ಪಟ್ಟಣದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಾಥರಸ್ನಲ್ಲಿ ಸಾಮೂಹಿಕವಾಗಿ ಅತ್ಯಾಚಾರ ನಡೆಸಿ, ಯುವತಿಯ ನಾಲಿಗೆ ಕತ್ತರಿಸಿ, ಭೀಕರವಾಗಿ ಕೊಲೆ ಮಾಡಲಾಗಿದೆ. ಇದೀಗ ಘಟನೆಯನ್ನು ತಿರುಚುವ ಸಲುವಾಗಿ ಕಾಂಗ್ರೆಸ್ ನಾಯಕರ ಮೇಲೆ ದೌರ್ಜನ್ಯ ನಡೆಸಿರುವುದಲ್ಲದೆ, ಎಸ್ಡಿಪಿಐ ಹಾಗೂ ಪಿಎಫ್ಐ ತಲೆಗೆ ಕಟ್ಟಿ ಪ್ರಕರಣದ ಹಾದಿ ತಪ್ಪಿಸಲಾಗುತ್ತಿದೆ. ಈ ಘಟನೆಯ ಅತ್ಯಾಚಾರಿಗಳನ್ನು ರಕ್ಷಣೆ ಮಾಡಲು ಸರ್ಕಾರವೇ ಮುಂದೆ ಬಂದಿದೆ. ಯುವತಿಯ ಶವದ ಮುಖವನ್ನು ಪೋಷಕರಿಗೆ ತೋರಿಸದೇ, ಸಾಕ್ಷಿ ನಾಶಪಡಿಸುವ ಸಲುವಾಗಿ ಮಧ್ಯರಾತ್ರಿ ಸುಟ್ಟುಹಾಕಲಾಗಿದೆ’ ಎಂದು ಒತ್ತಾಯಿಸಿದರು.