‘ನಗರದ ತ್ಯಾಜ್ಯಗಳು ಅದರಲ್ಲೂ ವಿಷಕಾರಿ ತ್ಯಾಜ್ಯಗಳನ್ನು ಕೆರೆಗೆ ಸುರಿಯುತ್ತಿರುವುದರಿಂದ ಕೆಲವೆಡೆ ನೀರು ಕಪ್ಪುಬಣ್ಣಕ್ಕೆ ತಿರುಗಿದೆ. ಸಾವಿರಾರು ಮೀನುಗಳು ಸತ್ತು ತೇಲುತ್ತಿವೆ. ಅಲ್ಲೆಲ್ಲಾ ಕೊಳೆತ ವಾಸನೆ ಹಬ್ಬಿದೆ. ಕಳೆದ ವರ್ಷ ಉತ್ತಮ ಮಳೆಯಾಗಿದ್ದರಿಂದಾಗಿ ಈಗಲೂ ಕೆರೆಯಲ್ಲಿ ನೀರಿದೆ. ಆದರೆ ನಮ್ಮೂರ ಕೆರೆಯನ್ನು ನಮ್ಮೂರಿನವರೇ ತ್ಯಾಜ್ಯ ಸುರಿದು ಹಾಳುಮಾಡುತ್ತಿರುವುದು ದುರಂತವಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಅರಿವು ಮೂಡಿಸಿ, ಕ್ರಮ ಕೈಗೊಳ್ಳಬೇಕು’ ಎಂದು ಪರಿಸರಪ್ರೇಮಿ ಆಟೋ ಸುಬಾನ್ ಒತ್ತಾಯಿಸಿದ್ದಾರೆ.