ಇದೇ ವೇಳೆ ಹಿರಿಯ ಪತ್ರಕರ್ತರಾದ ಪುಟ್ಟರಾಜು, ಡಿ.ಎನ್.ಕೃಷ್ಣಾರೆಡ್ಡಿ, ಎಸ್.ವಿ.ರವಿಪ್ರಕಾಶ್, ಕೆ.ವಿ.ಮುನೇಗೌಡ, ವಿ.ಡಿ.ಗಣೇಶ್, ಎಸ್.ಎನ್.ಅಂಜಿನಪ್ಪ, ಪತ್ರಿಕಾ ವಿತರಕರಾದ ಲಕ್ಷ್ಮೀನಾರಾಯಣ್, ನವೀನ್ ಕುಮಾರ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಜಿಲ್ಲೆಯ ಪ್ರತಿಭಾನ್ವಿತ ಹಾಗೂ ವಿವಿಧ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 40 ಮಂದಿ ಪತ್ರಕರ್ತರ ಮಕ್ಕಳಿಗೆ ₨2 ಲಕ್ಷ ಪ್ರೋತ್ಸಾಹ ಧನ ಚೆಕ್ ವಿತರಿಸಲಾಯಿತು.