<p><strong>ಗುಡಿಬಂಡೆ:</strong> ರಾಜ್ಯದಾದ್ಯಂತ ಜೀತದಾಳುಗಳ ಬಗ್ಗೆ ಸರ್ಕಾರದಿಂದ ಜಾಗೃತಿ ಮೂಡಿಸಬೇಕೆಂದು ಆದೇಶವಿದ್ದರೂ, ಜಿಲ್ಲಾಡಳಿತ ಯಾವುದೇ ಕಾರ್ಯಕ್ರಮ ಮಾಡದೇ ನಿರ್ಲಕ್ಷ್ಯ ಮಾಡಿದೆ ಎಂದು ಜೀವಿಕಾ ಸಂಘಟನೆ ಜಿಲ್ಲಾ ಸಂಚಾಲಕ ನಾರಾಯಣಸ್ವಾಮಿ ಆರೋಪಿಸಿದರು.</p>.<p>ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೀತದಾಳುಗಳ ಬಗ್ಗೆ ಜಿಲ್ಲಾಡಳಿತಕ್ಕೆ ಕಾಳಜಿ ಇಲ್ಲ. ಜೊತೆಗೆ ಜೀತದಾಳುಗಳಿಗೆ ಮಾರಕವಾಗಿರುವ ಎಸ್ಒಪಿ ಯೋಜನೆ ಜಾರಿಗೆ ತಂದಿದ್ದಾರೆ. ಹಾಗಾಗಿ ಇದನ್ನು ಕೈಬಿಡಬೇಕೆಂದು ಕೇಂದ್ರ ಸರ್ಕಾರದ ಒತ್ತಾಯಿಸಿದರು.</p>.<p>ಆಂಜಿನಪ್ಪ, ಡಿಡಿ ಮೂರ್ತಿ, ಮೂರ್ತಿ, ಜೀತದಾಳು ನರಸಿಂಹಮೂರ್ತಿ, ಮುನಿಯಪ್ಪ ಸೇರಿದಂತೆ ಇತರರು ಇದ್ದರು.</p>
<p><strong>ಗುಡಿಬಂಡೆ:</strong> ರಾಜ್ಯದಾದ್ಯಂತ ಜೀತದಾಳುಗಳ ಬಗ್ಗೆ ಸರ್ಕಾರದಿಂದ ಜಾಗೃತಿ ಮೂಡಿಸಬೇಕೆಂದು ಆದೇಶವಿದ್ದರೂ, ಜಿಲ್ಲಾಡಳಿತ ಯಾವುದೇ ಕಾರ್ಯಕ್ರಮ ಮಾಡದೇ ನಿರ್ಲಕ್ಷ್ಯ ಮಾಡಿದೆ ಎಂದು ಜೀವಿಕಾ ಸಂಘಟನೆ ಜಿಲ್ಲಾ ಸಂಚಾಲಕ ನಾರಾಯಣಸ್ವಾಮಿ ಆರೋಪಿಸಿದರು.</p>.<p>ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೀತದಾಳುಗಳ ಬಗ್ಗೆ ಜಿಲ್ಲಾಡಳಿತಕ್ಕೆ ಕಾಳಜಿ ಇಲ್ಲ. ಜೊತೆಗೆ ಜೀತದಾಳುಗಳಿಗೆ ಮಾರಕವಾಗಿರುವ ಎಸ್ಒಪಿ ಯೋಜನೆ ಜಾರಿಗೆ ತಂದಿದ್ದಾರೆ. ಹಾಗಾಗಿ ಇದನ್ನು ಕೈಬಿಡಬೇಕೆಂದು ಕೇಂದ್ರ ಸರ್ಕಾರದ ಒತ್ತಾಯಿಸಿದರು.</p>.<p>ಆಂಜಿನಪ್ಪ, ಡಿಡಿ ಮೂರ್ತಿ, ಮೂರ್ತಿ, ಜೀತದಾಳು ನರಸಿಂಹಮೂರ್ತಿ, ಮುನಿಯಪ್ಪ ಸೇರಿದಂತೆ ಇತರರು ಇದ್ದರು.</p>