<p><strong>ಚಿಂತಾಮಣಿ</strong>: ಮನೆ ಸಮೀಪದಲ್ಲೇ ಆಟವಾಡುತ್ತಿದ್ದ ಮೂರು ವರ್ಷದ ಮಗುವನ್ನು ಚಿಕ್ಕಪ್ಪನೇ ಕತ್ತು ಕೊಯ್ದು ಕೊಲೆ ಮಾಡಿರುವ ಪ್ರಕರಣ ತಾಲ್ಲೂಕಿನ ಮುರುಗಮಲ್ಲ ಹೋಬಳಿ ನಿಮ್ಮಕಾಯಲಹಳ್ಳಿಯಲ್ಲಿ ಬುಧವಾರ ನಡೆದಿದೆ.</p>.<p>ಗೌತಮ್ (3) ಕೊಲೆಯಾಗಿರುವ ಮಗು. ಮಗುವಿನ ಚಿಕ್ಕಪ್ಪ ರಂಜಿತ್ ಕುಮಾರ್ (31) ಕೊಲೆ ಆರೋಪಿ. ರಂಜಿತ್ ಅವರ ಅಣ್ಣನ ಮಗ ಗೌತಮ್. ಆರೋಪಿ ಡಿಪ್ಲೊಮೊ ಎಂಜಿನಿಯರ್ ಆಗಿದ್ದು ಮಾನಸಿಕ ಅಸ್ವಸ್ಥ ಎಂದು ಹೇಳಲಾಗಿದೆ.</p>.<p>ಕೊಲೆಗೆ ನಿಖರವಾದ ಕಾರಣ ಗೊತ್ತಾಗಿಲ್ಲ. ಬುಧವಾರ ಸಂಜೆ ಅವರ ಹಳೆ ಮನೆ ಬಳಿ ಆಟವಾಡುತ್ತಿದ್ದ ಗೌತಮ್ ನನ್ನು ರಂಜಿತ್ ಬ್ಲೇಡ್ನಿಂದ ಕುತ್ತಿಗೆ ಕೊಯ್ದು ಹಳೆ ಮನೆಯೊಳಗೆ ಹಾಕಿ ಪರಾರಿಯಾಗಿದ್ದಾನೆ.</p>.<p>ಸಂಜೆ ಕತ್ತಲಾದರೂ ಮಗು ಮನೆ ಬರದಿದ್ದಾಗ ಅನುಮಾನಗೊಂಡು ಪೋಷಕರುನ ಹುಡುಕಾಟ ನಡೆಸಿದ್ದಾರೆ. ಆಟವಾಡುತ್ತಿದ್ದದನ್ನು ನೋಡಿರುವ ನೆರೆಹೊರೆಯವರು, ಹಳೆ ಮನೆ ಬಳಿ ಚಿಕ್ಕಪ್ಪನೊಂದಿಗೆ ಇದ್ದ ವಿಷಯ ತಿಳಿಸಿದ್ದಾರೆ. ಮನೆ ಒಳಗಡೆ ಹೋಗಿ ನೋಡಿದಾಗ ಮಗು ಪತ್ತೆಯಾಗಿದೆ. ಆ ವೇಳೆಗಾಗಲೇ ಮಗು ಮೃತಪಟ್ಟಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಕೆಂಚಾರ್ಲಹಳ್ಳಿ ಠಾಣೆ ಇನ್ಸ್ಪೆಕ್ಟರ್ ವೆಂಕಟರವಣಪ್ಪ, ಸಬ್ ಇನ್ಸ್ಪೆಕ್ಟರ್ ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಎಸ್ಪಿ ಡಿ.ಎಲ್.ನಾಗೇಶ್, ಡಿವೈಎಸ್ಪಿ ಮುರಳೀಧರ್ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂತಾಮಣಿ</strong>: ಮನೆ ಸಮೀಪದಲ್ಲೇ ಆಟವಾಡುತ್ತಿದ್ದ ಮೂರು ವರ್ಷದ ಮಗುವನ್ನು ಚಿಕ್ಕಪ್ಪನೇ ಕತ್ತು ಕೊಯ್ದು ಕೊಲೆ ಮಾಡಿರುವ ಪ್ರಕರಣ ತಾಲ್ಲೂಕಿನ ಮುರುಗಮಲ್ಲ ಹೋಬಳಿ ನಿಮ್ಮಕಾಯಲಹಳ್ಳಿಯಲ್ಲಿ ಬುಧವಾರ ನಡೆದಿದೆ.</p>.<p>ಗೌತಮ್ (3) ಕೊಲೆಯಾಗಿರುವ ಮಗು. ಮಗುವಿನ ಚಿಕ್ಕಪ್ಪ ರಂಜಿತ್ ಕುಮಾರ್ (31) ಕೊಲೆ ಆರೋಪಿ. ರಂಜಿತ್ ಅವರ ಅಣ್ಣನ ಮಗ ಗೌತಮ್. ಆರೋಪಿ ಡಿಪ್ಲೊಮೊ ಎಂಜಿನಿಯರ್ ಆಗಿದ್ದು ಮಾನಸಿಕ ಅಸ್ವಸ್ಥ ಎಂದು ಹೇಳಲಾಗಿದೆ.</p>.<p>ಕೊಲೆಗೆ ನಿಖರವಾದ ಕಾರಣ ಗೊತ್ತಾಗಿಲ್ಲ. ಬುಧವಾರ ಸಂಜೆ ಅವರ ಹಳೆ ಮನೆ ಬಳಿ ಆಟವಾಡುತ್ತಿದ್ದ ಗೌತಮ್ ನನ್ನು ರಂಜಿತ್ ಬ್ಲೇಡ್ನಿಂದ ಕುತ್ತಿಗೆ ಕೊಯ್ದು ಹಳೆ ಮನೆಯೊಳಗೆ ಹಾಕಿ ಪರಾರಿಯಾಗಿದ್ದಾನೆ.</p>.<p>ಸಂಜೆ ಕತ್ತಲಾದರೂ ಮಗು ಮನೆ ಬರದಿದ್ದಾಗ ಅನುಮಾನಗೊಂಡು ಪೋಷಕರುನ ಹುಡುಕಾಟ ನಡೆಸಿದ್ದಾರೆ. ಆಟವಾಡುತ್ತಿದ್ದದನ್ನು ನೋಡಿರುವ ನೆರೆಹೊರೆಯವರು, ಹಳೆ ಮನೆ ಬಳಿ ಚಿಕ್ಕಪ್ಪನೊಂದಿಗೆ ಇದ್ದ ವಿಷಯ ತಿಳಿಸಿದ್ದಾರೆ. ಮನೆ ಒಳಗಡೆ ಹೋಗಿ ನೋಡಿದಾಗ ಮಗು ಪತ್ತೆಯಾಗಿದೆ. ಆ ವೇಳೆಗಾಗಲೇ ಮಗು ಮೃತಪಟ್ಟಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಕೆಂಚಾರ್ಲಹಳ್ಳಿ ಠಾಣೆ ಇನ್ಸ್ಪೆಕ್ಟರ್ ವೆಂಕಟರವಣಪ್ಪ, ಸಬ್ ಇನ್ಸ್ಪೆಕ್ಟರ್ ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಎಸ್ಪಿ ಡಿ.ಎಲ್.ನಾಗೇಶ್, ಡಿವೈಎಸ್ಪಿ ಮುರಳೀಧರ್ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>