<p><strong>ಶೆಟ್ಟಿಕೊಪ್ಪ(ಎನ್.ಆರ್.ಪುರ):</strong> ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಬೇಕೆಂಬುದು ಉದ್ಯಮಿ ಗದ್ದೆಮನೆ ವಿಶ್ವನಾಥ್ ಅವರ ಕನಸಾಗಿದೆ ಎಂದು ಲಯನ್ಸ್ ಕ್ಲಬ್ ನಿಯೋಜಿತ ಅಧ್ಯಕ್ಷ ಪಿ.ಜೆ.ಅಂಟೋಣಿ ಹೇಳಿದರು.</p>.<p>ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಉದ್ಯಮಿ ಗದ್ದೆಮನೆ ವಿಶ್ವನಾಥ್ (ಶಶಿ) ಅವರು 50 ವಿದ್ಯಾರ್ಥಿಗಳಿಗೆ ಸಮವಸ್ತ್ರಕ್ಕಾಗಿ ನೀಡಿರುವ ₹50 ಸಾವಿರ ದೇಣಿಗೆಯನ್ನು ಎಸ್.ಡಿ.ಎಂ.ಸಿ ಸಮಿತಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.</p>.<p>ಎಸ್.ಡಿ.ಎಂ.ಸಿ ಸಮಿತಿ ಹಾಗೂ ಪೋಷಕರು ಚರ್ಚಿಸಿ, ವಿದ್ಯಾರ್ಥಿಗಳಿಗೆ ಅಗತ್ಯವಿರುವ ಸಾಮಗ್ರಿ ಖರೀದಿಸಿ ದಾನಿಗಳ ಉದ್ದೇಶ ಈಡೇರಿಸಬೇಕು. ಸರ್ಕಾರಿ ಶಾಲೆಗಳತ್ತ ಪೋಷಕರು, ವಿದ್ಯಾರ್ಥಿಗಳು ಮುಖ ಮಾಡಬೇಕು. ತಾಲ್ಲೂಕಿನ 10 ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳನ್ನು ಆಯ್ಕೆ ಮಾಡಲಾಗಿದ್ದು, ಒಬ್ಬ ವಿದ್ಯಾರ್ಥಿಗೆ ತಲಾ ₹1 ಸಾವಿರ ವೆಚ್ಚದಲ್ಲಿ ಶಾಲೆಯ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಪ್ರತಿ ಶಾಲೆಗೆ ದೇಣಿಗೆ ನೀಡಲಾಗಿದೆ. 10 ಶಾಲೆಯ 300 ವಿದ್ಯಾರ್ಥಿಗಳಿಗೆ ₹3 ಲಕ್ಷವನ್ನು ಲಯನ್ಸ್ ಸಂಸ್ಥೆಯ ಉಸ್ತುವಾರಿಯಲ್ಲಿ ವಿತರಿಸಲಾಗಿದೆ ಎಂದರು.</p>.<p>ಲಯನ್ಸ್ ಕ್ಲಬ್ ಅಧ್ಯಕ್ಷ ರವಿಕುಮಾರ್ ಮಾತನಾಡಿ, ‘ಅಳಲಗೆರೆ ಶಾಲೆಗೆ ₹30 ಸಾವಿರ, ಶೀಗುವಾನಿಯ ಶಾಲೆಗೆ ₹17 ಸಾವಿರ, ಬಸ್ತಿಮಠದ ಸರ್ಕಾರಿ ಶಾಲೆಗೆ ₹50 ಸಾವಿರ, ಪ್ರವಾಸಿಮಂದಿರ ಬಳಿಯ ಶಾಲೆಗೆ ₹25 ಸಾವಿರ, ಕಲ್ಲುಗುಡ್ಡೆಯ ಶಾಲೆಗೆ ₹25 ಸಾವಿರ, ಲಿಂಗಾಪುರ ಶಾಲೆಗೆ ₹15 ಸಾವಿರ, ಹೊನ್ನೆಕೂಡಿಗೆಯ ಶಾಲೆಗೆ ₹25 ಸಾವಿರ, ಕುಸುಬೂರು ಶಾಲೆಗೆ ₹25 ಸಾವಿರ, ಶೆಟ್ಟಿಕೊಪ್ಪ ಶಾಲೆಗೆ ₹50 ಸಾವಿರ ಒಟ್ಟು ₹3 ಲಕ್ಷ ದೇಣಿಗೆಯನ್ನು ದಾನಿಗಳು ನೀಡಿದ್ದಾರೆ’ ಎಂದರು.</p>.<p>ಲಯನ್ಸ್ ಕ್ಲಬ್ ಪ್ರಾದೇಶಿಕ ಚೇರ್ಮನ್ ಸಿಜು, ನಿಯೋಜಿತ ಕಾರ್ಯದರ್ಶಿ ಕೆ.ಜೆ.ಎಲ್ದೊ, ಖಜಾಂಚಿ ಈಶ್ವರಾಚಾರ್, ಡಿ.ಸಜಿ, ಕರಗುಂದ ಎಲ್ದೊ, ಸುಭಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಜಗದೀಶ್, ಶಿಕ್ಷಕರಾದ ರಾಧಾಮಣಿ, ಅರುಣ್ ಕುಮಾರ್, ಗಾಯತ್ರಿ, ಮಲ್ಲಿಕಾರ್ಜುನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶೆಟ್ಟಿಕೊಪ್ಪ(ಎನ್.ಆರ್.ಪುರ):</strong> ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಬೇಕೆಂಬುದು ಉದ್ಯಮಿ ಗದ್ದೆಮನೆ ವಿಶ್ವನಾಥ್ ಅವರ ಕನಸಾಗಿದೆ ಎಂದು ಲಯನ್ಸ್ ಕ್ಲಬ್ ನಿಯೋಜಿತ ಅಧ್ಯಕ್ಷ ಪಿ.ಜೆ.ಅಂಟೋಣಿ ಹೇಳಿದರು.</p>.<p>ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಉದ್ಯಮಿ ಗದ್ದೆಮನೆ ವಿಶ್ವನಾಥ್ (ಶಶಿ) ಅವರು 50 ವಿದ್ಯಾರ್ಥಿಗಳಿಗೆ ಸಮವಸ್ತ್ರಕ್ಕಾಗಿ ನೀಡಿರುವ ₹50 ಸಾವಿರ ದೇಣಿಗೆಯನ್ನು ಎಸ್.ಡಿ.ಎಂ.ಸಿ ಸಮಿತಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.</p>.<p>ಎಸ್.ಡಿ.ಎಂ.ಸಿ ಸಮಿತಿ ಹಾಗೂ ಪೋಷಕರು ಚರ್ಚಿಸಿ, ವಿದ್ಯಾರ್ಥಿಗಳಿಗೆ ಅಗತ್ಯವಿರುವ ಸಾಮಗ್ರಿ ಖರೀದಿಸಿ ದಾನಿಗಳ ಉದ್ದೇಶ ಈಡೇರಿಸಬೇಕು. ಸರ್ಕಾರಿ ಶಾಲೆಗಳತ್ತ ಪೋಷಕರು, ವಿದ್ಯಾರ್ಥಿಗಳು ಮುಖ ಮಾಡಬೇಕು. ತಾಲ್ಲೂಕಿನ 10 ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳನ್ನು ಆಯ್ಕೆ ಮಾಡಲಾಗಿದ್ದು, ಒಬ್ಬ ವಿದ್ಯಾರ್ಥಿಗೆ ತಲಾ ₹1 ಸಾವಿರ ವೆಚ್ಚದಲ್ಲಿ ಶಾಲೆಯ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಪ್ರತಿ ಶಾಲೆಗೆ ದೇಣಿಗೆ ನೀಡಲಾಗಿದೆ. 10 ಶಾಲೆಯ 300 ವಿದ್ಯಾರ್ಥಿಗಳಿಗೆ ₹3 ಲಕ್ಷವನ್ನು ಲಯನ್ಸ್ ಸಂಸ್ಥೆಯ ಉಸ್ತುವಾರಿಯಲ್ಲಿ ವಿತರಿಸಲಾಗಿದೆ ಎಂದರು.</p>.<p>ಲಯನ್ಸ್ ಕ್ಲಬ್ ಅಧ್ಯಕ್ಷ ರವಿಕುಮಾರ್ ಮಾತನಾಡಿ, ‘ಅಳಲಗೆರೆ ಶಾಲೆಗೆ ₹30 ಸಾವಿರ, ಶೀಗುವಾನಿಯ ಶಾಲೆಗೆ ₹17 ಸಾವಿರ, ಬಸ್ತಿಮಠದ ಸರ್ಕಾರಿ ಶಾಲೆಗೆ ₹50 ಸಾವಿರ, ಪ್ರವಾಸಿಮಂದಿರ ಬಳಿಯ ಶಾಲೆಗೆ ₹25 ಸಾವಿರ, ಕಲ್ಲುಗುಡ್ಡೆಯ ಶಾಲೆಗೆ ₹25 ಸಾವಿರ, ಲಿಂಗಾಪುರ ಶಾಲೆಗೆ ₹15 ಸಾವಿರ, ಹೊನ್ನೆಕೂಡಿಗೆಯ ಶಾಲೆಗೆ ₹25 ಸಾವಿರ, ಕುಸುಬೂರು ಶಾಲೆಗೆ ₹25 ಸಾವಿರ, ಶೆಟ್ಟಿಕೊಪ್ಪ ಶಾಲೆಗೆ ₹50 ಸಾವಿರ ಒಟ್ಟು ₹3 ಲಕ್ಷ ದೇಣಿಗೆಯನ್ನು ದಾನಿಗಳು ನೀಡಿದ್ದಾರೆ’ ಎಂದರು.</p>.<p>ಲಯನ್ಸ್ ಕ್ಲಬ್ ಪ್ರಾದೇಶಿಕ ಚೇರ್ಮನ್ ಸಿಜು, ನಿಯೋಜಿತ ಕಾರ್ಯದರ್ಶಿ ಕೆ.ಜೆ.ಎಲ್ದೊ, ಖಜಾಂಚಿ ಈಶ್ವರಾಚಾರ್, ಡಿ.ಸಜಿ, ಕರಗುಂದ ಎಲ್ದೊ, ಸುಭಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಜಗದೀಶ್, ಶಿಕ್ಷಕರಾದ ರಾಧಾಮಣಿ, ಅರುಣ್ ಕುಮಾರ್, ಗಾಯತ್ರಿ, ಮಲ್ಲಿಕಾರ್ಜುನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>