ಸೋಮವಾರ ಬೆಳಗಿನ ಜಾವ 2 ಗಂಟೆ ವೇಳೆಗೆ ದೇವಸ್ಥಾನದ ಆವರಣದ ಹಣ್ಣುಕಾಯಿ ಅಂಗಡಿಗೆ ಕಳ್ಳನೊಬ್ಬ ನುಗ್ಗಿ ಸ್ವಲ್ಪ ಹಣ ಮತ್ತು ಕೆಲ ವಸ್ತುಗಳನ್ನು ದೋಚಿದ್ದಾನೆ. ಆನಂತರ ದೇವಸ್ಥಾನದ ಹುಂಡಿಯನ್ನು ಆತ ಒಡೆಯುವ ಯತ್ನದಲ್ಲಿ ಇದ್ದಾಗ ದೇವಸ್ಥಾನದ ಕಾವಲುಗಾರರು ಕಳ್ಳನನ್ನು ಹಿಡಿದು, ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಠಾಣಾಧಿಕಾರಿ ಭರಮಪ್ಪ ಬೆಳಗಲಿ ನೇತೃತ್ವದಲ್ಲಿ ಪೊಲೀಸರು ಕಳ್ಳನನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತನನ್ನು ಶಿಕಾರಿಪುರ ತಾಲ್ಲೂಕಿನ ಬೇಗೂರು ಗ್ರಾಮದ ಚಂದ್ರಶೇಖರ ಎಂದು ಗುರುತಿಸಲಾಗಿದೆ.