ಇದೇ ಸಂದರ್ಭದಲ್ಲಿ ‘ಶಿವಶಕ್ತಿ ವೇದಾಂತ ಮತ್ತು ವಿಜ್ಞಾನ ಸಮನ್ವಯ’ ಹಾಗೂ ‘ರಂಭಾಪುರಿ ಬೆಳಗು’ ಪತ್ರಿಕೆ ಬಿಡುಗಡೆಗೊಳಿಸಿದರು.
ವಿಜಯನಗರ ಜಿಲ್ಲೆ ಕೊಟ್ಟೂರು ತಾಲ್ಲೂಕಿನ ಕೆ.ಅಯ್ಯನಹಳ್ಳಿ ಗ್ರಾಮದ ಮಠಸ್ಥರು ಮತ್ತು ಭಕ್ತರು ಸೇರಿ ಗ್ರಾಮಕ್ಕೆ ಬರುವಂತೆ ವಿನಂತಿಸಿಕೊಂಡರು. ಸಂಗೊಳ್ಳಿ, ನುಗ್ಗೇಹಳ್ಳಿ, ರಾಯಚೂರು ಮಂಗಳವಾರ ಪೇಟೆ, ರೌಡಕುಂದ, ಪಾಲ್ತೂರು, ಮಾಜಲಗಾಂವ ಮಠದ ಸ್ವಾಮೀಜಿಗಳು ಪಾಲ್ಗೊಂಡಿದ್ದರು. ಮಲೆಬೆನ್ನೂರಿನ ಬಿ.ಎಂ.ನಂಜಯ್ಯ ಮತ್ತು ಮಕ್ಕಳು ಅನ್ನದಾಸೋಹ ನೆರವೆರಿಸಿದರು. ಬೆಳಿಗ್ಗೆ ಪೀಠದ ಎಲ್ಲ ದೇವರಿಗೆ ವಿಶೇಷ ಪೂಜೆ ನೆರವೇರಿತು.