<p><strong>ಶಿಡ್ಲಘಟ್ಟ:</strong> ‘ನಾವು ಪ್ರತಿದಿನ ಶಾಲೆಗೆ ನಾಲ್ಕು ಕಿ.ಮೀ ದೂರದಿಂದ ನಡೆದು ಬರುತ್ತೇವೆ ಮತ್ತು ನಡೆದುಕೊಂಡೆ ಹೋಗುತ್ತೇವೆ. ನಮಗೆ ಯಾವುದೇ ರೀತಿ ವಾಹನ ಸೌಕರ್ಯ ಇಲ್ಲ’ ಎನ್ನುವ ಮರಿಹಳ್ಳಿ ಮಕ್ಕಳನ್ನು ಕಂಡಾಗ ಶಿಕ್ಷಣ ವ್ಯವಸ್ಥೆಯು ಹಳ್ಳಿ ಮಕ್ಕಳಿಗೆ ಸಾಕಷ್ಟು ದೂರದಲ್ಲಿರುವುದು ಗೋಚರವಾಗುತ್ತದೆ.</p> <p>ತಾಲ್ಲೂಕಿನ ಪಲಿಚೆರ್ಲು ಸರ್ಕಾರಿ ಪ್ರೌಢಶಾಲೆಯಲ್ಲಿ ಒಂಬತ್ತು ಮತ್ತು ಹತ್ತನೇ ತರಗತಿಯಲ್ಲಿ 67 ಮಂದಿ ವಿದ್ಯಾರ್ಥಿಗಳಿರದ್ದಾರೆ. ನಾಲ್ವರು ಶಿಕ್ಷಕರಿದ್ದಾರೆ. ಈ ಶಾಲೆಗೆ ಸುತ್ತಲಿನ ಆರು ಕಿ.ಮೀ ಫಾಸಲೆಯಿಂದ ಮಕ್ಕಳು ಕಲಿಯಲು ಬರುತ್ತಾರೆ. ಈ ಹಳ್ಳಿ ಮಕ್ಕಳು ಶಾಲೆಗೆ ನಡೆದೇ ಬರಬೇಕು.</p> <p>ಸರ್ಕಾರ ಶಿಕ್ಷಣ ಉತ್ತೇಜಿಸಲು ಮಕ್ಕಳಿಗೆ ಹತ್ತಿರವಾಗಲು ನಾನಾ ಸವಲತ್ತು ನೀಡುತ್ತಿದ್ದರೂ ಹಳ್ಳಿ ಭಾಗದಲ್ಲಿ ಸಾಕ್ಷರತೆ ಹೆಚ್ಚಾಗದಿರಲು ಈ ರೀತಿಯ ‘ದೂರ‘ ಶಿಕ್ಷಣ ಕಾರಣವಾಗಿದೆ. ಬೆಳೆದ ಹೆಣ್ಣು ಮಕ್ಕಳು ಈ ರೀತಿಯ ಕಾಡುದಾರಿಗಳಲ್ಲಿ ನಡೆದು ಬರಲು ಮನೆಗಳಲ್ಲಿ ಒಪ್ಪದೆ ಹಲವರ ಶಿಕ್ಷಣ ಕುಂಠಿತವಾಗುತ್ತಿದೆ. ಮಳೆ, ಚಳಿ, ಗಾಳಿ, ಬಿಸಿಲೆನ್ನದೆ ನಡೆಯುವ ತ್ರಾಸದಿಂದ ಹಲವರ ವಿದ್ಯಾಭ್ಯಾಸ ನಿಲ್ಲುತ್ತಿದೆ.</p> <p>ಈ ಪ್ರೌಢಶಾಲೆಯಲ್ಲಿ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಂಠಿತವಾಗಲು ಮಕ್ಕಳಿಗೆ ‘ದೂರ‘ದಲ್ಲಿರುವ ಶೈಕ್ಷಣಿಕ ವ್ಯವಸ್ಥೆ ಕಾರಣವಾಗಿದೆ.</p> <p>ಈಗಾಗಲೇ ತಾಲ್ಲೂಕಿನ ಗೌಡನಹಳ್ಳಿ ಸರ್ಕಾರಿ ಶಾಲೆ ದಾನಿಗಳ ನೆರವಿನಿಂದ ಬಸ್ ಹೊಂದಿದೆ. ಸುತ್ತಮುತ್ತಲಿನ ಹಳ್ಳಿಗಳಿಂದ ಮಕ್ಕಳನ್ನು ಕರೆದುಕೊಂಡು ಬರುವ ಮೂಲಕ ಮಕ್ಕಳ ಸಂಖ್ಯೆ ಹೆಚ್ಚಿಸಿಕೊಂಡಿದೆ. ಪಲಿಚೆರ್ಲು ಶಾಲೆಗೂ ಈ ಸೌಕರ್ಯ ಸಿಕ್ಕರೆ ಇನ್ನಷ್ಟು ಮಕ್ಕಳ ಸಂಖ್ಯೆ ಹೆಚ್ಚಳವಾಗಲಿದೆ.</p> <p>ಪಲಿಚೆರ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 100 ಮಂದಿ ವಿದ್ಯಾರ್ಥಿಗಳಿದ್ದಾರೆ. ಇಲ್ಲಿಗೆ ಕೂಡ ಸುತ್ತಮುತ್ತಲಿನ ನಾಲ್ಕಾರು ಹಳ್ಳಿಗಳಿಂದ ವಿದ್ಯಾರ್ಥಿಗಳು ನಡೆದುಕೊಂಡು ಬರಬೇಕು. ಸುಬ್ಬರಾಯನಹಳ್ಳಿ, ಈಗ್ಲೆಟ್ಟಹಳ್ಳಿ, ಬೈರಗಾನಹಳ್ಳಿ, ತಿಮ್ಮಸಂದ್ರ, ಬಳೇಹೊಸಹಳ್ಳಿ, ಮರಿಹಳ್ಳಿ, ಮುಮ್ಮನಹಳ್ಳಿ ಮುಂತಾದ ದೂರದ ಹಳ್ಳಿಗಳಿಂದ ಮಕ್ಕಳು ಈ ಶಾಲೆಗೆ ಬರುತ್ತಾರೆ.</p> <h2>ಹಳ್ಳಿ ಮಕ್ಕಳ ಶಿಕ್ಷಣಕ್ಕೆ ಒತ್ತು</h2><p>ಹಳ್ಳಿ ಮಕ್ಕಳು ಪ್ರತಿಭೆಯುಳ್ಳವರು. ಅವರಿಗೆ ಶಾಲೆಯಲ್ಲಿ ಶಿಕ್ಷಣವೂ ಸೇರಿದಂತೆ ಎಲ್ಲ ಸವಲತ್ತು ಸಿಗುತ್ತವೆಯಾದರೂ ಅವರು ದೂರದಿಂದ ಬರಬೇಕೆಂಬ ಕಾರಣದಿಂದ ಶಾಲೆಗೆ ತಪ್ಪಿಸಿಕೊಳ್ಳುವುದು, ಬಾರದಿರುವುದು ಮತ್ತು ಓದನ್ನು ನಿಲ್ಲಿಸುವುದೂ ಆಗುತ್ತಿದೆ. ಇದಕ್ಕೆ ಪರಿಹಾರ ಸಿಕ್ಕರೆ ಈ ಭಾಗದ ಶೈಕ್ಷಣಿಕ ಪ್ರಗತಿ ಆಗುತ್ತದೆ.</p><p><strong>ರೂಪ, ಶಿಕ್ಷಕಿ</strong></p>.<h2>ಬಸ್ ವ್ಯವಸ್ಥೆ ಕಲ್ಪಿಸಿ</h2><p>ಪ್ರತಿದಿನ ಸುಮಾರು ನಾಲ್ಕು ಕಿ.ಮೀ ದೂರ ಕಾಡದಾರಿಯಲ್ಲಿ ಶಾಲೆಗೆ ನಡೆದುಕೊಂಡು ಹೋಗಬೇಕು. ಮಳೆಯಿರಲಿ, ಬಿಸಿಲಿರಲಿ ಓದಬೇಕೆಂಬ ಹಂಬಲದಿಂದ ನಡೆಯುತ್ತೇವೆ. ನಮಗೆ ಬಸ್ ವ್ಯವಸ್ಥೆ ಮಾಡಿಕೊಟ್ಟರೆ ಅನುಕೂಲವಾಗುತ್ತದೆ.</p><p><strong>ತ್ರಿಷಾ ಮತ್ತುಅರುಣ್ ಕುಮಾರ್, ವಿದ್ಯಾರ್ಥಿಗಳು</strong></p>.<h2>ದೂರದ ನಡಿಗೆ</h2><p>ಪಲಿಚೆರ್ಲು ಸರ್ಕಾರಿ ಪ್ರೌಢಶಾಲೆಗೆ ವಿವಿಧ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳು</p><p>l ಮರಿಹಳ್ಳಿ 4 ಕಿ.ಮೀ 15</p><p>l ಮುಮ್ಮನಹಳ್ಳಿ 4 ಕಿ.ಮೀ 5</p><p>l ತೋಕಲಹಳ್ಳಿ 6 ಕಿ.ಮೀ 3</p><p>l ಸೋಮನಹಳ್ಳಿ 2 ಕಿ.ಮೀ 8</p><p>l ಕನ್ನಪ್ಪನಹಳ್ಳಿ 4 ಕಿ.ಮೀ 18</p><p>ಪಲಿಚೆರ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿವಿಧ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳು</p><p>l ಮರಿಹಳ್ಳಿ 4 ಕಿ.ಮೀ 20</p><p>l ಮುಮ್ಮನಹಳ್ಳಿ 4 ಕಿ.ಮೀ 5</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಡ್ಲಘಟ್ಟ:</strong> ‘ನಾವು ಪ್ರತಿದಿನ ಶಾಲೆಗೆ ನಾಲ್ಕು ಕಿ.ಮೀ ದೂರದಿಂದ ನಡೆದು ಬರುತ್ತೇವೆ ಮತ್ತು ನಡೆದುಕೊಂಡೆ ಹೋಗುತ್ತೇವೆ. ನಮಗೆ ಯಾವುದೇ ರೀತಿ ವಾಹನ ಸೌಕರ್ಯ ಇಲ್ಲ’ ಎನ್ನುವ ಮರಿಹಳ್ಳಿ ಮಕ್ಕಳನ್ನು ಕಂಡಾಗ ಶಿಕ್ಷಣ ವ್ಯವಸ್ಥೆಯು ಹಳ್ಳಿ ಮಕ್ಕಳಿಗೆ ಸಾಕಷ್ಟು ದೂರದಲ್ಲಿರುವುದು ಗೋಚರವಾಗುತ್ತದೆ.</p> <p>ತಾಲ್ಲೂಕಿನ ಪಲಿಚೆರ್ಲು ಸರ್ಕಾರಿ ಪ್ರೌಢಶಾಲೆಯಲ್ಲಿ ಒಂಬತ್ತು ಮತ್ತು ಹತ್ತನೇ ತರಗತಿಯಲ್ಲಿ 67 ಮಂದಿ ವಿದ್ಯಾರ್ಥಿಗಳಿರದ್ದಾರೆ. ನಾಲ್ವರು ಶಿಕ್ಷಕರಿದ್ದಾರೆ. ಈ ಶಾಲೆಗೆ ಸುತ್ತಲಿನ ಆರು ಕಿ.ಮೀ ಫಾಸಲೆಯಿಂದ ಮಕ್ಕಳು ಕಲಿಯಲು ಬರುತ್ತಾರೆ. ಈ ಹಳ್ಳಿ ಮಕ್ಕಳು ಶಾಲೆಗೆ ನಡೆದೇ ಬರಬೇಕು.</p> <p>ಸರ್ಕಾರ ಶಿಕ್ಷಣ ಉತ್ತೇಜಿಸಲು ಮಕ್ಕಳಿಗೆ ಹತ್ತಿರವಾಗಲು ನಾನಾ ಸವಲತ್ತು ನೀಡುತ್ತಿದ್ದರೂ ಹಳ್ಳಿ ಭಾಗದಲ್ಲಿ ಸಾಕ್ಷರತೆ ಹೆಚ್ಚಾಗದಿರಲು ಈ ರೀತಿಯ ‘ದೂರ‘ ಶಿಕ್ಷಣ ಕಾರಣವಾಗಿದೆ. ಬೆಳೆದ ಹೆಣ್ಣು ಮಕ್ಕಳು ಈ ರೀತಿಯ ಕಾಡುದಾರಿಗಳಲ್ಲಿ ನಡೆದು ಬರಲು ಮನೆಗಳಲ್ಲಿ ಒಪ್ಪದೆ ಹಲವರ ಶಿಕ್ಷಣ ಕುಂಠಿತವಾಗುತ್ತಿದೆ. ಮಳೆ, ಚಳಿ, ಗಾಳಿ, ಬಿಸಿಲೆನ್ನದೆ ನಡೆಯುವ ತ್ರಾಸದಿಂದ ಹಲವರ ವಿದ್ಯಾಭ್ಯಾಸ ನಿಲ್ಲುತ್ತಿದೆ.</p> <p>ಈ ಪ್ರೌಢಶಾಲೆಯಲ್ಲಿ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಂಠಿತವಾಗಲು ಮಕ್ಕಳಿಗೆ ‘ದೂರ‘ದಲ್ಲಿರುವ ಶೈಕ್ಷಣಿಕ ವ್ಯವಸ್ಥೆ ಕಾರಣವಾಗಿದೆ.</p> <p>ಈಗಾಗಲೇ ತಾಲ್ಲೂಕಿನ ಗೌಡನಹಳ್ಳಿ ಸರ್ಕಾರಿ ಶಾಲೆ ದಾನಿಗಳ ನೆರವಿನಿಂದ ಬಸ್ ಹೊಂದಿದೆ. ಸುತ್ತಮುತ್ತಲಿನ ಹಳ್ಳಿಗಳಿಂದ ಮಕ್ಕಳನ್ನು ಕರೆದುಕೊಂಡು ಬರುವ ಮೂಲಕ ಮಕ್ಕಳ ಸಂಖ್ಯೆ ಹೆಚ್ಚಿಸಿಕೊಂಡಿದೆ. ಪಲಿಚೆರ್ಲು ಶಾಲೆಗೂ ಈ ಸೌಕರ್ಯ ಸಿಕ್ಕರೆ ಇನ್ನಷ್ಟು ಮಕ್ಕಳ ಸಂಖ್ಯೆ ಹೆಚ್ಚಳವಾಗಲಿದೆ.</p> <p>ಪಲಿಚೆರ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 100 ಮಂದಿ ವಿದ್ಯಾರ್ಥಿಗಳಿದ್ದಾರೆ. ಇಲ್ಲಿಗೆ ಕೂಡ ಸುತ್ತಮುತ್ತಲಿನ ನಾಲ್ಕಾರು ಹಳ್ಳಿಗಳಿಂದ ವಿದ್ಯಾರ್ಥಿಗಳು ನಡೆದುಕೊಂಡು ಬರಬೇಕು. ಸುಬ್ಬರಾಯನಹಳ್ಳಿ, ಈಗ್ಲೆಟ್ಟಹಳ್ಳಿ, ಬೈರಗಾನಹಳ್ಳಿ, ತಿಮ್ಮಸಂದ್ರ, ಬಳೇಹೊಸಹಳ್ಳಿ, ಮರಿಹಳ್ಳಿ, ಮುಮ್ಮನಹಳ್ಳಿ ಮುಂತಾದ ದೂರದ ಹಳ್ಳಿಗಳಿಂದ ಮಕ್ಕಳು ಈ ಶಾಲೆಗೆ ಬರುತ್ತಾರೆ.</p> <h2>ಹಳ್ಳಿ ಮಕ್ಕಳ ಶಿಕ್ಷಣಕ್ಕೆ ಒತ್ತು</h2><p>ಹಳ್ಳಿ ಮಕ್ಕಳು ಪ್ರತಿಭೆಯುಳ್ಳವರು. ಅವರಿಗೆ ಶಾಲೆಯಲ್ಲಿ ಶಿಕ್ಷಣವೂ ಸೇರಿದಂತೆ ಎಲ್ಲ ಸವಲತ್ತು ಸಿಗುತ್ತವೆಯಾದರೂ ಅವರು ದೂರದಿಂದ ಬರಬೇಕೆಂಬ ಕಾರಣದಿಂದ ಶಾಲೆಗೆ ತಪ್ಪಿಸಿಕೊಳ್ಳುವುದು, ಬಾರದಿರುವುದು ಮತ್ತು ಓದನ್ನು ನಿಲ್ಲಿಸುವುದೂ ಆಗುತ್ತಿದೆ. ಇದಕ್ಕೆ ಪರಿಹಾರ ಸಿಕ್ಕರೆ ಈ ಭಾಗದ ಶೈಕ್ಷಣಿಕ ಪ್ರಗತಿ ಆಗುತ್ತದೆ.</p><p><strong>ರೂಪ, ಶಿಕ್ಷಕಿ</strong></p>.<h2>ಬಸ್ ವ್ಯವಸ್ಥೆ ಕಲ್ಪಿಸಿ</h2><p>ಪ್ರತಿದಿನ ಸುಮಾರು ನಾಲ್ಕು ಕಿ.ಮೀ ದೂರ ಕಾಡದಾರಿಯಲ್ಲಿ ಶಾಲೆಗೆ ನಡೆದುಕೊಂಡು ಹೋಗಬೇಕು. ಮಳೆಯಿರಲಿ, ಬಿಸಿಲಿರಲಿ ಓದಬೇಕೆಂಬ ಹಂಬಲದಿಂದ ನಡೆಯುತ್ತೇವೆ. ನಮಗೆ ಬಸ್ ವ್ಯವಸ್ಥೆ ಮಾಡಿಕೊಟ್ಟರೆ ಅನುಕೂಲವಾಗುತ್ತದೆ.</p><p><strong>ತ್ರಿಷಾ ಮತ್ತುಅರುಣ್ ಕುಮಾರ್, ವಿದ್ಯಾರ್ಥಿಗಳು</strong></p>.<h2>ದೂರದ ನಡಿಗೆ</h2><p>ಪಲಿಚೆರ್ಲು ಸರ್ಕಾರಿ ಪ್ರೌಢಶಾಲೆಗೆ ವಿವಿಧ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳು</p><p>l ಮರಿಹಳ್ಳಿ 4 ಕಿ.ಮೀ 15</p><p>l ಮುಮ್ಮನಹಳ್ಳಿ 4 ಕಿ.ಮೀ 5</p><p>l ತೋಕಲಹಳ್ಳಿ 6 ಕಿ.ಮೀ 3</p><p>l ಸೋಮನಹಳ್ಳಿ 2 ಕಿ.ಮೀ 8</p><p>l ಕನ್ನಪ್ಪನಹಳ್ಳಿ 4 ಕಿ.ಮೀ 18</p><p>ಪಲಿಚೆರ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿವಿಧ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳು</p><p>l ಮರಿಹಳ್ಳಿ 4 ಕಿ.ಮೀ 20</p><p>l ಮುಮ್ಮನಹಳ್ಳಿ 4 ಕಿ.ಮೀ 5</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>