ಪಟ್ಟಣದಲ್ಲಿ ಸೋಮವಾರ ನಡೆದ ಭದ್ರಾ ಯೋಜನೆಯಲ್ಲಿ ಜಮೀನು ಕಳೆದುಕೊಳ್ಳುವ ರೈತರ ಸಭೆಯಲ್ಲಿ ಮಾತನಾಡಿದ ರೈತ ರವಿಕುಮಾರ್, ‘ಒಂದೆರಡು ಕಿ.ಮೀ. ಅಂತರದ ಬಾಸೂರು, ಕೆದಿಗೆರೆ, ಚಿಕ್ಕನಲ್ಲೂರಿನಲ್ಲಿ ಎಕರೆಗೆ ₹ 1 ಕೋಟಿ ಪರಿಹಾರ ನಿಗದಿಗೊಳಿಸಿದೆ. ಆದರೆ, ನಮ್ಮ ಭಾಗದ ಚಿಣ್ಣಾಪುರ, ಸೌತನಹಳ್ಳಿಯಲ್ಲಿ ₹ 3 ಲಕ್ಷ, ಕಾಟಿಗನರೆಯಲ್ಲಿ ₹ 6 ಲಕ್ಷ, ಸೊಲ್ಲಾಪುರದಲ್ಲಿ ₹ 11 ಲಕ್ಷ ಪರಿಹಾರ ನಿಗದಿ ಮಾಡಲಾಗಿದೆ. ಇಂತಹ ತಾರತಮ್ಯ ಬಿಟ್ಟು ಸರಿಯಾದ ಪರಿಹಾರ ನೀಡಿ’ ಎಂದು ಆಗ್ರಹಿಸಿದರು.