ಚಿಕ್ಕಬಳ್ಳಾಪುರ: ನಗರದಲ್ಲಿ ಜೈನ ಸಮಾಜದಿಂದ ಗುರುವಾರ ಮಹಾವೀರ ಜಯಂತಿ ಸಂಭ್ರಮದಿಂದ ನಡೆಯಿತು. ನಗರದ ಬಿ.ಬಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಮಹಾವೀರರ ಮೂರ್ತಿಯ ಮೆರವಣಿಗೆ ಜರುಗಿತು.
ಇದಕ್ಕೂ ಮುನ್ನ ನಗರದ ಜೈನ ಮಂದಿರದಲ್ಲಿ ಮಹಾವೀರ ಜೈನ ಸಂಘ ಮತ್ತು ಮಹಾವೀರ ಜೈನ ಯುವಕರ ಮಂಡಳಿಯು ಹಮ್ಮಿಕೊಂಡಿದ್ದ ಮಹಾವೀರ ಜಯಂತಿಯನ್ನು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಉದ್ಘಾಟಿಸಿದರು.
ಜೈನ ಸಮಾಜವು ಅಹಿಂಸೆಯನ್ನು ಪ್ರತಿಪಾದಿಸುತ್ತದೆ. ಮಹಾವೀರರು ಸಮಾಜಕ್ಕೆ ಉದಾತ್ತವಾದ ಸಂದೇಶಗಳನ್ನು ನೀಡಿದ್ದಾರೆ. ಆ ಸಂದೇಶಗಳ ಅಡಿಯನ್ನು ನಾವು ಮುನ್ನಡೆಯಬೇಕು ಎಂದರು.