ನಗರಸಭೆಯಲ್ಲಿ ಜೆಡಿಎಸ್ 14, ಪಕ್ಷೇತರರು 16, ಕಾಂಗ್ರೆಸ್ 1 ಸೇರಿ ಒಟ್ಟು 31 ಸದಸ್ಯರಿದ್ದಾರೆ. ಡಾ.ಎಂ.ಸಿ.ಸುಧಾಕರ್ ಬಣ ಎಂದು ಗುರುತಿಸಿಕೊಂಡಿರುವ 14 ಪಕ್ಷೇತರರು, ಪಕ್ಷೇತರ ಸದಸ್ಯ ಅಕ್ಷಯ್ ಕುಮಾರ್, ಜೆಡಿಎಸ್ ಬಂಡಾಯ ಸದಸ್ಯ ಮಹ್ಮದ್ಶಫೀಕ್ ಹಾಗೂ ಸಂಸದ ಎಸ್. ಮುನಿಸ್ವಾಮಿ ಗೆಲುವಿನ ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸಿದರು. ಜೆಡಿಎಸ್ನ 13, ಕಾಂಗ್ರೆಸ್ನ ಏಕೈಕ ಸದಸ್ಯ ಜೈಭೀಮ್ ಮುರಳಿ, ಪಕ್ಷೇತರ ಸದಸ್ಯೆ ಇಸ್ರತ್ ಉನ್ನೀಸಾ ಹಾಗೂ ಶಾಸಕ ಎಂ.ಕೃಷ್ಣಾರೆಡ್ಡಿ ಜೆಡಿಎಸ್ ಅಭ್ಯರ್ಥಿಗೆ ಮತ ಚಲಾಯಿಸಿದರು.