ಆಲ್ದೂರು: ಹಲವು ತಿಂಗಳುಗಳಿಂದ ಸಾರ್ವಜನಿಕರು ಬಸ್ಸಿಗಾಗಿ ಕಾಯುತ್ತಿದ್ದ ನಿಲ್ದಾಣವು ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷದಿಂದ ನೆನೆಗುದಿಗೆ ಬಿದ್ದಿದ್ದು ಹಲವು ಬಾರಿ ಸಾರ್ವಜನಿಕರು ಮನವಿ ಮಾಡಿದರು ಸ್ವಚ್ಛಗೊಳಿಸಿರಲಿಲ್ಲ. ಪಟ್ಟಣದ ಪ್ರವೇಶದ ಆರಂಭದಲ್ಲಿ ಸಿಗುವ ಕೆಳ ಆಲ್ದೂರು ಸಾರ್ವಜನಿಕ ಬಸ್ಸು ನಿಲ್ದಾಣವನ್ನು ಬಿಜೆಪಿ ಮುಖಂಡ ವಿಜಯ್ ಕುಮಾರ್ ಮತ್ತು ತಂಡ ಭಾನುವಾರ ಸ್ವಚ್ಛತೆಯನ್ನು ಮಾಡಿ ಬಣ್ಣವನ್ನು ಬೆಳೆದು ದುರಸ್ತಿ ಮಾಡಿದರು ತುಡುಕುರು ಮಂಜುನಾಥ್, ಪ್ರತಿಕ್ ಗೌಡ ಇನ್ನಿತರರು ಇದ್ದರು.