ಮಂಡ್ಯ ಜಿಲ್ಲೆ ಮದ್ದೂರಿನ ನಿವಾಸಿ ಪ್ರವೀಣ್ (42) ಮೃತಪಟ್ಟವರು. ಮದ್ದೂರಿನ ವಕೀಲರಾದ ಸ್ವಾಮಿ, ಪ್ರಶಾಂತ್, ಉಮೇಶ್ ಕಾರಿನಲ್ಲಿ ದಾವಣಗೆರೆಗೆ ವಿವಾಹಕ್ಕೆ ತೆರಳಿದ್ದು ವಿವಾಹ ಮುಗಿಸಿಕೊಂಡು ಎನ್.ಆರ್.ಪುರದ ಮೂಲಕ ಹೊರನಾಡು ದೇವಸ್ಥಾನಕ್ಕೆ ತೆರಳುವಾಗ ಮುಳುವಳ್ಳಿ ಗ್ರಾಮದ ಸಮೀಪದ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣತಪ್ಪಿ ಕಾರು ಕೆರೆಗೆ ಉರುಳಿಬಿದ್ದಿದೆ. ಕಾರಿನಿಂದ ಹೊರ ಬಂದ ಮೂವರು ವಕೀಲರು ಈಜಿ ದಡ ಸೇರಿದರು. ಆದರೆ ವಾಹನ ಚಾಲನೆ ಮಾಡುತ್ತಿದ್ದ ಪ್ರವೀಣ್ ಸೀಟ್ ಬೆಲ್ಟ್ ತೆಗೆಯಲು ಸಾಧ್ಯವಾಗದಿದ್ದರಿಂದ ಕಾರಿನಿಂದ ಹೊರ ಬರಲು ಸಾಧ್ಯವಾಗದೆ ಮೃತಪಟ್ಟರು.