<p><strong>ಕಡೂರು (ಚಿಕ್ಕಮಗಳೂರು):</strong> ಅಮೃತ ಮಹಲ್ ತಳಿಯ ‘ಬಿ.18-39 ಮಸಣಿ’ ಎಂಬ ಬೀಜದ ಹೋರಿ ₹2.32 ಲಕ್ಷಕ್ಕೆ ಬುಧವಾರ ಇಲ್ಲಿ ಹರಾಜಾಯಿತು.</p>.<p>ಹೋರಿ ಕರುಗಳ ಹರಾಜು ಪ್ರಕ್ರಿಯೆ ಬೀರೂರಿನ ಅಮೃತ ಮಹಲ್ ತಳಿ ಸಂವರ್ಧನಾ ಕೇಂದ್ರದಲ್ಲಿ ನಡೆಯಿತು. ಬೀಜದ ಹೋರಿ ಬರುತ್ತಿದ್ದಂತೆ ರೈತರು ಕೇಕೆ ಹಾಕಿ ಸಂಭ್ರಮಿಸಿದರು.</p>.<p>ಸರ್ಕಾರಿ ಸವಾಲು ₹30 ಸಾವಿರದಿಂದ ಆರಂಭವಾಯಿತು. ಒಮ್ಮೆಲೆ ರೈತರೊಬ್ಬರು ₹1.50 ಲಕ್ಷಕ್ಕೆ ಕೂಗಿದರು. ನಂತರ ಏರಿಕೆಯಲ್ಲೇ ಸಾಗಿ ₹2.32 ಲಕ್ಷಕ್ಕೆ ಹರಾಜಾಯಿತು. ಶಿವಮೊಗ್ಗ ತಾಲ್ಲೂಕು ಕಪ್ಪನಹಳ್ಳಿಯ ರವಿಕುಮಾರ್ ಬಿಡ್ ಕೂಗಿ ಹೋರಿಯನ್ನು ಪಡೆದುಕೊಂಡರು.</p>.<p>ಜೋಡಿ ಕರುಗಳ ಪೈಕಿ ಗಂಗೆ ಮತ್ತು ಗಾಳಿಕೆರೆ ಎಂಬ ಜೋಡಿಗಳು ₹2,07,500ಕ್ಕೆ ಹರಾಜಾದವು. ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಹೊಸೂರಿನ ವೀರೇಂದ್ರ ಪಾಟೀಲ ಈ ಹೋರಿಗಳನ್ನು ಖರೀದಿಸಿದರು. ಬಣ್ಣದ ಸರ ಮತ್ತು ಗಾಳಿಕೆರೆ ಎಂಬ ಜೋಡಿ ₹2,03,500ಕ್ಕೆ ಶಿಕಾರಿಪುರದ ಈಸೂರಿನ ಬಸವರಾಜು ಎಂಬವರ ಪಾಲಾದವು.</p>.<p>170 ಹೋರಿ ಕರುಗಳು, 8 ಬೀಜದ ಹೋರಿಗಳನ್ನು ಹರಾಜು ಮಾಡಲಾಯಿತು. ಹರಾಜಿನಲ್ಲಿ ಒಟ್ಟು ₹91 ಲಕ್ಷ ಸಂಗ್ರಹವಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಡೂರು (ಚಿಕ್ಕಮಗಳೂರು):</strong> ಅಮೃತ ಮಹಲ್ ತಳಿಯ ‘ಬಿ.18-39 ಮಸಣಿ’ ಎಂಬ ಬೀಜದ ಹೋರಿ ₹2.32 ಲಕ್ಷಕ್ಕೆ ಬುಧವಾರ ಇಲ್ಲಿ ಹರಾಜಾಯಿತು.</p>.<p>ಹೋರಿ ಕರುಗಳ ಹರಾಜು ಪ್ರಕ್ರಿಯೆ ಬೀರೂರಿನ ಅಮೃತ ಮಹಲ್ ತಳಿ ಸಂವರ್ಧನಾ ಕೇಂದ್ರದಲ್ಲಿ ನಡೆಯಿತು. ಬೀಜದ ಹೋರಿ ಬರುತ್ತಿದ್ದಂತೆ ರೈತರು ಕೇಕೆ ಹಾಕಿ ಸಂಭ್ರಮಿಸಿದರು.</p>.<p>ಸರ್ಕಾರಿ ಸವಾಲು ₹30 ಸಾವಿರದಿಂದ ಆರಂಭವಾಯಿತು. ಒಮ್ಮೆಲೆ ರೈತರೊಬ್ಬರು ₹1.50 ಲಕ್ಷಕ್ಕೆ ಕೂಗಿದರು. ನಂತರ ಏರಿಕೆಯಲ್ಲೇ ಸಾಗಿ ₹2.32 ಲಕ್ಷಕ್ಕೆ ಹರಾಜಾಯಿತು. ಶಿವಮೊಗ್ಗ ತಾಲ್ಲೂಕು ಕಪ್ಪನಹಳ್ಳಿಯ ರವಿಕುಮಾರ್ ಬಿಡ್ ಕೂಗಿ ಹೋರಿಯನ್ನು ಪಡೆದುಕೊಂಡರು.</p>.<p>ಜೋಡಿ ಕರುಗಳ ಪೈಕಿ ಗಂಗೆ ಮತ್ತು ಗಾಳಿಕೆರೆ ಎಂಬ ಜೋಡಿಗಳು ₹2,07,500ಕ್ಕೆ ಹರಾಜಾದವು. ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಹೊಸೂರಿನ ವೀರೇಂದ್ರ ಪಾಟೀಲ ಈ ಹೋರಿಗಳನ್ನು ಖರೀದಿಸಿದರು. ಬಣ್ಣದ ಸರ ಮತ್ತು ಗಾಳಿಕೆರೆ ಎಂಬ ಜೋಡಿ ₹2,03,500ಕ್ಕೆ ಶಿಕಾರಿಪುರದ ಈಸೂರಿನ ಬಸವರಾಜು ಎಂಬವರ ಪಾಲಾದವು.</p>.<p>170 ಹೋರಿ ಕರುಗಳು, 8 ಬೀಜದ ಹೋರಿಗಳನ್ನು ಹರಾಜು ಮಾಡಲಾಯಿತು. ಹರಾಜಿನಲ್ಲಿ ಒಟ್ಟು ₹91 ಲಕ್ಷ ಸಂಗ್ರಹವಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>