ಚಿಕ್ಕಮಗಳೂರು: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿರುವ ನಿಮಿತ್ತ ಪಕ್ಷದ ಕಾರ್ಯಕರ್ತರು, ಮುಖಂಡರು ನಗರದಲ್ಲಿ ಸಿಹಿ ಹಂಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಕಾರ್ಯಕರ್ತರು ಪಕ್ಷದ ಬಾವುಟ ಹಾಗೂ ಮೋದಿ ಕಟೌಟ್ ಹಿಡಿದು ನಗರದ ಬಿಜೆಪಿ ಕಚೇರಿಯಿಂದ ಆಜಾದ್ ಪಾರ್ಕ್ ವೃತ್ತದವರೆಗೆ ಮೆರವಣಿಗೆ ನಡೆಸಿದರು. ಮೆರವಗಣಿಗೆಯುದ್ದಕ್ಕೂ ಬಿಜೆಪಿ, ಮೋದಿ ಪರ ಘೋಷಣೆ ಮೊಳಗಿದವು.
ಆಜಾದ್ ಪಾರ್ಕ್ ವೃತ್ತದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕುಣಿದು, ಜಿಗಿದು ಖುಷಿಪಟ್ಟರು. ಜನರಿಗೆ ಸಹಿ ಹಂಚಿದರು.
ಕೆಲ ಕಾರ್ಯಕರ್ತರು ಬೈಕುಗಳಲ್ಲಿ ಬಿಜೆಪಿ ಬಾವುಟ ಕಟ್ಟಿಕೊಂಡು ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿದರು. ನಗರದ ವಿವಿಧೆಡೆ ಪಟಾಕಿ ಸಿಡಿಸಿದರು.
ಬಿಜೆಪಿ ಮುಖಂಡ ದೇವರಾಜ್ ಶೆಟ್ಟಿ ‘ಪ್ರಜಾವಾಣಿ’ಜತೆ ಮಾತನಾಡಿ, ದೇಶದಲ್ಲಿ ಮೋದಿ ಅಲೆ ಇರುವುದು ಫಲಿತಾಂಶದಲ್ಲಿ ಸಾಬೀತಾಗಿದೆ. ಗೆಲುವು ಸಾಧಿಸಿರುವ ಶೋಭಾ ಕರಂದ್ಲಾಜೆ ಕರಂದ್ಲಾಜೆ ಅವರು ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಲು ಶ್ರಮಿಸಬೇಕು’ ಎಂದರು.
ಪಕ್ಷದ ಮುಖಂಡರಾದ ಕನಕರಾಜ್ ಅರಸ್, ಜಯರಾಮ್, ರಾಜಪ್ಪ, ಸಿ.ಎಚ್.ಲೋಕೇಶ್, ಎನ್.ಎಂ.ಮಂಜುನಾಥ್, ಸೀತಾರಾಮ್ ಭರಣ್ಯ, ವೆಂಕಟೇಶ್ ಇದ್ದರು.