<p><strong>ಶಿಡ್ಲಘಟ್ಟ: </strong>ತಾಲ್ಲೂಕಿನ ಮಳ್ಳೂರು ಸುತ್ತಮುತ್ತಲ ಗ್ರಾಮಸ್ಥರಿಗೆ ಬುಧವಾರ ಸಂಜೆಯು ವಿಶೇಷ ಕ್ಷಣಗಳಿಂದ ಕೂಡಿತ್ತು. ಎಲ್ಲೆಡೆ ಸಂಭ್ರಮ - ಸಡಗರ -ಸಂತಸ ಆವರಿಸಿಕೊಂಡಿತ್ತು. <br /> <br /> ಸೂರ್ಯ ಮುಳುಗಿ ಕತ್ತಲು ಅವರಿಸಿದ್ದರೂ ದೀಪ ಗಳ ನೆರವಿನಿಂದ ರಾತ್ರಿಯು ಮಿನುಗು ತಿತ್ತು. ಗಾಳಿ ಬೀಸಿದಾಗಲ್ಲೆಲ್ಲ ಮಿಸುಕಾಡುತ್ತಿದ್ದ ಎಲೆಗಳು ತಂಪಾದ ಹವೆಯನ್ನು ನೀಡುತಿದ್ದವು. ಒಟ್ಟಿನಲ್ಲಿ ಮಳ್ಳೂರು ಸಮೀಪದ ಸಾಯಿನಾಥ ಜ್ಞಾನಮಂದಿರದ ಆರನೇ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಈ ಎಲ್ಲ ಸಂಗತಿಗಳು ಇನ್ನಷ್ಟು ಮೆರಗು ತಂದಿದ್ದವು.<br /> <br /> ಸೋಮವಾರದಿಂದ ಬುಧವಾರ ದವರೆಗೆ ಪ್ರತಿ ದಿನ ವೈವಿಧ್ಯಮಯ ಕಾರ್ಯಕ್ರಮಗಳನ್ನು ಸಾಯಿನಾಥ ಜ್ಞಾನಮಂದಿರ ಉಣಬಡಿಸಿತು.<br /> <br /> ಗಣ ಹೋಮ, ಸುದರ್ಶನ ಹೋಮ, ದುರ್ಗಾ ಹೋಮ, ಮಹಾಲಕ್ಷ್ಮೀ ದೇವಿ ವಿಗ್ರಹಕ್ಕೆ ಲಕ್ಷಾರ್ಚನೆ, ಸತ್ಯನಾರಾಯಣಸ್ವಾಮಿ ಪೂಜೆ, ಕಲಶಗಳ ಸಮೇತ ಲಕ್ಷ್ಮೀ ನರ ಸಿಂಹ ಸ್ವಾಮಿ ದೇವಾಲಯಕ್ಕೆ ಪಲ್ಲಕ್ಕಿ ಮೆರವಣಿಗೆ, ವಿವಿಧ ದೇವರುಗಳಿಗೆ ಕುಂಭಾಭಿಷೇಕ, ತೀರ್ಥ, ಪ್ರಸಾದ ವಿನಿಯೋಗಗಳು ನಡೆದವು. <br /> <br /> ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶ್ರೀದೇವಿ ಭರತನಾಟ್ಯ ಪ್ರದರ್ಶಿಸಿದರೆ, ಯುಕ್ತ ಅಕಾಡೆಮಿ ತಂಡದವರು ನೃತ್ಯ, ಯೋಗ ಮತ್ತು ಜಂಬೆ ಪ್ರದರ್ಶನ ನಡೆಸಿ ಕೊಟ್ಟರು. ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.<br /> <br /> `ಚಿಕ್ಕಬಳ್ಳಾಪುರ ಜಿಲ್ಲೆಯವನಾದ ನನ್ನನ್ನು ನಾಡಿನ ಕಲಾಭಿಮಾನಿಗಳು ಪೋಷಿಸಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಕಲಾವಿದರಿಗೆ ಕೊರತೆಯಿಲ್ಲ. ನಾಟ್ಯ ಪ್ರದರ್ಶನ ನೀಡಿರುವ ಮಕ್ಕಳು ಇದನ್ನು ಪುಷ್ಟೀಕರಿಸಿದ್ದಾರೆ. <br /> <br /> ಮಳ್ಳೂರಿಗೆ ನಾನು ಹಲವು ಬಾರಿ ಭೇಟಿ ನೀಡಿದ್ದು, ಇಲ್ಲಿ ಆಪ್ತ ಸ್ನೇಹಿತರು ಇದ್ದಾರೆ. ಗ್ರಾಮೀಣ ಭಾಗದಲ್ಲಿದ್ದರೂ ಧಾರ್ಮಿಕ, ಆಧ್ಯಾತ್ಮ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಈ ದೇವಾಲಯದಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ~ ಎಂದು ನಟ ಶ್ರೀನಿವಾಸಮೂರ್ತಿ ತಿಳಿಸಿದರು.<br /> <br /> `ಕಾರ್ಯಕರ್ತರು ಶ್ವೇತ ವಸ್ತ್ರಧಾರಿ ಗಳಾಗಿ ತಮ್ಮದೇ ಆದ ಚಟುವಟಿಕೆ ಗಳಲ್ಲಿ ನಿರತರಾಗಿದ್ದರೆ, ಭಕ್ತರು ಪ್ರಶಾಂತವಾದ ವಾತಾವರಣದಲ್ಲಿ ತಮ್ಮ ದುಗುಡವನ್ನು ಮರೆತು ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿಯಿಂದ ಕಾಲ ಕಳೆಯುತ್ತಿದ್ದರು. ದೇವರನ್ನು ಮತ್ತು ದೇವಾಲಯವನ್ನು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. <br /> <br /> ದೂರದ ಊರುಗಳಿಂದ ಆಗಮಿಸಿದ್ದ ಭಕ್ತರಿಗೆ ನೀರು, ಊಟ ಮುಂತಾದ ಉಪಚಾರ ಮಾಡಿದರು. ಶಿರಡಿಗೆ ಹೋಗಲು ಕಷ್ಟ ವಾಗುವವರಿಗೆ ನಮ್ಮಲ್ಲೇ ಶಿರಡಿಯ ದೇವರನ್ನು ಸಾಕ್ಷಾತ್ಕರಿಸಿಕೊಂಡಂತಹ ಅನುಭವ ಈ ದೇವಾಲಯದ್ಲ್ಲಲಿ ಆಗುತ್ತಿದೆ~ ಎಂದು ಶಿಕ್ಷಕ ದೇವರಾಜ್ ತಿಳಿಸಿದರು.<br /> <br /> ನಟ ರಮೇಶ್ಭಟ್, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಕಂಠ, ರಂಗನಾಥ ರಾವ್ ಸ್ವಾಮೀಜಿ, ಕೆ.ಎಸ್. ಮುನಿ ನಾರಾಯಣಪ್ಪ, ಎಂ.ನಾರಾಯಣ ಸ್ವಾಮಿ, ಜಿ.ಎಂ.ರಾಮರೆಡ್ಡಿ, ಎಂ.ವೆಂಕಟೇಶ್, ಎ.ಫಿರೋಜ್ ಅಹಮದ್, ಗೋಪಾಲಪ್ಪ, ಅಮರ್, ವೆಂಕಟರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಡ್ಲಘಟ್ಟ: </strong>ತಾಲ್ಲೂಕಿನ ಮಳ್ಳೂರು ಸುತ್ತಮುತ್ತಲ ಗ್ರಾಮಸ್ಥರಿಗೆ ಬುಧವಾರ ಸಂಜೆಯು ವಿಶೇಷ ಕ್ಷಣಗಳಿಂದ ಕೂಡಿತ್ತು. ಎಲ್ಲೆಡೆ ಸಂಭ್ರಮ - ಸಡಗರ -ಸಂತಸ ಆವರಿಸಿಕೊಂಡಿತ್ತು. <br /> <br /> ಸೂರ್ಯ ಮುಳುಗಿ ಕತ್ತಲು ಅವರಿಸಿದ್ದರೂ ದೀಪ ಗಳ ನೆರವಿನಿಂದ ರಾತ್ರಿಯು ಮಿನುಗು ತಿತ್ತು. ಗಾಳಿ ಬೀಸಿದಾಗಲ್ಲೆಲ್ಲ ಮಿಸುಕಾಡುತ್ತಿದ್ದ ಎಲೆಗಳು ತಂಪಾದ ಹವೆಯನ್ನು ನೀಡುತಿದ್ದವು. ಒಟ್ಟಿನಲ್ಲಿ ಮಳ್ಳೂರು ಸಮೀಪದ ಸಾಯಿನಾಥ ಜ್ಞಾನಮಂದಿರದ ಆರನೇ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಈ ಎಲ್ಲ ಸಂಗತಿಗಳು ಇನ್ನಷ್ಟು ಮೆರಗು ತಂದಿದ್ದವು.<br /> <br /> ಸೋಮವಾರದಿಂದ ಬುಧವಾರ ದವರೆಗೆ ಪ್ರತಿ ದಿನ ವೈವಿಧ್ಯಮಯ ಕಾರ್ಯಕ್ರಮಗಳನ್ನು ಸಾಯಿನಾಥ ಜ್ಞಾನಮಂದಿರ ಉಣಬಡಿಸಿತು.<br /> <br /> ಗಣ ಹೋಮ, ಸುದರ್ಶನ ಹೋಮ, ದುರ್ಗಾ ಹೋಮ, ಮಹಾಲಕ್ಷ್ಮೀ ದೇವಿ ವಿಗ್ರಹಕ್ಕೆ ಲಕ್ಷಾರ್ಚನೆ, ಸತ್ಯನಾರಾಯಣಸ್ವಾಮಿ ಪೂಜೆ, ಕಲಶಗಳ ಸಮೇತ ಲಕ್ಷ್ಮೀ ನರ ಸಿಂಹ ಸ್ವಾಮಿ ದೇವಾಲಯಕ್ಕೆ ಪಲ್ಲಕ್ಕಿ ಮೆರವಣಿಗೆ, ವಿವಿಧ ದೇವರುಗಳಿಗೆ ಕುಂಭಾಭಿಷೇಕ, ತೀರ್ಥ, ಪ್ರಸಾದ ವಿನಿಯೋಗಗಳು ನಡೆದವು. <br /> <br /> ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶ್ರೀದೇವಿ ಭರತನಾಟ್ಯ ಪ್ರದರ್ಶಿಸಿದರೆ, ಯುಕ್ತ ಅಕಾಡೆಮಿ ತಂಡದವರು ನೃತ್ಯ, ಯೋಗ ಮತ್ತು ಜಂಬೆ ಪ್ರದರ್ಶನ ನಡೆಸಿ ಕೊಟ್ಟರು. ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.<br /> <br /> `ಚಿಕ್ಕಬಳ್ಳಾಪುರ ಜಿಲ್ಲೆಯವನಾದ ನನ್ನನ್ನು ನಾಡಿನ ಕಲಾಭಿಮಾನಿಗಳು ಪೋಷಿಸಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಕಲಾವಿದರಿಗೆ ಕೊರತೆಯಿಲ್ಲ. ನಾಟ್ಯ ಪ್ರದರ್ಶನ ನೀಡಿರುವ ಮಕ್ಕಳು ಇದನ್ನು ಪುಷ್ಟೀಕರಿಸಿದ್ದಾರೆ. <br /> <br /> ಮಳ್ಳೂರಿಗೆ ನಾನು ಹಲವು ಬಾರಿ ಭೇಟಿ ನೀಡಿದ್ದು, ಇಲ್ಲಿ ಆಪ್ತ ಸ್ನೇಹಿತರು ಇದ್ದಾರೆ. ಗ್ರಾಮೀಣ ಭಾಗದಲ್ಲಿದ್ದರೂ ಧಾರ್ಮಿಕ, ಆಧ್ಯಾತ್ಮ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಈ ದೇವಾಲಯದಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ~ ಎಂದು ನಟ ಶ್ರೀನಿವಾಸಮೂರ್ತಿ ತಿಳಿಸಿದರು.<br /> <br /> `ಕಾರ್ಯಕರ್ತರು ಶ್ವೇತ ವಸ್ತ್ರಧಾರಿ ಗಳಾಗಿ ತಮ್ಮದೇ ಆದ ಚಟುವಟಿಕೆ ಗಳಲ್ಲಿ ನಿರತರಾಗಿದ್ದರೆ, ಭಕ್ತರು ಪ್ರಶಾಂತವಾದ ವಾತಾವರಣದಲ್ಲಿ ತಮ್ಮ ದುಗುಡವನ್ನು ಮರೆತು ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿಯಿಂದ ಕಾಲ ಕಳೆಯುತ್ತಿದ್ದರು. ದೇವರನ್ನು ಮತ್ತು ದೇವಾಲಯವನ್ನು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. <br /> <br /> ದೂರದ ಊರುಗಳಿಂದ ಆಗಮಿಸಿದ್ದ ಭಕ್ತರಿಗೆ ನೀರು, ಊಟ ಮುಂತಾದ ಉಪಚಾರ ಮಾಡಿದರು. ಶಿರಡಿಗೆ ಹೋಗಲು ಕಷ್ಟ ವಾಗುವವರಿಗೆ ನಮ್ಮಲ್ಲೇ ಶಿರಡಿಯ ದೇವರನ್ನು ಸಾಕ್ಷಾತ್ಕರಿಸಿಕೊಂಡಂತಹ ಅನುಭವ ಈ ದೇವಾಲಯದ್ಲ್ಲಲಿ ಆಗುತ್ತಿದೆ~ ಎಂದು ಶಿಕ್ಷಕ ದೇವರಾಜ್ ತಿಳಿಸಿದರು.<br /> <br /> ನಟ ರಮೇಶ್ಭಟ್, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಕಂಠ, ರಂಗನಾಥ ರಾವ್ ಸ್ವಾಮೀಜಿ, ಕೆ.ಎಸ್. ಮುನಿ ನಾರಾಯಣಪ್ಪ, ಎಂ.ನಾರಾಯಣ ಸ್ವಾಮಿ, ಜಿ.ಎಂ.ರಾಮರೆಡ್ಡಿ, ಎಂ.ವೆಂಕಟೇಶ್, ಎ.ಫಿರೋಜ್ ಅಹಮದ್, ಗೋಪಾಲಪ್ಪ, ಅಮರ್, ವೆಂಕಟರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>