12 ಮಂದಿ ಸ್ನೇಹಿತರೊಂದಿಗೆ ಮಧುಸೂದನ್ ಟಿಟಿ ವಾಹನದಲ್ಲಿ ಧರ್ಮಸ್ಥಳದತ್ತ ಸಾಗುತ್ತಿದ್ದರು. ಕೊಟ್ಟಿಗೆಹಾರದಲ್ಲಿ ವಾಹನವನ್ನು ನಿಲ್ಲಿಸಲಾಗಿತ್ತು. ಈ ವೇಳೆ ಶೌಚಾಲಯಕ್ಕೆ ತೆರಳಿದ್ದ ಮಧುಸೂದನ್ ಕುಸಿದು ಬಿದ್ದಿದ್ದರು. ಸ್ನೇಹಿತರು ಮತ್ತು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದರು. ಅಷ್ಟರಲ್ಲಿ ಮಧುಸೂದನ್ ಮೃತಪಟ್ಟಿದ್ದರು ಎಂದು ಬಣಕಲ್ ಪೊಲೀಸರು ತಿಳಿಸಿದ್ದಾರೆ.