ಸತ್ಯಸಾಯಿ ಬಾಬಾ ಅವರ ಸಂದೇಶ ವಾಹಕ ಮಧುಸೂದನ ಸಾಯಿ ಮಾತನಾಡಿ, ‘ಭಾರತವು ತ್ಯಾಗ, ಪುಣ್ಯ ಮತ್ತು ತಪೋ ಭೂಮಿ. ಇಲ್ಲಿನ ಪ್ರತಿಯೊಂದು ಕಾರ್ಯ, ಕ್ರಮ, ಆಚರಣೆ, ಆಚಾರ- ವಿಚಾರಗಳಿಗೂ ತನ್ನದೇ ಆದ ಐತಿಹಾಸಿಕ ಮಹತ್ವವಿದೆ. ನಮ್ಮ ಭವ್ಯ ಪರಂಪರೆಯನ್ನು ಮುಂದಿನ ತಲೆಮಾರುಗಳಿಗೆ ದಾಟಿಸುವ ಸಲುವಾಗಿಯೇ ಹಬ್ಬಹರಿದಿನಗಳು ಆಚರಣೆಯಲ್ಲಿವೆ’ ಎಂದು ತಿಳಿಸಿದರು.