ತಾಲ್ಲೂಕಿನ ತಿಪ್ಪೇನಹಳ್ಳಿಯಲ್ಲಿ ಗುರುವಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ’ಪ್ರೀತಿ, ಗೌರವದಿಂದ ಐದು ವರ್ಷಕ್ಕೆ ಆಯ್ಕೆ ಮಾಡಿದವರನ್ನು ಒಂದೇ ಒಂದು ಮಾತು ಕೇಳದೆ ಮಿನಾಮೇಷ ಎಣಿಸಿ ರಾಜೀನಾಮೆ ಕೊಟ್ಟು, ಜನರಲ್ಲಿ ಸಂಶಯ ಹುಟ್ಟಿಸಿ, ಈಗ ಅಭಿವೃದ್ಧಿಯ ಮಂಕುಬೂದಿ ಎರಚಲು ಹೋದರೆ ಜನ ದಡ್ಡರಾ? ಮತದಾರರ ಅಭಿಪ್ರಾಯ ಕೇಳದೆ ನಿನ್ನಷ್ಟಕ್ಕೆ ನೀನೇ ತೀರ್ಮಾನ ತೆಗೆದುಕೊಳ್ಳಲು ನೀನೇನು ಸರ್ವಾಧಿಕಾರಿಯಾ’ ಎಂದು ಪರೋಕ್ಷವಾಗಿ ಅನರ್ಹ ಶಾಸಕ ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದರು.