ಬಾಗೇಪಲ್ಲಿ ತಾಲ್ಲೂಕು ಕೇಂದ್ರದಿಂದ ಚೇಳೂರಿಗೆ ಬಂದು ಮಾರ್ಗ ಬಿಟ್ಟು ನಿಯಮಬಾಹಿರವಾಗಿ ಹಳ್ಳಿಗಳ ಮೇಲೆ ಬರದೇ ಸಂಚಾರ ಮಾಡುತ್ತಿರುವುದು ಆ ಭಾಗದ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿದೆ. ರಸ್ತೆ ಸಂಖ್ಯೆ–14 ಅನ್ನು ಬಿಟ್ಟು ಅನ್ಯಮಾರ್ಗದಲ್ಲಿ ಹೋಗುತ್ತಿರುವುದು ಸರಿಯಲ್ಲ. ಇದೇ ಸ್ಥಿತಿ ಮುಂದುವರಿದರೆ ಪ್ರತಿಭಟನೆ ಮಾಡಲಾಗುವುದು ಎಂದು ಗ್ರಾಮದ ಮುಖಂಡರಾದ ಶಾಮೀರ್, ಸುಭಾನ್, ಎಸ್.ವಿ. ನಂಜಿರೆಡ್ಡಿ, ಎನ್.ಎಸ್. ಮದ್ದಿರೆಡ್ಡಿ, ಮಂಡ್ಯಂಪಲ್ಲಿ ಎನ್. ಮಲ್ಲಿಕಾರ್ಜುನ್, ಕೆ.ವಿ. ಶ್ರೀನಿವಾಸ್ ಎಚ್ಚರಿಸಿದ್ದಾರೆ.