ಬುಧವಾರ ಬೆಳಿಗ್ಗೆ 10.45ರ ಸಮಯದಲ್ಲಿ ಲೇಪಾಕ್ಷಿ ಕ್ರಷರ್ನಲ್ಲಿ ಕ್ಲಿನಿಂಗ್ ಸಲುವಾಗಿ ಜೆಸಿಬಿ ಚಾಲಕ ಎಂ.ಸ್ಯಾಂಡ್ ಅನ್ನು ಟ್ಯಾಂಕ್ಗೆ ಹಾಕುತ್ತಿದ್ದರು. ಎಂ.ಸ್ಯಾಂಡ್ಸರಿಯಾಗಿ ಸ್ಕ್ರೀನ್ ಮೂಲಕ ಕ್ಲಿನಿಂಗ್ ಆಗುತ್ತಿರಲಿಲ್ಲ. ಆಗ ಅಲ್ಲಿಯೇ ಇದ್ದ ಮಣಿಕ್ ಟ್ಯಾಂಕ್ನಲ್ಲಿ ಇಳಿದರು. ಇದನ್ನು ಗಮನಿಸದೆ ಚಾಲಕ ನಿರ್ಲಕ್ಷ್ಯದಿಂದ ಜೆಸಿಬಿ ಮೂಲಕ ಟ್ಯಾಂಕ್ಗೆ ಎಂ.ಸ್ಯಾಂಡ್ ಹಾಕಿದರು. ಸ್ವಲ್ಪ ಸಮಯದ ಬಳಿಕವೂ ಕ್ಲಿನಿಂಗ್ ಆಗಲಿಲ್ಲ. ಮೆಷಿನ್ ಆಪರೇಟರ್ ಸಬಿರುಲ್ ಶೇಖ್, ಮಣಿಕ್ ಟ್ಯಾಂಕ್ನಲ್ಲಿ ಇರುವುದನ್ನು ನೋಡಿ ಕೂಡಲೇ ಓಡಿ ಹೋಗಿ ಯಂತ್ರಗಳನ್ನು ಬಂದ್ ಮಾಡಿದರು. ಅಲ್ಲಿ ಕೆಲಸ ಮಾಡುತ್ತಿದ್ದ ಮುಬಾರಕ್ ಹಾಗೂ ಪಕ್ಕದ ಕ್ರಷರ್ನಲ್ಲಿ ಕೆಲಸ ಮಾಡುತ್ತಿದ್ದ ನಾನು ಓಡಿ ಹೋಗಿ ಟ್ಯಾಂಕ್ನಲ್ಲಿದ್ದ ಎಂ.ಸ್ಯಾಂಡನ್ನು ಜೆಸಿಬಿ ಮೂಲಕ ಹೊರತೆಗೆದು ಮಣಿಕ್ ಅವರನ್ನು ಹೊರ ತಂದೆವು. ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋದಾಗ ವೈದ್ಯರು ಮಣಿಕ್ ಮೃತಪಟ್ಟಿರುವುದಾಗಿ ತಿಳಿಸಿದರು ಎಂದು ಬಸಿರುಲ್ ಶೇಖ್ ದೂರಿನಲ್ಲಿ ವಿವರಿಸಿದ್ದಾರೆ.