ಶಿಡ್ಲಘಟ್ಟ: ಕರ್ನಾಟಕ ಜಾನಪದ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷಎ.ಎಂ.ತ್ಯಾಗರಾಜ್ ಅವರಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅವರು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಇತ್ತೀಚೆಗೆ ‘ಗುರುಕುಲ ಚಾಣಕ್ಯ ಪ್ರಶಸ್ತಿ’ ಸಹ ಪಡೆದಿದ್ದರು. ಈ ಪ್ರಶಸ್ತಿಯನ್ನು ತುಮಕೂರಿನ ಗುರುಕುಲ ಕಲಾ ಪ್ರತಿಷ್ಠಾನದಿಂದ ನೀಡಲಾಗಿತ್ತು.
ನಿರಂತರವಾಗಿ ಕನ್ನಡ ಕಾರ್ಯಕ್ರಮಗಳನ್ನು ಜಿಲ್ಲೆ ಮತ್ತು ತಾಲ್ಲೂಕಿನಲ್ಲಿ ಎ.ಎಂ.ತ್ಯಾಗರಾಜ್ ನಡೆಸುತ್ತಿದ್ದಾರೆ. ಕಸಾಪ ಅಧ್ಯಕ್ಷರಾಗಿದ್ದ ವೇಳೆ ತಾಲ್ಲೂಕಿನಲ್ಲಿ ವಿವಿಧ ಕನ್ನಡ ಕಾರ್ಯಕ್ರಮಗಳನ್ನು ಸಂಘಟಿಸಿದ್ದರು.