ಚಿಂತಾಮಣಿ: ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿಯೊಬ್ಬ ಗುರುವಾರ ತಾಲ್ಲೂಕಿನ ಗಡಿಗವಾರಹಳ್ಳಿ ಗ್ರಾಮದ ಮರದಲ್ಲೇ ಮೃತಪಟ್ಟಿದ್ದಾರೆ.
ಎಸ್ಸೆಸ್ಸೆಲ್ಸಿಉತ್ತೀರ್ಣವಾಗಿದ್ದ ನಿತೀಶ್(16) ಮೃತಪಟ್ಟ ವಿದ್ಯಾರ್ಥಿ. ಮೇಕೆಗಳಿಗೆ ಸೊಪ್ಪ ಕಟಾವು ಮಾಡಲು ಆಲದ ಮರಕ್ಕೆ ಏರಿದ್ದ. ಸೊಪ್ಪು ಕಟಾವು ಮಾಡುತ್ತಿರುವಾಗ ಮರದ ಮೇಲೆ ಹರಿದು ಹೋಗಿದ್ದ ವಿದ್ಯುತ್ ತಂತಿ ತಗುಲಿ ಮರದಲ್ಲೇ ಮೃತಪಟ್ಟಿದ್ದಾರೆ.
ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಸಿಬ್ಬಂದಿ ವಿದ್ಯಾರ್ಥಿಯ ಶವವನ್ನು ಮರದಿಂದ ಇಳಿಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟರು. ಘಟನೆಯಿಂದ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು.