ಶ್ರವಣ್ ಬಟ್ಟೆ ಅಂಗಡಿಯನ್ನು ಇಟ್ಟುಕೊಂಡಿದ್ದ. ಸಾಲ ಸಹ ಹೆಚ್ಚಿತ್ತು. ಈ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆಂಧ್ರಪ್ರದೇಶದ ಬಾಯಿಕೊಂಡ ಗಂಗಮ್ಮ ದೇವಾಲಯಕ್ಕೆ ಬೆಳಿಗ್ಗೆ ತೆರಳಿದ್ದ. ಸಂಜೆ ಮರಳಿದ್ದ. ಬಟ್ಟೆ ಅಂಗಡಿ ಬಾಗಿಲು ಮುಚ್ಚಿ ರಾತ್ರಿ ಮನೆಗೆ ಬಂದ. ಈ ವೇಳೆ ಅಸ್ವಸ್ಥಗೊಂಡಿದ್ದ. ಕಾಳಿಗೆ ಹಾಕುವ ಮಾತ್ರೆಗಳನ್ನು ತಿಂದಿದ್ದೇನೆ ಎಂದು ತಿಳಿಸಿದ. ತಕ್ಷಣವೇ ಚಿಕ್ಕಬಳ್ಳಾಪುರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಿದೆವು. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ದಾಖಲಿಸಿದೆವು ಎಂದು ಶ್ರವಣ್ ತಂದೆ ರಾಜಣ್ಣ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.