ಚಿಂತಾಮಣಿ ತಾಲ್ಲೂಕಿನ ಚೇಳೂರು ಮುಖ್ಯ ರಸ್ತೆಯಿಂದ ಕೊಮ್ಮೇಪಲ್ಲಿ ಕೋಡೇಗಂಡ್ಲು ಮಾರ್ಗವಾಗಿ ಬುರುಡಗುಂಟೆಗೆ ಹೋಗುವ ರಸ್ತೆ ಸ್ಥಿತಿ
ಹದಗೆಟ್ಟ ರಸ್ತೆಗಳ ಕುರಿತು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಅಂದಾಜುಪಟ್ಟಿ ನೀಲನಕ್ಷೆ ಸಿದ್ಧಪಡಿಸಿ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಬಂದ ಕೂಡಲೇ ದುರಸ್ತಿ ಮಾಡಿಸಲಾಗುವುದು
ಎಇಇ ಜಿಲ್ಲಾ ಪಂಚಾಯಿತಿ
ಗುಂಡಿಗಳಲ್ಲಿ ರಸ್ತೆ ಎಲ್ಲಿದೆ ಎಂದು ಹುಡುಕಬೇಕಾಗಿದೆ. ಹಬ್ಬ ಹರಿದಿನ ಹಾಗೂ ಭಾನುವಾರ ಹೆಚ್ಚು ವಾಹನಗಳು ಆಗಮಿಸುತ್ತವೆ. ಹಲವಾರು ವರ್ಷಗಳಿಂದ ರಸ್ತೆ ದುರಸ್ತಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ
ಮಲ್ಲಿಕಾರ್ಜುನಾಚಾರಿ ಜುಂಜನಹಳ್ಳಿ
ರಸ್ತೆ ದುರಸ್ತಿ ಮಾಡುವುದಾಗಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹಲವು ಬಾರಿ ಭರವಸೆ ನೀಡಿ ವರ್ಷ ಕಳೆದರೂ ರಸ್ತೆ ನಿರ್ಮಾಣವಾಗಿಲ್ಲ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇತ್ತಕಡೆ ಗಮನಹರಿಸಲಿ