ಶೀಘ್ರದಲ್ಲೇ ಎಚ್.ಎನ್ ವ್ಯಾಲಿ ನೀರು
ಎತ್ತಿನಹೊಳೆ ನೀರು ತಾಲ್ಲೂಕಿನ ಕೆರೆಗಳಿಗೆ ಹರಿಯುವುದು ವಿಳಂಬವಾಗಬಹುದು, ಆದರೆ ಈಗಾಗಲೇ ಜಿಲ್ಲೆಗೆ ಬಂದಿರುವ ಎಚ್.ಎನ್ ವ್ಯಾಲಿ ನೀರು ಮುಂದಿನ 2-3 ತಿಂಗಳಲ್ಲಿ ಈ ಭಾಗದ ಕೆರೆಗಳಿಗೆ ಹರಿಯುವುದು ಖಚಿತ. ಇದರಿಂದ ಅಂತರ್ಜಲದ ಮಟ್ಟ ವೃದ್ಧಿಯಾಗಿ ರೈತರ ಬದುಕು ಸಮೃದ್ಧಗೊಳ್ಳುತ್ತದೆ ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ತಿಳಿಸಿದರು.