<p>ಮಂಚೇನಹಳ್ಳಿ (ಚಿಕ್ಕಬಳ್ಳಾಪುರ): ತಾಲ್ಲೂಕಿನ ಪುರ ಗ್ರಾಮದಲ್ಲಿ ಗ್ಯಾಸ್ ಸ್ಟೌ ಜಖಂಗೊಂಡ ಮನೆಗೆ ಬುಧವಾರ ಭೇಟಿ ನೀಡಿದ್ದ ಡಾ.ಕೆ.ಸುಧಾಕರ್ ಫೌಂಡೇಶನ್ ಸಿಬ್ಬಂದಿ ಮತ್ತು ಪೊಲೀಸರು ಮಾಹಿತಿ ಸಂಗ್ರಹಿಸಿದರು.</p>.<p>‘ಕುಕ್ಕರ್ ಸ್ಫೋಟದಿಂದ ಸ್ಟೌ ನಾಶವಾಗಿದೆಯೇ ಹೊರತು ಅದು ಸ್ಫೋಟಿಸಿಲ್ಲ’ ಎಂದು ಸ್ಟೌ ಕಂಪನಿ ಸಿಬ್ಬಂದಿ ಸ್ಪಷ್ಟಪಡಿಸಿದರು.</p>.<p>‘ಚುನಾವಣೆ ಘೋಷಣೆಗೂ ಮುನ್ನ ಸಂಕ್ರಾಂತಿ ಸಮಯದಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ರಂಗೋಲಿ ಸ್ಪರ್ಧೆ ನಡೆಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಸಮಾಧಾನಕರ ಬಹುಮಾನವಾಗಿ ಸ್ಟೌ ನೀಡಲಾಗಿತ್ತು.</p>.<p>‘ಪುರ ಗ್ರಾಮದ ಮಂಜುಳಾ ಅವರ ಮನೆಯ ಕುಕ್ಕರ್ನ ಸೇಫ್ಟಿ ವಾಲ್ ಮುಚ್ಚಿದ್ದರಿಂದ ಅದು ಸ್ಫೋಟವಾಗಿದೆ. ಕುಟುಂಬಕ್ಕೆ ಮತ್ತೊಂದು ಹೊಸ ಒಲೆ ನೀಡಿದ್ದೇವೆ’ ಎಂದು ಫೌಂಡೇಶನ್ ಸಿಬ್ಬಂದಿ ತಿಳಿಸಿದರು.</p>.<p>‘ಅಡುಗೆ ಮಾಡಲು ಕುಕ್ಕರ್ ಇಟ್ಟು ಮನೆಯ ಹೊರಗಿದ್ದೆವು. ಸ್ಫೋಟದ ಸದ್ದು ಕೇಳಿ ಒಳಗೆ ಬಂದು ನೋಡಿದಾಗ ಕೆಳಗೆ ಬಿದ್ದಿದ್ದ ಸ್ಟೌ ಸ್ಫೋಟವಾಗಿದೆ ಎಂದು ಭಾವಿಸಿದೆವು’ ಎಂದು ಮಂಜುಳಾ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಚೇನಹಳ್ಳಿ (ಚಿಕ್ಕಬಳ್ಳಾಪುರ): ತಾಲ್ಲೂಕಿನ ಪುರ ಗ್ರಾಮದಲ್ಲಿ ಗ್ಯಾಸ್ ಸ್ಟೌ ಜಖಂಗೊಂಡ ಮನೆಗೆ ಬುಧವಾರ ಭೇಟಿ ನೀಡಿದ್ದ ಡಾ.ಕೆ.ಸುಧಾಕರ್ ಫೌಂಡೇಶನ್ ಸಿಬ್ಬಂದಿ ಮತ್ತು ಪೊಲೀಸರು ಮಾಹಿತಿ ಸಂಗ್ರಹಿಸಿದರು.</p>.<p>‘ಕುಕ್ಕರ್ ಸ್ಫೋಟದಿಂದ ಸ್ಟೌ ನಾಶವಾಗಿದೆಯೇ ಹೊರತು ಅದು ಸ್ಫೋಟಿಸಿಲ್ಲ’ ಎಂದು ಸ್ಟೌ ಕಂಪನಿ ಸಿಬ್ಬಂದಿ ಸ್ಪಷ್ಟಪಡಿಸಿದರು.</p>.<p>‘ಚುನಾವಣೆ ಘೋಷಣೆಗೂ ಮುನ್ನ ಸಂಕ್ರಾಂತಿ ಸಮಯದಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ರಂಗೋಲಿ ಸ್ಪರ್ಧೆ ನಡೆಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಸಮಾಧಾನಕರ ಬಹುಮಾನವಾಗಿ ಸ್ಟೌ ನೀಡಲಾಗಿತ್ತು.</p>.<p>‘ಪುರ ಗ್ರಾಮದ ಮಂಜುಳಾ ಅವರ ಮನೆಯ ಕುಕ್ಕರ್ನ ಸೇಫ್ಟಿ ವಾಲ್ ಮುಚ್ಚಿದ್ದರಿಂದ ಅದು ಸ್ಫೋಟವಾಗಿದೆ. ಕುಟುಂಬಕ್ಕೆ ಮತ್ತೊಂದು ಹೊಸ ಒಲೆ ನೀಡಿದ್ದೇವೆ’ ಎಂದು ಫೌಂಡೇಶನ್ ಸಿಬ್ಬಂದಿ ತಿಳಿಸಿದರು.</p>.<p>‘ಅಡುಗೆ ಮಾಡಲು ಕುಕ್ಕರ್ ಇಟ್ಟು ಮನೆಯ ಹೊರಗಿದ್ದೆವು. ಸ್ಫೋಟದ ಸದ್ದು ಕೇಳಿ ಒಳಗೆ ಬಂದು ನೋಡಿದಾಗ ಕೆಳಗೆ ಬಿದ್ದಿದ್ದ ಸ್ಟೌ ಸ್ಫೋಟವಾಗಿದೆ ಎಂದು ಭಾವಿಸಿದೆವು’ ಎಂದು ಮಂಜುಳಾ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>