<p><strong>ಬೀರೂರು:</strong> ಹಿಂದೂ-ಮುಸ್ಲಿಂ ಭಾವೈಕ್ಯದ ಹಬ್ಬ ಮೊಹರಂ ಆಚರಣೆಗೆ ಬೀರೂರು ಪಟ್ಟಣದಲ್ಲಿ ಗುರುವಾರ ರಾತ್ರಿ ಚಾಲನೆ ನೀಡಲಾಯಿತು.</p>.<p>ಸಂಪ್ರದಾಯದಂತೆ ಹಬ್ಬ ಆಚರಿಸುವವರು ತಾವು ಪೂಜಿಸುವ ಪಂಜಾಗಳನ್ನು ಮೆರವಣಿಗೆಯಲ್ಲಿ ತಂದು ಬಿ.ಎಚ್.ರಸ್ತೆಯ ಢಾಲ್ ಸಿದ್ದೀಕ್ ಮಕಾನ್, ಅಜ್ಜಂಪುರ ರಸ್ತೆಯ ಬಾರಾ ಮಕಾನ್, ಅಂಜುಮನ್ ಮೊಹಲ್ಲಾದ ಚಾಂದ್ಪೀರ್ ಮಕಾನ್ಗಳಲ್ಲಿ ಸ್ಥಾಪಿಸಿದರು.</p>.<p>ಬೀರೂರು ಹಳೇಪೇಟೆಯಲ್ಲಿರುವ ಮರಾಠಾ ಸಮುದಾಯದ ಹಲವರಲ್ಲಿ ಮೊಹರಂ ಆಚರಣೆ ರೂಢಿಯಲ್ಲಿದ್ದು, ಅವರು ಪಂಜಾಗಳನ್ನು ಮಹಾನವಮಿ ಬಯಲಿನ ಸಮೀಪದ ಧೋಂಡಿ ಮಕಾನ್ನಲ್ಲಿ ಸ್ಥಾಪಿಸಿದರು.</p>.<p>ಮಕಾನ್ಗಳ ಮುಂದೆ ದೊಡ್ಡ ಗುಂಡಿಗಳನ್ನು ತೆಗೆದು ಸೌದೆ ಉರಿ ಹಾಕಿದ್ದು, ಶನಿವಾರ ರಾತ್ರಿ ಉಪವಾಸವಿದ್ದು ಕೆಂಡ ಹಾಯುವ ಆಚರಣೆ ನಡೆಯಲಿದೆ.</p>.<p>ಭಾನುವಾರ ಬೆಳಿಗ್ಗೆ ಪಂಜಾಗಳಿಗೆ ಚೋಂಗೆ (ಗೋಧಿಯ ಸಿಹಿತಿಂಡಿ) ನೈವೇದ್ಯ ಅರ್ಪಿಸಿ ಮೆರವಣಿಗೆಯಲ್ಲಿ ಕೊಂಡೊಯ್ದು, ಎಲ್ಲ ಮಕಾನ್ಗಳ ಭೇಟಿ ಸಮಯದಲ್ಲಿ ಕಾಬಾ ಪ್ರತಿಕೃತಿಯ ತಾಬೂತ್ಗಳ ಮೆರವಣಿಗೆಯೂ ನಡೆಯುವುದು. ರಾತ್ರಿ ಸಕ್ಕರೆ ಓದಿಸುವುದು, ತಾಬೂತ್ಗಳ ವಿಸರ್ಜನೆಯೊಂದಿಗೆ ಮೊಹರಂ ಆಚರಣೆಗೆ ತೆರೆ ಬೀಳಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀರೂರು:</strong> ಹಿಂದೂ-ಮುಸ್ಲಿಂ ಭಾವೈಕ್ಯದ ಹಬ್ಬ ಮೊಹರಂ ಆಚರಣೆಗೆ ಬೀರೂರು ಪಟ್ಟಣದಲ್ಲಿ ಗುರುವಾರ ರಾತ್ರಿ ಚಾಲನೆ ನೀಡಲಾಯಿತು.</p>.<p>ಸಂಪ್ರದಾಯದಂತೆ ಹಬ್ಬ ಆಚರಿಸುವವರು ತಾವು ಪೂಜಿಸುವ ಪಂಜಾಗಳನ್ನು ಮೆರವಣಿಗೆಯಲ್ಲಿ ತಂದು ಬಿ.ಎಚ್.ರಸ್ತೆಯ ಢಾಲ್ ಸಿದ್ದೀಕ್ ಮಕಾನ್, ಅಜ್ಜಂಪುರ ರಸ್ತೆಯ ಬಾರಾ ಮಕಾನ್, ಅಂಜುಮನ್ ಮೊಹಲ್ಲಾದ ಚಾಂದ್ಪೀರ್ ಮಕಾನ್ಗಳಲ್ಲಿ ಸ್ಥಾಪಿಸಿದರು.</p>.<p>ಬೀರೂರು ಹಳೇಪೇಟೆಯಲ್ಲಿರುವ ಮರಾಠಾ ಸಮುದಾಯದ ಹಲವರಲ್ಲಿ ಮೊಹರಂ ಆಚರಣೆ ರೂಢಿಯಲ್ಲಿದ್ದು, ಅವರು ಪಂಜಾಗಳನ್ನು ಮಹಾನವಮಿ ಬಯಲಿನ ಸಮೀಪದ ಧೋಂಡಿ ಮಕಾನ್ನಲ್ಲಿ ಸ್ಥಾಪಿಸಿದರು.</p>.<p>ಮಕಾನ್ಗಳ ಮುಂದೆ ದೊಡ್ಡ ಗುಂಡಿಗಳನ್ನು ತೆಗೆದು ಸೌದೆ ಉರಿ ಹಾಕಿದ್ದು, ಶನಿವಾರ ರಾತ್ರಿ ಉಪವಾಸವಿದ್ದು ಕೆಂಡ ಹಾಯುವ ಆಚರಣೆ ನಡೆಯಲಿದೆ.</p>.<p>ಭಾನುವಾರ ಬೆಳಿಗ್ಗೆ ಪಂಜಾಗಳಿಗೆ ಚೋಂಗೆ (ಗೋಧಿಯ ಸಿಹಿತಿಂಡಿ) ನೈವೇದ್ಯ ಅರ್ಪಿಸಿ ಮೆರವಣಿಗೆಯಲ್ಲಿ ಕೊಂಡೊಯ್ದು, ಎಲ್ಲ ಮಕಾನ್ಗಳ ಭೇಟಿ ಸಮಯದಲ್ಲಿ ಕಾಬಾ ಪ್ರತಿಕೃತಿಯ ತಾಬೂತ್ಗಳ ಮೆರವಣಿಗೆಯೂ ನಡೆಯುವುದು. ರಾತ್ರಿ ಸಕ್ಕರೆ ಓದಿಸುವುದು, ತಾಬೂತ್ಗಳ ವಿಸರ್ಜನೆಯೊಂದಿಗೆ ಮೊಹರಂ ಆಚರಣೆಗೆ ತೆರೆ ಬೀಳಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>