<p><strong>ಚಿಕ್ಕಮಗಳೂರು: </strong>ಕಂದಾಯ ಸಚಿವ ಆರ್.ಅಶೋಕ್ ಅವರ ಆಪ್ತ ಸಹಾಯಕ ಗಂಗಾಧರ್ ಎಂಬಾತ ಹಣಕ್ಕಾಗಿ ಬೇಡಿಕೆ ಇಟ್ಟು, ಬೆದರಿಕ ಹಾಕಿದ್ದಾರೆ ಎಂದು ಶೃಂಗೇರಿಯ ಉಪ ನೋಂದಣಾಧಿಕಾರಿ ಎಚ್.ಎಸ್.ಚಲುವರಾಜು ದೂರು ದಾಖಲಿಸಿದ್ದಾರೆ.</p>.<p>ಶೃಂಗೇರಿಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಜ.24ಕ್ಕೆ ಶೃಂಗೇರಿಗೆ ಸಚಿವ ಅಶೋಕ್ ಭೇಟಿ ನಿಗದಿಯಾಗಿತ್ತು. 7760666222 ಮೊಬೈಲ್ ಸಂಖ್ಯೆಯಿಂದ ಸಚಿವರ ಪ್ರವಾಸ ವೇಳಾಪಟ್ಟಿಯನ್ನು ವ್ಯಕ್ತಿಯೊಬ್ಬರು ನನಗೆ ರವಾನಿಸಿದ್ದರು ಎಂದು ತಿಳಿಸಿದ್ದಾರೆ.</p>.<p>24ರಂದು 10 ಗಂಟೆ ಸಮಯದಲ್ಲಿ 7760666222 ಮೊಬೈಲ್ ಸಂಖ್ಯೆಯಿಂದ ಒಬ್ಬರು ಫೋನ್ ಮಾಡಿದರು. ಸಚಿವ ಅಶೋಕ್ ಅವರು ಆಪ್ತ ಸಹಾಯಕ ಎಂದು ಪರಿಚಯಿಸಿಕೊಂಡರು. ಶೃಂಗೇರಿಗೆ ಸಂಜೆ ಸಚಿವರು ಬರುತ್ತಾರೆ ಭೇಟಿಯಾಗುವಂತೆ ಸೂಚಿಸಿದರು ಎಂದು ವಿವರಿಸಿದ್ದಾರೆ.</p>.<p>ಅಂದರಂತೆ ಸಚಿವರನ್ನು ಭೇಟಿಯಾಗಲು ಆದಿಚುಂಚನಗರಿ ಸಮುದಾಯ ಭವನಕ್ಕೆ ಸಂಜೆ 6 ಗಂಟೆಗೆ ಹೋದೆ. ಸಚಿವರ ಆಪ್ತ ಸಹಾಯಕ ಗಂಗಾಧರ ಎಂಬುವವರು ಸಮದಾಯ ಭವನ ಕೊಠಡಿಯೊಳಕ್ಕೆ ಕರೆದೊಯ್ದರು. ಹಣಕ್ಕೆ ಬೇಡಿಕೆ ಇಟ್ಟರು. ರಾತ್ರಿ 7ರಿಂದ 8.30ರ ಸಮಯದಲ್ಲಿ ಇದು ನಡೆಯಿತು ಎಂದು ಉಲ್ಲೇಖಿಸಿದ್ದಾರೆ.</p>.<p>’ನಾನು ಯಾರಿಗೂ ಈ ರೀತಿ ಹಣ ನೀಡುವ ಅಥವಾ ಯಾರಿಂದಲೂ ಹಣ ಪಡೆಯುವ ಅಭ್ಯಾಸ ಇಟ್ಟುಕೊಂಡಿಲ್ಲ ಎಂದು ಸ್ಥಳದಲ್ಲಿಯೇ ಆತನಿಗೆ ತಿಳಿಸಿ, ಬೇಡಿಕೆಯನ್ನು ತಿರಸ್ಕರಿಸಿದೆ. ಇದಕ್ಕೆ ಒಪ್ಪದ ಆತ ನಿಮ್ಮನ್ನು ನೋಡಿಕೊಳ್ಳುತ್ತೇನೆ‘ ಎಂದು ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.</p>.<p>ಫೋನ್ ಸಂಭಾಷಣೆ ರೆಕಾರ್ಡಿಂಗ್ ಸಿ.ಡಿ, ವಾಟ್ಸ್ಆ್ಯಪ್ ಸಂದೇಶದ ಮುದ್ರಿತ ಪ್ರತಿಯನ್ನು ದೂರಿನೊಂದಿಗೆ ಲಗತ್ತಿಸಿರುವುದಾಗಿ ತಿಳಿಸಿದ್ದಾರೆ. ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಸಬೇಕು, ತನಗೆ ರಕ್ಷಣೆಬೇಕು ಎಂದು ಚಲುವರಾಜು ಕೋರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು: </strong>ಕಂದಾಯ ಸಚಿವ ಆರ್.ಅಶೋಕ್ ಅವರ ಆಪ್ತ ಸಹಾಯಕ ಗಂಗಾಧರ್ ಎಂಬಾತ ಹಣಕ್ಕಾಗಿ ಬೇಡಿಕೆ ಇಟ್ಟು, ಬೆದರಿಕ ಹಾಕಿದ್ದಾರೆ ಎಂದು ಶೃಂಗೇರಿಯ ಉಪ ನೋಂದಣಾಧಿಕಾರಿ ಎಚ್.ಎಸ್.ಚಲುವರಾಜು ದೂರು ದಾಖಲಿಸಿದ್ದಾರೆ.</p>.<p>ಶೃಂಗೇರಿಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಜ.24ಕ್ಕೆ ಶೃಂಗೇರಿಗೆ ಸಚಿವ ಅಶೋಕ್ ಭೇಟಿ ನಿಗದಿಯಾಗಿತ್ತು. 7760666222 ಮೊಬೈಲ್ ಸಂಖ್ಯೆಯಿಂದ ಸಚಿವರ ಪ್ರವಾಸ ವೇಳಾಪಟ್ಟಿಯನ್ನು ವ್ಯಕ್ತಿಯೊಬ್ಬರು ನನಗೆ ರವಾನಿಸಿದ್ದರು ಎಂದು ತಿಳಿಸಿದ್ದಾರೆ.</p>.<p>24ರಂದು 10 ಗಂಟೆ ಸಮಯದಲ್ಲಿ 7760666222 ಮೊಬೈಲ್ ಸಂಖ್ಯೆಯಿಂದ ಒಬ್ಬರು ಫೋನ್ ಮಾಡಿದರು. ಸಚಿವ ಅಶೋಕ್ ಅವರು ಆಪ್ತ ಸಹಾಯಕ ಎಂದು ಪರಿಚಯಿಸಿಕೊಂಡರು. ಶೃಂಗೇರಿಗೆ ಸಂಜೆ ಸಚಿವರು ಬರುತ್ತಾರೆ ಭೇಟಿಯಾಗುವಂತೆ ಸೂಚಿಸಿದರು ಎಂದು ವಿವರಿಸಿದ್ದಾರೆ.</p>.<p>ಅಂದರಂತೆ ಸಚಿವರನ್ನು ಭೇಟಿಯಾಗಲು ಆದಿಚುಂಚನಗರಿ ಸಮುದಾಯ ಭವನಕ್ಕೆ ಸಂಜೆ 6 ಗಂಟೆಗೆ ಹೋದೆ. ಸಚಿವರ ಆಪ್ತ ಸಹಾಯಕ ಗಂಗಾಧರ ಎಂಬುವವರು ಸಮದಾಯ ಭವನ ಕೊಠಡಿಯೊಳಕ್ಕೆ ಕರೆದೊಯ್ದರು. ಹಣಕ್ಕೆ ಬೇಡಿಕೆ ಇಟ್ಟರು. ರಾತ್ರಿ 7ರಿಂದ 8.30ರ ಸಮಯದಲ್ಲಿ ಇದು ನಡೆಯಿತು ಎಂದು ಉಲ್ಲೇಖಿಸಿದ್ದಾರೆ.</p>.<p>’ನಾನು ಯಾರಿಗೂ ಈ ರೀತಿ ಹಣ ನೀಡುವ ಅಥವಾ ಯಾರಿಂದಲೂ ಹಣ ಪಡೆಯುವ ಅಭ್ಯಾಸ ಇಟ್ಟುಕೊಂಡಿಲ್ಲ ಎಂದು ಸ್ಥಳದಲ್ಲಿಯೇ ಆತನಿಗೆ ತಿಳಿಸಿ, ಬೇಡಿಕೆಯನ್ನು ತಿರಸ್ಕರಿಸಿದೆ. ಇದಕ್ಕೆ ಒಪ್ಪದ ಆತ ನಿಮ್ಮನ್ನು ನೋಡಿಕೊಳ್ಳುತ್ತೇನೆ‘ ಎಂದು ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.</p>.<p>ಫೋನ್ ಸಂಭಾಷಣೆ ರೆಕಾರ್ಡಿಂಗ್ ಸಿ.ಡಿ, ವಾಟ್ಸ್ಆ್ಯಪ್ ಸಂದೇಶದ ಮುದ್ರಿತ ಪ್ರತಿಯನ್ನು ದೂರಿನೊಂದಿಗೆ ಲಗತ್ತಿಸಿರುವುದಾಗಿ ತಿಳಿಸಿದ್ದಾರೆ. ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಸಬೇಕು, ತನಗೆ ರಕ್ಷಣೆಬೇಕು ಎಂದು ಚಲುವರಾಜು ಕೋರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>