‘ತಾಲ್ಲೂಕಿನ 118 ಕೆರೆಗಳೂ ಸೇರಿದಂತೆ ತರೀಕೆರೆ, ಚಿಕ್ಕಮಗಳೂರು ಹಾಗೂ ತರೀಕೆರೆ ಕ್ಷೇತ್ರಗಳ ಕೆರೆಗಳು ಈ ಯೋಜನೆಯಲ್ಲಿ ಸೇರಿವೆ. ಮದಗದ ಕೆರೆಗೆ ಬೀರೂರು ಬಳಿಯ ದೇವನಕೆರೆ ವರೆಗೆ ಗುರುತ್ವಾಕರ್ಷಣಾ ಶಕ್ತಿ ಮೂಲಕ ನೀರು ಬರಲಿದ್ದು, ಅಲ್ಲಿಂದ ಮದಗದ ಕೆರೆ ಮತ್ತು ಅದರ ಆಶ್ರಿತ 18 ಕೆರೆಗಳಿಗೆ ಪಂಪ್ ಮೂಲಕ ನೀರು ಪೂರೈಕೆಸಲು ಪಂಪ್ ಹೌಸ್ ಕಾಮಗಾರಿ ಪ್ರಗತಿಯಲ್ಲಿದೆ. ಮೂರು ಕಡೆ ಭೂ ಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಿ ಪೂರ್ಣಗೊಳಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ’ ಎಂದು ತಿಳಿಸಿದರು.