ಗೌರಿಬಿದನೂರು: ಅಯೋಧ್ಯೆಯ ಶ್ರೀರಾಮಂದಿರದ ಗರ್ಭ ಗುಡಿಗೆ ಅಳವಡಿಸುವ ಗ್ರಾನೈಟ್ ಕಲ್ಲನ್ನು ದೇವನಹಳ್ಳಿಯ ಸಾದಹಳ್ಳಿ ಇಂದ ಅಯೋಧ್ಯೆಗೆ ತೆಗೆದುಕೊಂಡು ಹೋಗುವ ಮಾರ್ಗದ ಮಧ್ಯೆ ಭಾನುವಾರ ನಗರದ ಶ್ರೀಶನಿಮಹಾತ್ಮ ದೇವಾಲಯದ ಬಳಿ ಬಿ.ಎಚ್. ರಸ್ತೆಯಲ್ಲಿ ಸ್ಥಳೀಯ ಹಿಂದೂ ಜಾಗರಣ ವೇದಿಕೆ ಹಾಗೂ ಪರಿಷದ್ ಕಾರ್ಯಕರ್ತರು ಕಲ್ಲಿಗೆ ಹಾಗೂ ಅದನ್ನು ಹೊತ್ತು ಸಾಗುತ್ತಿರುವ ಲಾರಿಗೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಹಿರಿಯ ಕಾರ್ಯಕರ್ತರು ಹಾಗೂ ಜಾಗರಣ ವೇದಿಕೆ ಕಾರ್ಯಕರ್ತರು ಇಂತಹ ಅವಕಾಶ ದೊರಕಿದ್ದು ನಮ್ಮ ಪುಣ್ಯವೆಂದೇ ಭಾವಿಸಿದರು.
ಇದೇ ವೇಳೆ ಹಿಂದೂ ಕಾರ್ಯಕರ್ತರಾದ ರಮೇಶ್, ವೇಣು, ಶಿವಾರೆಡ್ಡಿ, ರವಿ, ಶಿವಕುಮಾರ್, ಮೋಹನ್ ಹಾಜರಿದ್ದರು.