<p><strong>ಗೌರಿಬಿದನೂರು</strong>: ಚಿಮುಲ್ ಚುನಾವಣೆಯಲ್ಲಿ ಹಾಲು ಮಾರುವವರಿಗಿಂತ ಆಲ್ಕೊಹಾಲ್ ಮಾರುವ ಮೂವರು ಅಭ್ಯರ್ಥಿಗಳಾಗಿದ್ದಾರೆ ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಬೆಂಬಲಿತ ಅಭ್ಯರ್ಥಿಗಳ ಕುರಿತು ಮಾಜಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಲೇವಡಿ ಮಾಡಿದರು.</p>.<p>ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ಸೋಮವಾರ ಕಾಂಗ್ರೆಸ್ ಬೆಂಬಲಿತರ ಆಯ್ಕೆಗೆ ನಡೆದ ಸಭೆ ಉದ್ದೇಶಿಸಿ ಮಾತನಾಡಿದರು.</p>.<p>‘ನಮ್ಮ ಅಭ್ಯರ್ಥಿಗಳು ಹೈನುಗಾರಿಕೆ ಮಾಡುವರು. ರೈತರ ಸಮಸ್ಯೆಗಳನ್ನು ಅರಿತಿದ್ದಾರೆ’ ಎಂದು ಹೇಳಿದರು.</p>.<p>‘ಮಂಚೇನಹಳ್ಳಿ ಮತ್ತು ಗೌರಿಬಿದನೂರು ಕ್ಷೇತ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಮಧ್ಯಸ್ಥಿಕೆಯಲ್ಲಿ ಅವಿರೋಧ ಆಯ್ಕೆಗೆ ತೀರ್ಮಾನಿಸಿದ್ದೆವು. ಆದರೆ ರಾತ್ರೋರಾತ್ರಿ ನಮ್ಮ ಅಭ್ಯರ್ಥಿ ಡಿ.ಎನ್.ವೆಂಕಟರೆಡ್ಡಿ ಕೆಎಚ್ಪಿ ಬಣಕ್ಕೆ ಸೇರ್ಪಡೆಯಾಗಿದ್ದರಿಂದಾಗಿ ಚುನಾವಣೆ ಅನಿವಾರ್ಯವಾಯಿತು’ ಎಂದು ಹೇಳಿದರು.</p>.<p>ನಗರದ ಹೊರವಲಯದಲ್ಲಿ ಕೋಚಿಮುಲ್ನಿಂದ ಸ್ಥಾಪಿಸಿದ್ದ ಹಾಲು ಶೀತಲೀಕರಣ ಘಟಕವನ್ನು ನಮ್ಮ ಕ್ಷೇತ್ರದ ಹಿಂದಿನ ನಿರ್ದೇಶಕರು ತಮ್ಮ ಸ್ವಾರ್ಥಕ್ಕಾಗಿ ಬಿಎಂಸಿಗಳನ್ನು ತೆರೆದು ಘಟಕವನ್ನು ಶಾಶ್ವತವಾಗಿ ಮುಚ್ಚುವಂತೆ ಮಾಡಿದರು. ಇದು ಜೆ.ಕಾಂತರಾಜು, ಸುನಂದಮ್ಮ ಸಾಧನೆ ಎಂದರು.</p>.<p>ಕೋಚಿಮುಲ್ ಹಿಂದಿನ ನಿರ್ದೇಶಕರು ಹಾಲು ಶೀತಲೀಕರಣ ಘಟಕವನ್ನು ಮುಚ್ಚಿ ಒಂದೊಂದು ಬಿಎಂಸಿಗೆ ₹5 ಲಕ್ಷ ಕಿಕ್ಬ್ಯಾಕ್ ಪಡೆದುಕೊಂಡಿದ್ದಾರೆ. ಶೀತಲೀಕರಣ ಘಟಕದ ಕಾರ್ಮಿಕರು ಕೆಲಸ ಕಳೆದುಕೊಳ್ಳವಂತಾಯಿತು ಎಂದು ದೂರಿದರು.</p>.<p>ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ರೈತರು ಮತ್ತು ಬಂಡವಾಳಶಾಹಿಗಳ ನಡುವೆ ಚಿಮುಲ್ ಚುನಾವಣೆ ನಡೆಯುತ್ತಿದೆ. ರೈತರು ಸ್ವಾಭಿಮಾನಿಗಳು. ಬಂಡವಾಳಶಾಹಿಗಳನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದರು.</p>.<p>ಜಿ.ಪಂ. ಮಾಜಿ ಅಧ್ಯಕ್ಷ ಎಚ್.ವಿ.ಮಂಜುನಾಥ್ ಮಾತನಾಡಿ, ಈ ಹಿಂದೆ ಕೋಚಿಮುಲ್ ನಿರ್ದೇಶಕರಾದ ಜೆ.ಕಾಂತರಾಜು ವಿರುದ್ದವೇ ಈಗಿನ ಗೌರಿಬಿದನೂರು ಕ್ಷೇತ್ರದ ಅಭ್ಯರ್ಥಿ ಡಿ.ಎನ್.ವೆಂಕಟರೆಡ್ಡಿ ಹಾಲಿನ ದರ ಇಳಿಕೆ ಹಾಗೂ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಪ್ರತಿಭಟಿಸಿದ್ದರು. ಇಂದು ಇಬ್ಬರೂ ಕೆಎಚ್ಪಿ ಬಣದ ಅಭ್ಯರ್ಥಿಗಳಾಗಿದ್ದಾರೆ ಎಂದರು.</p>.<p>ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೇದಲವೇಣಿ ವೇಣು, ಅಶ್ವತ್ಥನಾರಾಯಣಗೌಡ, ಎಚ್.ಎನ್.ಪ್ರಕಾಶ್ರೆಡ್ಡಿ, ತಾರಾನಾಥ್, ತೊಂಡೇಬಾವಿ ಗಿರೀಶ್ರೆಡ್ಡಿ, ಮಾರ್ಕೆಟ್ ನಾಗರಾಜ್, ಗಂಗಾಧರಪ್ಪ, ಭಾರ್ಗವರೆಡ್ಡಿ, ವಿಶ್ವನಾಥ್, ಶ್ರೀನಿವಾಸಗೌಡ, ಲಕ್ಷ್ಮಿನಾರಾಯಣ್, ಗೋಪಾಲ್, ವೀರಪ್ಪ, ಹಿದಾಯಿತ್, ವಲಿಸಾಬ್ ಸಭೆಯಲ್ಲಿ ಪಾಲ್ಗೊಂಡಿದ್ದರು.</p>.<p> <strong>ಅಭ್ಯರ್ಥಿಗಳ ಘೋಷಣೆ</strong> </p><p>ಚಿಮುಲ್ ಚುನಾವಣೆಗೆ ಗೌರಿಬಿದನೂರು ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಅಭ್ಯಥಿಯಾಗಿ ಮಂಡಿಕಲ್ ದಿನೇಶ್ ತೊಂಡೇಬಾವಿ ಕ್ಷೇತ್ರದ ಅಭ್ಯರ್ಥಿಯಾಗಿ ನಾಗರಾಜ್ ಅವರನ್ನು ಕಣಕ್ಕಿಳಿಸಲಾಗಿದೆ. ಮಹಿಳಾ ಅಭ್ಯರ್ಥಿಯನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಶಿವಶಂಕರ ರೆಡ್ಡಿ ತಿಳಿಸಿದರು.</p>.<p> <strong>‘ಇಲ್ಲಿನ ಗುತ್ತಿಗೆದಾರರ ಪಾಡೇನು’</strong> </p><p>ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಡೋಂಗಿ ರಾಜಕಾರಣ ಮಾಡುತ್ತಿದ್ದಾರೆ. ನಾನು ತಂದಿರುವ ಕಾಮಗಾರಿಗಳನ್ನು ಉದ್ಘಾಟಿಸುತ್ತಿದ್ದಾರೆ.ಒಂದೇ ಒಂದು ಶಾಶ್ವತ ಅಭಿವೃದ್ಧಿ ಯೋಜನೆಯಾಗಿಲ್ಲ. ಕಾಮಗಾರಿಗಳ ಗುತ್ತಿಗೆದಾರರು ಸಹ ಇವರ ಕಡೆಯವರೇ ಆಗಿದ್ದಾರೆ. ಇಲ್ಲಿನವರ ಪಾಡೇನು ಎಂದು ಶಿವಶಂಕರ ರೆಡ್ಡಿ ಪ್ರಶ್ನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೌರಿಬಿದನೂರು</strong>: ಚಿಮುಲ್ ಚುನಾವಣೆಯಲ್ಲಿ ಹಾಲು ಮಾರುವವರಿಗಿಂತ ಆಲ್ಕೊಹಾಲ್ ಮಾರುವ ಮೂವರು ಅಭ್ಯರ್ಥಿಗಳಾಗಿದ್ದಾರೆ ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಬೆಂಬಲಿತ ಅಭ್ಯರ್ಥಿಗಳ ಕುರಿತು ಮಾಜಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಲೇವಡಿ ಮಾಡಿದರು.</p>.<p>ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ಸೋಮವಾರ ಕಾಂಗ್ರೆಸ್ ಬೆಂಬಲಿತರ ಆಯ್ಕೆಗೆ ನಡೆದ ಸಭೆ ಉದ್ದೇಶಿಸಿ ಮಾತನಾಡಿದರು.</p>.<p>‘ನಮ್ಮ ಅಭ್ಯರ್ಥಿಗಳು ಹೈನುಗಾರಿಕೆ ಮಾಡುವರು. ರೈತರ ಸಮಸ್ಯೆಗಳನ್ನು ಅರಿತಿದ್ದಾರೆ’ ಎಂದು ಹೇಳಿದರು.</p>.<p>‘ಮಂಚೇನಹಳ್ಳಿ ಮತ್ತು ಗೌರಿಬಿದನೂರು ಕ್ಷೇತ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಮಧ್ಯಸ್ಥಿಕೆಯಲ್ಲಿ ಅವಿರೋಧ ಆಯ್ಕೆಗೆ ತೀರ್ಮಾನಿಸಿದ್ದೆವು. ಆದರೆ ರಾತ್ರೋರಾತ್ರಿ ನಮ್ಮ ಅಭ್ಯರ್ಥಿ ಡಿ.ಎನ್.ವೆಂಕಟರೆಡ್ಡಿ ಕೆಎಚ್ಪಿ ಬಣಕ್ಕೆ ಸೇರ್ಪಡೆಯಾಗಿದ್ದರಿಂದಾಗಿ ಚುನಾವಣೆ ಅನಿವಾರ್ಯವಾಯಿತು’ ಎಂದು ಹೇಳಿದರು.</p>.<p>ನಗರದ ಹೊರವಲಯದಲ್ಲಿ ಕೋಚಿಮುಲ್ನಿಂದ ಸ್ಥಾಪಿಸಿದ್ದ ಹಾಲು ಶೀತಲೀಕರಣ ಘಟಕವನ್ನು ನಮ್ಮ ಕ್ಷೇತ್ರದ ಹಿಂದಿನ ನಿರ್ದೇಶಕರು ತಮ್ಮ ಸ್ವಾರ್ಥಕ್ಕಾಗಿ ಬಿಎಂಸಿಗಳನ್ನು ತೆರೆದು ಘಟಕವನ್ನು ಶಾಶ್ವತವಾಗಿ ಮುಚ್ಚುವಂತೆ ಮಾಡಿದರು. ಇದು ಜೆ.ಕಾಂತರಾಜು, ಸುನಂದಮ್ಮ ಸಾಧನೆ ಎಂದರು.</p>.<p>ಕೋಚಿಮುಲ್ ಹಿಂದಿನ ನಿರ್ದೇಶಕರು ಹಾಲು ಶೀತಲೀಕರಣ ಘಟಕವನ್ನು ಮುಚ್ಚಿ ಒಂದೊಂದು ಬಿಎಂಸಿಗೆ ₹5 ಲಕ್ಷ ಕಿಕ್ಬ್ಯಾಕ್ ಪಡೆದುಕೊಂಡಿದ್ದಾರೆ. ಶೀತಲೀಕರಣ ಘಟಕದ ಕಾರ್ಮಿಕರು ಕೆಲಸ ಕಳೆದುಕೊಳ್ಳವಂತಾಯಿತು ಎಂದು ದೂರಿದರು.</p>.<p>ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ರೈತರು ಮತ್ತು ಬಂಡವಾಳಶಾಹಿಗಳ ನಡುವೆ ಚಿಮುಲ್ ಚುನಾವಣೆ ನಡೆಯುತ್ತಿದೆ. ರೈತರು ಸ್ವಾಭಿಮಾನಿಗಳು. ಬಂಡವಾಳಶಾಹಿಗಳನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದರು.</p>.<p>ಜಿ.ಪಂ. ಮಾಜಿ ಅಧ್ಯಕ್ಷ ಎಚ್.ವಿ.ಮಂಜುನಾಥ್ ಮಾತನಾಡಿ, ಈ ಹಿಂದೆ ಕೋಚಿಮುಲ್ ನಿರ್ದೇಶಕರಾದ ಜೆ.ಕಾಂತರಾಜು ವಿರುದ್ದವೇ ಈಗಿನ ಗೌರಿಬಿದನೂರು ಕ್ಷೇತ್ರದ ಅಭ್ಯರ್ಥಿ ಡಿ.ಎನ್.ವೆಂಕಟರೆಡ್ಡಿ ಹಾಲಿನ ದರ ಇಳಿಕೆ ಹಾಗೂ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಪ್ರತಿಭಟಿಸಿದ್ದರು. ಇಂದು ಇಬ್ಬರೂ ಕೆಎಚ್ಪಿ ಬಣದ ಅಭ್ಯರ್ಥಿಗಳಾಗಿದ್ದಾರೆ ಎಂದರು.</p>.<p>ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೇದಲವೇಣಿ ವೇಣು, ಅಶ್ವತ್ಥನಾರಾಯಣಗೌಡ, ಎಚ್.ಎನ್.ಪ್ರಕಾಶ್ರೆಡ್ಡಿ, ತಾರಾನಾಥ್, ತೊಂಡೇಬಾವಿ ಗಿರೀಶ್ರೆಡ್ಡಿ, ಮಾರ್ಕೆಟ್ ನಾಗರಾಜ್, ಗಂಗಾಧರಪ್ಪ, ಭಾರ್ಗವರೆಡ್ಡಿ, ವಿಶ್ವನಾಥ್, ಶ್ರೀನಿವಾಸಗೌಡ, ಲಕ್ಷ್ಮಿನಾರಾಯಣ್, ಗೋಪಾಲ್, ವೀರಪ್ಪ, ಹಿದಾಯಿತ್, ವಲಿಸಾಬ್ ಸಭೆಯಲ್ಲಿ ಪಾಲ್ಗೊಂಡಿದ್ದರು.</p>.<p> <strong>ಅಭ್ಯರ್ಥಿಗಳ ಘೋಷಣೆ</strong> </p><p>ಚಿಮುಲ್ ಚುನಾವಣೆಗೆ ಗೌರಿಬಿದನೂರು ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಅಭ್ಯಥಿಯಾಗಿ ಮಂಡಿಕಲ್ ದಿನೇಶ್ ತೊಂಡೇಬಾವಿ ಕ್ಷೇತ್ರದ ಅಭ್ಯರ್ಥಿಯಾಗಿ ನಾಗರಾಜ್ ಅವರನ್ನು ಕಣಕ್ಕಿಳಿಸಲಾಗಿದೆ. ಮಹಿಳಾ ಅಭ್ಯರ್ಥಿಯನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಶಿವಶಂಕರ ರೆಡ್ಡಿ ತಿಳಿಸಿದರು.</p>.<p> <strong>‘ಇಲ್ಲಿನ ಗುತ್ತಿಗೆದಾರರ ಪಾಡೇನು’</strong> </p><p>ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಡೋಂಗಿ ರಾಜಕಾರಣ ಮಾಡುತ್ತಿದ್ದಾರೆ. ನಾನು ತಂದಿರುವ ಕಾಮಗಾರಿಗಳನ್ನು ಉದ್ಘಾಟಿಸುತ್ತಿದ್ದಾರೆ.ಒಂದೇ ಒಂದು ಶಾಶ್ವತ ಅಭಿವೃದ್ಧಿ ಯೋಜನೆಯಾಗಿಲ್ಲ. ಕಾಮಗಾರಿಗಳ ಗುತ್ತಿಗೆದಾರರು ಸಹ ಇವರ ಕಡೆಯವರೇ ಆಗಿದ್ದಾರೆ. ಇಲ್ಲಿನವರ ಪಾಡೇನು ಎಂದು ಶಿವಶಂಕರ ರೆಡ್ಡಿ ಪ್ರಶ್ನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>