ಚಿಕ್ಕಬಳ್ಳಾಪುರ: ದೇವನಹಳ್ಳಿಯಿಂದ ಜನಧ್ವನಿ ಯಾತ್ರೆ ಮಾಡಿದ್ದೇವೆ. ನಾವು ಸೋತ ಸುಮಾರು 100 ವಿಧಾನ ಸಭಾ ಕ್ಷೇತ್ರಗಳಲ್ಲಿ ಈ ಒಂದು ವರ್ಷದಲ್ಲಿ ಪ್ರವಾಸ ಮಾಡುವುದು ಈ ಯಾತ್ರೆ ಉದ್ದೇಶವಾಗಿದೆ ಎಂದುಕಾಂಗ್ರೆಸ್ ಮುಖಂಡ ಎಂ.ವೀರಪ್ಪ ಮೊಯ್ಲಿ ಹೇಳಿದರು.
ನರೇಂದ್ರ ಮೋದಿ ಬ್ರಿಟಿಷರ ರೀತಿಯ ಮನಸ್ಥಿತಿಯವರು. ದೇಶದ ರೈತರು ಅನ್ನ ನೀರು ಬಿಟ್ಟು ಹೋರಾಟ ಮಾಡುತ್ತಿದ್ದರೂ ಪ್ರಧಾನಿಗೆ ಕೇಳುವ ವ್ಯವಧಾನ ಇಲ್ಲ.
ಗೌರಿಬಿದನೂರಿನ ವಿಧುರಾಶ್ವತದಲ್ಲಿ ಬ್ರಿಟಿಷರ ಗುಂಡಿಗೆ 32 ರೈತರು ಬಲಿಯಾದರು. ಈಗ ಪ್ರತಿಭಟನೆಯಲ್ಲಿ ತೊಗಿದ್ದ 100 ರೈತರು ಮೃತರಾಗಿದ್ದಾರೆ. ಬ್ರಿಟಿಷರಿಗೂ ನರೇಂದ್ರ ಮೋದಿಗೂ ವ್ಯತ್ಯಾಸವಿಲ್ಲ ಎಂದು ಟೀಕಿಸಿದರು.
ಪೆಟ್ರೋಲ್ ಡಿಸೇಲ್ ಅಡುಗೆ ಅನಿಲದ ಬೆಲೆ ಈಗ ಗಣನೀಯವಾಗಿ ಹೆಚ್ಚುತ್ತಿದೆ. ಅಡುಗೆ ಅನಿಲಕ್ಕೆ ನಮ್ಮ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದಾಗ ಐದು ಲಕ್ಷ ಕೋಟಿ ಸಬ್ಸಿಡಿ ಕೊಡುತ್ತಿದ್ದೆವು. ಆದರೆ ಈಗ ಎಲ್ಲವನ್ನೂ ಜನರ ಮೇಲೆ ಹೊರಿಸಲಾಗುತ್ತಿದೆ ಎಂದು ಟೀಕಿಸಿದರು.