥಳ ಮಹಜರು ನಂತರ ಟವರ್ಗೆ ನೀಡಿದ್ದ ವಿದ್ಯುತ್ ಸಂಪರ್ಕವನ್ನು ಬೆಸ್ಕಾಂ ಕಡಿತಗೊಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ: </strong>ಮಂಚೇನಹಳ್ಳಿ ಹೋಬಳಿಯ ಮಿಣಕಿನಗುರ್ಕಿ ಗ್ರಾಮದ ಚೌಡೇಶ್ವರಿ ದೇವಾಲಯಕ್ಕೆ ಸೇರಿದ ಇನಾಂತಿ ಜಮೀನಿನಲ್ಲಿ ಯಾವುದೇ ಅನುಮತಿ ಪಡೆಯದೆ ಹಿಂದೂಸ್ ಟವರ್ ಲಿಮಿಟೆಡ್ ಕಂಪನಿ ಅಕ್ರಮವಾಗಿ ಮೊಬೈಲ್ ಟವರ್ ನಿರ್ಮಿಸಿದೆ. ಈ ದೇಗುಲ ಮುಜರಾಯಿ ಇಲಾಖೆಗೆ ಸೇರಿದೆ.</p>.<p>ಟವರ್ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿ, ವಿದ್ಯುತ್ ಇಲಾಖೆ ಮತ್ತು ತಾಲ್ಲೂಕು ಆಡಳಿತದಿಂದ ಅನುಮತಿ ಪಡೆಯಬೇಕು. ಮುಜರಾಯಿ ಇಲಾಖೆ ಜಮೀನಿನಲ್ಲಿಯೇ ಟವರ್ ನಿರ್ಮಿಸಿದ್ದರೂ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಯಲಿಲ್ಲವೇ? ವಿದ್ಯುತ್ ಸಂಪರ್ಕ ಪಡೆದಿದ್ದಾದರೂ ಹೇಗೆ? ಹೀಗೆ ಸಾರ್ವಜನಿಕ ವಲಯದಲ್ಲಿ ಈ ಪ್ರಕರಣ ನಾನಾ ಚರ್ಚೆಗಳನ್ನು ಹುಟ್ಟಿಸಿದೆ.</p>.<p>ಚಿಕ್ಕಬಳ್ಳಾಪುರದ ಆರ್ಟಿಐ ಕಾರ್ಯಕರ್ತ ಸಿ. ಮೋಹನ್ ಕುಮಾರ್ ಈ ಅಕ್ರಮ ಮೊಬೈಲ್ ಟವರ್ಗೆ ಸಂಬಂಧಿಸಿದಂತೆ ಮುಜುರಾಯಿ ಇಲಾಖೆ, ತಹಶೀಲ್ದಾರ್ ಕಚೇರಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅಷ್ಟೇ ಏಕೆ ಪ್ರಧಾನಿ ಕಚೇರಿಗೂ ದೂರು ನೀಡಿದ್ದಾರೆ.</p>.<p>ತೋರಿದ್ದು ಒಂದು ಹಾಕಿದ್ದು ಮತ್ತೊಂದು ಕಡೆ:ಮಿಣಕಿನಗುರ್ಕಿಯ ಎಂ. ಕೃಷ್ಣಪ್ಪ ಎಂಬುವವರು ಗ್ರಾಮದ ಸರ್ವೆ ನಂ 69/1ರ 1.03 ಎಕರೆ ಜಮೀನು ಹೊಂದಿದ್ದಾರೆ. ಇಲ್ಲಿ 40*60 ಸುತ್ತಳತೆಯ 2,400 ಅಡಿಗಳ ವ್ಯಾಪ್ತಿಯಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ 2015ರ ಜೂನ್ನಲ್ಲಿ ಕಂಪನಿ ಜತೆ ಕರಾರು ಮಾಡಿಕೊಂಡಿ ದ್ದಾರೆ.ಜಮೀನಿನ ದಾಖಲೆಗಳನ್ನು ಹಿಂದೂಸ್ ಟವರ್ ಲಿಮಿಟೆಡ್ ಕಂಪನಿಗೆ ನೀಡಿದ್ದಾರೆ.</p>.<p>ಆದರೆ, ಇಲ್ಲಿ ಟವರ್ ಅವಳವಡಿಸುವ ಬದಲು ಗ್ರಾಮದ ಸರ್ವೆ ನಂ. 1ರಲ್ಲಿರುವ ಮುಜರಾಯಿ ಇಲಾಖೆಗೆ ಸೇರಿದ ಚೌಡೇಶ್ವರಿ ದೇಗುಲದ ಇನಾಂತಿ ಜಮೀನಿನಲ್ಲಿ ಟವರ್ ನಿರ್ಮಿಸಲಾಗಿದೆ. ಟವರ್ ನಿರ್ಮಾಣಕ್ಕೆ ಯಾವುದೇ ಇಲಾಖೆಯಿಂದಲೂ ಅನುಮತಿ ಪಡೆದಿಲ್ಲ.</p>.<p>ತಹಶೀಲ್ದಾರರಿಗೆಮೋಹನ್ ಕುಮಾರ್ ದೂರು ನೀಡುತ್ತಿದ್ದಂತೆ, 2021ರ ಡಿಸೆಂಬರ್ನಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಮಹಜರು ನಡೆಸಿದ್ದಾರೆ. ದೇಗುಲದ ಜಾಗದಲ್ಲಿ ಅಕ್ರಮವಾಗಿ ಟವರ್ ನಿರ್ಮಿಸಲಾಗಿದೆ ಎಂದು ತಹಶೀಲ್ದಾರರಿಗೆ ವರದಿ ನೀಡಿದ್ದಾರೆ. ಆ ವರದಿಯನ್ನು ತಹಶೀಲ್ದಾರರು ಕ್ರಮಕ್ಕೆ ಕೋರಿ ಜಿಲ್ಲಾಧಿಕಾರಿಗೆ ಸಲ್ಲಿಸಿದ್ದಾರೆ.</p>.<p>‘ಈ ಟವರ್ನಿಂದ ಬಂದ ಬಾಡಿಗೆಯನ್ನು ಚೌಡೇಶ್ವರಿ ದೇಗುಲದ ನಿರ್ಮಾಣಕ್ಕೆ ಉಪಯೋಗಿಸುತ್ತಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ’ ಎಂದು ಕಂದಾಯ ಇಲಾಖೆ ಅಧಿಕಾರಿಗಳು ವರದಿಯಲ್ಲಿ ಉಲ್ಲೇಖಿಸಿ<br />ದ್ದಾರೆ.</p>.<p>ಸಬಂಧಿಸಿದ ಇಲಾಖೆಗಳ ಅನುಮತಿ ಪಡೆಯದೆ ಮತ್ತು ಮುಜರಾಯಿ ಇಲಾಖೆ ಗಮನಕ್ಕೂ ತಾರದೆ ಸರ್ಕಾರಿ ಜಮೀನಿನಲ್ಲಿ ಮೊಬೈಲ್ ಟವರ್ ಅಳವಡಿಸಲಾಗಿದೆ. ಮೋಹನ್ ಕುಮಾರ್ ದೂರು ಮತ್ತು ಸ್ಥಳ ಮಹಜರು ನಂತರ ಟವರ್ಗೆ ನೀಡಿದ್ದ ವಿದ್ಯುತ್ ಸಂಪರ್ಕವನ್ನು ಬೆಸ್ಕಾಂ ಕಡಿತಗೊಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>