ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾರ್ಮಾಡಿ ಘಾಟಿ: ಲಘುವಾಹನ ಸಂಚಾರಕ್ಕೆ ಮುಕ್ತ

Last Updated 15 ಸೆಪ್ಟೆಂಬರ್ 2019, 4:07 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಚಾರ್ಮಾಡಿ ಘಾಟಿ ಮಾರ್ಗವನ್ನು ಇದೇ 15ರಿಂದ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಲಘುವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ದ್ವಿಚಕ್ರ ವಾಹನ, ಕಾರು, ಜೀಪು, ಎಲ್‌ಸಿವಿ ವ್ಯಾನು, ಅಂಬುಲೆನ್ಸ್‌ ವಾಹನ ಇತರ ಲಘುವಾಹನ ಸಂಚಾರಕ್ಕೆ ಅನುಮತಿಸಲಾಗಿದೆ.
ಘಾಟಿ ಮಾರ್ಗದಲ್ಲಿ ಗಂಟೆಗೆ 20 ಕಿಲೊ ಮೀಟರ್‌ ವೇಗ ಮಿತಿಯಲ್ಲಿ ಸಂಚರಿಸಬೇಕು.

ಗುಡ್ಡದಮಣ್ಣು ಕುಸಿದು ಕೆಲವೆಡೆ ರಸ್ತೆ ಹಾನಿಯಾಗಿರುವುದರಿಂದ ಅತ್ಯಂತ ಜಾಗರೂಕವಾಗಿ ಚಾಲನೆ ಮಾಡಬೇಕು. ಚಾರ್ಮಾಡಿ ಭಾಗದದಲ್ಲಿ ಸ್ವಂತಿ (ಸೆಲ್ಫಿ), ಫೋಟೊಗ್ರಫಿ ನಿರ್ಬಂಧಿಸಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಬಗಾದಿ ಗೌತಮ್‌ ಆದೇಶದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT