<p><strong>ಗುಡಿಬಂಡೆ</strong>: ದುಡಿಯುವ ಜನರ ಬದುಕು ಕಸಿದು ಬಂಡವಾಳದಾರರ ಪರವಾಗಿ ಕೆಲಸ ಮಾಡುತ್ತಿರುವ ಕೇಂದ್ರದವಿರುದ್ಧ ಜನರುಹೋರಾಟ ಮಾಡುವ ಸಮಯ ಬಂದಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜು ತಿಳಿಸಿದರು.</p>.<p>ಪಟ್ಟಣದಲ್ಲಿ ನಡೆದ ಸಿಪಿಎಂ 8ನೇ ತಾಲ್ಲೂಕು ಸಮ್ಮೇಳನದಲ್ಲಿ ಮಾತನಾಡಿದರು.</p>.<p>ಹಿಂದಿನ ಸರ್ಕಾರದಆಡಳಿತದಲ್ಲಿ ಭ್ರಷ್ಟಚಾರ,ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ ಎಂದು ಚುನಾವಣೆಯ ಸಮಯದಲ್ಲಿ ಆಡಳಿತ ಬಿಜೆಪಿ ಪಕ್ಷದ ಮುಖಂಡರು ಮಾತನಾಡಿದ್ದರು. ಆಡಳಿತಕ್ಕೆ ಬಂದ ನಂತರ ಜನಸಾಮಾನ್ಯರ ವಿರುದ್ಧವಾಗಿ ಕಾಯ್ದೆಗಳನ್ನು ತಂದು ಬೆಲೆ ಏರಿಕೆ ಮಾಡಿದ್ದಾರೆ. ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿದೆ ಎಂದರು.</p>.<p>ಕೇಂದ್ರ ಸರ್ಕಾರಕ್ಕೆ ಜನಸಾಮನ್ಯರಿಂದ ತೆರಿಗೆ ರೂಪದಲ್ಲಿ ವಾರ್ಷಿಕವಾಗಿ ₹35 ಲಕ್ಷ ಕೋಟಿ ಸಂದಾಯವಾಗುತ್ತಿದೆ. ಜನಸಾಮಾನ್ಯರು ಬಳಕೆ ಮಾಡುವ ದಿನನಿತ್ಯದ ವಸ್ತುಗಳು, ಕೃಷಿಗೆ ಬೇಕಾಗುವ ಬಿತ್ತನೆ ಬೀಜದ ಬೆಲೆ ಏರಿಕೆಯಾಗುತ್ತಿದೆ. ಸಾರ್ವಜನಿಕರಿಂದ ತೆರಿಗೆ ಹಣವನ್ನುಜನಸಾಮಾನ್ಯರಿಗೆ ನೀಡದೇ ಈ ಹಣವನ್ನು ಬಂಡವಾಳಶಾಹಿಗಳ ಸಾಲ ಮನ್ನಾ ಯೋಜನೆಗೆ ಬಳಕೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.</p>.<p>ಭೂಮಿಯ ಹಕ್ಕಿಗಾಗಿ ಫಾರಂ 50, 53 ಅರ್ಜಿದಾರರಿಗೆ ಭೂಮಿ ಮಂಜೂರು ಮಾಡಬೇಕು. ಫಾರಂ 57 ಕೂಡಲೆ ಅಂಗೀಕರಿಸಿ ಭೂಮಿಯ ಹಕ್ಕು ನೀಡಬೇಕು. ಬಡ ವಸತಿ ರಹಿತರಿಗೆ ಕೂಡಲೆ ಸರ್ಕಾರಿ ಭೂ ಗುರುತಿಸಿ ನಿವೇಶನ ನೀಡಬೇಕು ಎಂಬ ನಿರ್ಣಯವನ್ನು ಅಂಗೀಕರಿಸಲಾಯಿತು.</p>.<p>ನೂತನ ತಾಲ್ಲೂಕು ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಎಚ್.ಪಿ.ಲಕ್ಷ್ಮಿನಾರಾಯಣ, ಜಯರಾಮ<br />ರೆಡ್ಡಿ, ಪಿಸಿ ಮಂಜುನಾಥರೆಡ್ಡಿ, ಆದಿನಾರಾಯಣರೆಡ್ಡಿ, ನರಸಿಂಹರೆಡ್ಡಿ, ಜಿ.ಶ್ರೀನಿವಾಸ್, ಲಕ್ಕ್ಷ್ಮಿನಾರಾಯಣ, ಎಲ್.ಎ.ಬಾಬು, ರಾಜಪ್ಪ, ರವೀಂದ್ರರೆಡ್ಡಿ, ನಾಗರಾಜ್, ಶ್ರೀನಿವಾಸ್, ಅದಿನಾರಾಯಣಸ್ವಾಮಿ, ಭಾಗ್ಯಮ್ಮ, ಶುಭಾವತಿ, ತಾಲ್ಲೂಕು ಕಾರ್ಯದರ್ಶಿಯಾಗಿ ಹಳೇಗುಡಿಬಂಡೆ ಲಕ್ಷ್ಮಿನಾರಾಯಣ ಪುನರಾಯ್ಕೆ ಆದರು.</p>.<p>ಜಿಲ್ಲಾ ಕಾರ್ಯದರ್ಶಿ ಜಯರಾಮರೆಡ್ಡಿ, ಮುಖಂಡ ನರಸಿಂಹರೆಡ್ಡಿ, ಕೋಚಿಮಲ್ ನಿರ್ದೇಶಕ ಅದಿನಾರಾಯಣರೆಡ್ಡಿ, ರವಿಚಂದ್ರರೆಡ್ಡಿ, ಅಂಜನೇಯರೆಡ್ಡಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಡಿಬಂಡೆ</strong>: ದುಡಿಯುವ ಜನರ ಬದುಕು ಕಸಿದು ಬಂಡವಾಳದಾರರ ಪರವಾಗಿ ಕೆಲಸ ಮಾಡುತ್ತಿರುವ ಕೇಂದ್ರದವಿರುದ್ಧ ಜನರುಹೋರಾಟ ಮಾಡುವ ಸಮಯ ಬಂದಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜು ತಿಳಿಸಿದರು.</p>.<p>ಪಟ್ಟಣದಲ್ಲಿ ನಡೆದ ಸಿಪಿಎಂ 8ನೇ ತಾಲ್ಲೂಕು ಸಮ್ಮೇಳನದಲ್ಲಿ ಮಾತನಾಡಿದರು.</p>.<p>ಹಿಂದಿನ ಸರ್ಕಾರದಆಡಳಿತದಲ್ಲಿ ಭ್ರಷ್ಟಚಾರ,ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ ಎಂದು ಚುನಾವಣೆಯ ಸಮಯದಲ್ಲಿ ಆಡಳಿತ ಬಿಜೆಪಿ ಪಕ್ಷದ ಮುಖಂಡರು ಮಾತನಾಡಿದ್ದರು. ಆಡಳಿತಕ್ಕೆ ಬಂದ ನಂತರ ಜನಸಾಮಾನ್ಯರ ವಿರುದ್ಧವಾಗಿ ಕಾಯ್ದೆಗಳನ್ನು ತಂದು ಬೆಲೆ ಏರಿಕೆ ಮಾಡಿದ್ದಾರೆ. ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿದೆ ಎಂದರು.</p>.<p>ಕೇಂದ್ರ ಸರ್ಕಾರಕ್ಕೆ ಜನಸಾಮನ್ಯರಿಂದ ತೆರಿಗೆ ರೂಪದಲ್ಲಿ ವಾರ್ಷಿಕವಾಗಿ ₹35 ಲಕ್ಷ ಕೋಟಿ ಸಂದಾಯವಾಗುತ್ತಿದೆ. ಜನಸಾಮಾನ್ಯರು ಬಳಕೆ ಮಾಡುವ ದಿನನಿತ್ಯದ ವಸ್ತುಗಳು, ಕೃಷಿಗೆ ಬೇಕಾಗುವ ಬಿತ್ತನೆ ಬೀಜದ ಬೆಲೆ ಏರಿಕೆಯಾಗುತ್ತಿದೆ. ಸಾರ್ವಜನಿಕರಿಂದ ತೆರಿಗೆ ಹಣವನ್ನುಜನಸಾಮಾನ್ಯರಿಗೆ ನೀಡದೇ ಈ ಹಣವನ್ನು ಬಂಡವಾಳಶಾಹಿಗಳ ಸಾಲ ಮನ್ನಾ ಯೋಜನೆಗೆ ಬಳಕೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.</p>.<p>ಭೂಮಿಯ ಹಕ್ಕಿಗಾಗಿ ಫಾರಂ 50, 53 ಅರ್ಜಿದಾರರಿಗೆ ಭೂಮಿ ಮಂಜೂರು ಮಾಡಬೇಕು. ಫಾರಂ 57 ಕೂಡಲೆ ಅಂಗೀಕರಿಸಿ ಭೂಮಿಯ ಹಕ್ಕು ನೀಡಬೇಕು. ಬಡ ವಸತಿ ರಹಿತರಿಗೆ ಕೂಡಲೆ ಸರ್ಕಾರಿ ಭೂ ಗುರುತಿಸಿ ನಿವೇಶನ ನೀಡಬೇಕು ಎಂಬ ನಿರ್ಣಯವನ್ನು ಅಂಗೀಕರಿಸಲಾಯಿತು.</p>.<p>ನೂತನ ತಾಲ್ಲೂಕು ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಎಚ್.ಪಿ.ಲಕ್ಷ್ಮಿನಾರಾಯಣ, ಜಯರಾಮ<br />ರೆಡ್ಡಿ, ಪಿಸಿ ಮಂಜುನಾಥರೆಡ್ಡಿ, ಆದಿನಾರಾಯಣರೆಡ್ಡಿ, ನರಸಿಂಹರೆಡ್ಡಿ, ಜಿ.ಶ್ರೀನಿವಾಸ್, ಲಕ್ಕ್ಷ್ಮಿನಾರಾಯಣ, ಎಲ್.ಎ.ಬಾಬು, ರಾಜಪ್ಪ, ರವೀಂದ್ರರೆಡ್ಡಿ, ನಾಗರಾಜ್, ಶ್ರೀನಿವಾಸ್, ಅದಿನಾರಾಯಣಸ್ವಾಮಿ, ಭಾಗ್ಯಮ್ಮ, ಶುಭಾವತಿ, ತಾಲ್ಲೂಕು ಕಾರ್ಯದರ್ಶಿಯಾಗಿ ಹಳೇಗುಡಿಬಂಡೆ ಲಕ್ಷ್ಮಿನಾರಾಯಣ ಪುನರಾಯ್ಕೆ ಆದರು.</p>.<p>ಜಿಲ್ಲಾ ಕಾರ್ಯದರ್ಶಿ ಜಯರಾಮರೆಡ್ಡಿ, ಮುಖಂಡ ನರಸಿಂಹರೆಡ್ಡಿ, ಕೋಚಿಮಲ್ ನಿರ್ದೇಶಕ ಅದಿನಾರಾಯಣರೆಡ್ಡಿ, ರವಿಚಂದ್ರರೆಡ್ಡಿ, ಅಂಜನೇಯರೆಡ್ಡಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>