ಸಾರಿಗೆ ಬಸ್ನಲ್ಲಿ ಮೂವತ್ತೊಂದು ಪ್ರಯಾಣಿಕರಿದ್ದು, ಇವರಲ್ಲಿ ಹಲವರಿಗೆ ತಲೆ ಮತ್ತು ಕೈ, ಕಾಲುಗಳಿಗೆ ತೀವ್ರ ಪೆಟ್ಟಾಗಿದ್ದು ಬೀರೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ. ಮಳೆ ಬರುತ್ತಿದ್ದ ಸಂದರ್ಭ ಎದುರಿನಿಂದ ವೇಗವಾಗಿ ಬಂದ ವೋಲ್ವೊ ಬಸ್ನಿಂದ ಪಾರಾಗಲು ಯತ್ನಿಸಿದರೂ ಬ್ರೇಕ್ ಹಿಡಿಯದ ಕಾರಣ ಮುಖಾಮುಖಿ ಡಿಕ್ಕಿ ಸಂಭವಿಸಿತು ಎಂದು ಸಾರಿಗೆ ಬಸ್ ನಿರ್ವಾಹಕ ಮಹೇಶ್ ತಿಳಿಸಿದರು.