<p><strong>ಚಿಂತಾಮಣಿ (ಚಿಕ್ಕಬಳ್ಳಾಪುರ):</strong>‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೇಕಪ್ ಮಾಡಿಕೊಂಡು ದೂರದರ್ಶನದಲ್ಲಿ ಮಾತನಾಡುವ ಅವಕಾಶ ಹೇಗೆ ದೊರೆಯಿತು ಎಂದು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ’ ಎಂದುಶಾಸಕ ಕೆ.ಆರ್. ರಮೇಶ್ ಕುಮಾರ್ಶುಕ್ರವಾರ ಲೇವಡಿ ಮಾಡಿದ್ದಾರೆ.</p>.<p>ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು,‘ಕಾಂಗ್ರೆಸ್ ಪಕ್ಷದ ತ್ಯಾಗ, ಬಲಿದಾನದಿಂದ ಇಂದು ಅವರು ಅಧಿಕಾರ ಅನುಭವಿಸುತ್ತಿದ್ದಾರೆ. ಧ್ವಜವನ್ನು ಹಿಡಿದು ಭಾರತ್ ಮಾತಾ ಕೀ ಜೈ ಎನ್ನುತ್ತಾರೆ. ಧ್ವಜವನ್ನು ಕೊಟ್ಟವರು ಯಾರು, ಮಾತಾಡುವ ಸ್ವಾತಂತ್ರ್ಯವನ್ನು ಕೊಟ್ಟವರು ಯಾರೆಂಬುದನ್ನು ಒಮ್ಮೆ ನೆನಪಿಸಿಕೊಳ್ಳಲಿ’ ಎಂದರು.</p>.<p><strong>ಓದಿ:</strong><a href="https://www.prajavani.net/karnataka-news/farmers-bills-repealed-due-to-fear-of-loss-mallikarjuna-temple-889499.html" itemprop="url">ಸೋಲಿನಿಂದ ಎಚ್ಚೆತ್ತು ಕೃಷಿ ಕಾಯ್ದೆ ವಾಪಸ್: ಮಲ್ಲಿಕಾರ್ಜುನ ಖರ್ಗೆ </a></p>.<p>‘ದೇಶಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ಏನೂ ಇಲ್ಲ ಎಂದು ಪ್ರಧಾನಿ ಮೋದಿ ಎಲ್ಲಾ ಕಡೆ ಹೇಳುತ್ತಾರೆ. ಕೋಟ್ಯಂತರ ಕಾರ್ಯಕರ್ತರು, ಮುಖಂಡರ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದರಿಂದಲೇ ಬಿಜೆಪಿ ಇಂದು ಅಧಿಕಾರ ಅನುಭವಿಸುತ್ತಿದೆ. ಮೋದಿ ಪ್ರಧಾನಿ ಆಗಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.</p>.<p>‘ಮಾತೆತ್ತಿದರೆ ಬಿಜೆಪಿಯವರು ನಾವು ರಾಮನ ಭಕ್ತರು,ರಾಮಮಂದಿರ ಎನ್ನುತ್ತಾರೆ. ನಾವೂ ರಾಮನ ಭಕ್ತರೇ. ರಾಮಮಂದಿರ ಕಟ್ಟಬೇಡಿ ಎಂದು ನಾವು ಎಂದೂ ಹೇಳಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂತಾಮಣಿ (ಚಿಕ್ಕಬಳ್ಳಾಪುರ):</strong>‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೇಕಪ್ ಮಾಡಿಕೊಂಡು ದೂರದರ್ಶನದಲ್ಲಿ ಮಾತನಾಡುವ ಅವಕಾಶ ಹೇಗೆ ದೊರೆಯಿತು ಎಂದು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ’ ಎಂದುಶಾಸಕ ಕೆ.ಆರ್. ರಮೇಶ್ ಕುಮಾರ್ಶುಕ್ರವಾರ ಲೇವಡಿ ಮಾಡಿದ್ದಾರೆ.</p>.<p>ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು,‘ಕಾಂಗ್ರೆಸ್ ಪಕ್ಷದ ತ್ಯಾಗ, ಬಲಿದಾನದಿಂದ ಇಂದು ಅವರು ಅಧಿಕಾರ ಅನುಭವಿಸುತ್ತಿದ್ದಾರೆ. ಧ್ವಜವನ್ನು ಹಿಡಿದು ಭಾರತ್ ಮಾತಾ ಕೀ ಜೈ ಎನ್ನುತ್ತಾರೆ. ಧ್ವಜವನ್ನು ಕೊಟ್ಟವರು ಯಾರು, ಮಾತಾಡುವ ಸ್ವಾತಂತ್ರ್ಯವನ್ನು ಕೊಟ್ಟವರು ಯಾರೆಂಬುದನ್ನು ಒಮ್ಮೆ ನೆನಪಿಸಿಕೊಳ್ಳಲಿ’ ಎಂದರು.</p>.<p><strong>ಓದಿ:</strong><a href="https://www.prajavani.net/karnataka-news/farmers-bills-repealed-due-to-fear-of-loss-mallikarjuna-temple-889499.html" itemprop="url">ಸೋಲಿನಿಂದ ಎಚ್ಚೆತ್ತು ಕೃಷಿ ಕಾಯ್ದೆ ವಾಪಸ್: ಮಲ್ಲಿಕಾರ್ಜುನ ಖರ್ಗೆ </a></p>.<p>‘ದೇಶಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ಏನೂ ಇಲ್ಲ ಎಂದು ಪ್ರಧಾನಿ ಮೋದಿ ಎಲ್ಲಾ ಕಡೆ ಹೇಳುತ್ತಾರೆ. ಕೋಟ್ಯಂತರ ಕಾರ್ಯಕರ್ತರು, ಮುಖಂಡರ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದರಿಂದಲೇ ಬಿಜೆಪಿ ಇಂದು ಅಧಿಕಾರ ಅನುಭವಿಸುತ್ತಿದೆ. ಮೋದಿ ಪ್ರಧಾನಿ ಆಗಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.</p>.<p>‘ಮಾತೆತ್ತಿದರೆ ಬಿಜೆಪಿಯವರು ನಾವು ರಾಮನ ಭಕ್ತರು,ರಾಮಮಂದಿರ ಎನ್ನುತ್ತಾರೆ. ನಾವೂ ರಾಮನ ಭಕ್ತರೇ. ರಾಮಮಂದಿರ ಕಟ್ಟಬೇಡಿ ಎಂದು ನಾವು ಎಂದೂ ಹೇಳಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>