<p><strong>ಚಿಕ್ಕಮಗಳೂರು</strong>: ತಾಲ್ಲೂಕಿನ ಕಂಬಿಹಳ್ಳಿಯಲ್ಲಿ ಭದ್ರಾ ವನ್ಯಜೀವಿ ಸಂರಕ್ಷಣ ಟ್ರಸ್ಟ್ ಮುಖ್ಯಸ್ಥ ಡಿ.ವಿ.ಗಿರೀಶ್, ಇತರರ ಮೇಲೆ ಯುವಕರ ಗುಂಪೊಂದು ಈಚೆಗೆ ಹಲ್ಲೆ ನಡೆಸಿದ ಪ್ರಕರಣ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಏಳು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.</p>.<p>ಆರೋಪಿಗಳ ಜಾಡಿನ ಬೆನ್ನತ್ತಿದ ಮೂರು ತಂಡಗಳು ಕೊಡಗು, ಬಳ್ಳಾರಿ, ಇತರ ಜಿಲ್ಲೆಗಳಿಗೆ ತೆರಳಿ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಸಹಿತ ಇತರ ಆರು ಮಂದಿ ಸಿಕ್ಕಿಬಿದ್ದಿದ್ದಾರೆ.</p>.<p>ಪತ್ತೆಯಾಗಿರುವ ಆರೋಪಿಗಳು ಕಂಬಿಹಳ್ಳಿ, ಹೊಸಪೇಟೆ, ಸುತ್ತಲಿನ ಭಾಗದವರು. ಆರೋಪಿಗಳ ವಿಚಾರಣೆ ನಡೆಸಿದ ಹಲ್ಲೆಯ ಕಾರಣಗಳು ಗೊತ್ತಾಗಲಿವೆ. ಈಗಾಗಲೇ ಆರೋಪಿಗಳ ಹಿನ್ನೆಲೆ, ಅಭ್ಯಾಸ, ಚಟುವಟಿಕೆಗಳು ಮೊದಲಾದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆರೋಪಿಗಳ ಬಗ್ಗೆ ಗ್ರಾಮಸ್ಥರು, ಸ್ನೇಹಿತರಿಂದಲೂ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು</strong>: ತಾಲ್ಲೂಕಿನ ಕಂಬಿಹಳ್ಳಿಯಲ್ಲಿ ಭದ್ರಾ ವನ್ಯಜೀವಿ ಸಂರಕ್ಷಣ ಟ್ರಸ್ಟ್ ಮುಖ್ಯಸ್ಥ ಡಿ.ವಿ.ಗಿರೀಶ್, ಇತರರ ಮೇಲೆ ಯುವಕರ ಗುಂಪೊಂದು ಈಚೆಗೆ ಹಲ್ಲೆ ನಡೆಸಿದ ಪ್ರಕರಣ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಏಳು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.</p>.<p>ಆರೋಪಿಗಳ ಜಾಡಿನ ಬೆನ್ನತ್ತಿದ ಮೂರು ತಂಡಗಳು ಕೊಡಗು, ಬಳ್ಳಾರಿ, ಇತರ ಜಿಲ್ಲೆಗಳಿಗೆ ತೆರಳಿ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಸಹಿತ ಇತರ ಆರು ಮಂದಿ ಸಿಕ್ಕಿಬಿದ್ದಿದ್ದಾರೆ.</p>.<p>ಪತ್ತೆಯಾಗಿರುವ ಆರೋಪಿಗಳು ಕಂಬಿಹಳ್ಳಿ, ಹೊಸಪೇಟೆ, ಸುತ್ತಲಿನ ಭಾಗದವರು. ಆರೋಪಿಗಳ ವಿಚಾರಣೆ ನಡೆಸಿದ ಹಲ್ಲೆಯ ಕಾರಣಗಳು ಗೊತ್ತಾಗಲಿವೆ. ಈಗಾಗಲೇ ಆರೋಪಿಗಳ ಹಿನ್ನೆಲೆ, ಅಭ್ಯಾಸ, ಚಟುವಟಿಕೆಗಳು ಮೊದಲಾದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆರೋಪಿಗಳ ಬಗ್ಗೆ ಗ್ರಾಮಸ್ಥರು, ಸ್ನೇಹಿತರಿಂದಲೂ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>