‘ಸೂರುಮನೆ ಬಳಿ ಜಲಪಾತ ವೀಕ್ಷಿಸಲು ಗುತ್ಯಡ್ಕದ ಶ್ರೀನಿವಾಸ ಗೌಡ ಅವರ ಮಗ ವಂಶಿತ್ (15) ತನ್ನ ಸ್ನೇಹಿತರ ಜೊತೆ ಮಧ್ಯಾಹ್ನ 2 ಗಂಟೆ ವೇಳೆಗೆ ತೆರಳಿದ್ದನು. ತನಗೆ ಈಜು ಬರುತ್ತದೆ ಎಂದು ಆಳದ ಪ್ರದೇಶದಲ್ಲಿ ಈಜಲು ತೆರಳಿದ್ದನು. ಇದನ್ನು ಕಂಡು ಜೊತೆಗೆ ಇದ್ದವರು ಎಚ್ಚರಿಕೆಯ ಮಾತನ್ನು ಆಡಿದರೂ ಕೇಳದೆ ಆಳದ ಪ್ರದೇಶದಲ್ಲಿ ಈಜುವಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ’ ಎಂದು ಸಬ್ ಇನ್ಸ್ಪೆಕ್ಟರ್ ಮಂಜಯ್ಯ ಮಾಹಿತಿ ನೀಡಿದ್ದಾರೆ.