ಬೇಸಿಗೆ ಸಮಯವಾದ್ದರಿಂದ ಚಿರತೆ ಮತ್ತಿತರ ವನ್ಯಜೀವಿಗಳು ನೀರು ಕುಡಿಯಲು ಗ್ರಾಮಗಳ ಒಳಭಾಗಕ್ಕೆ ಬರುವ ಸಾಧ್ಯತೆಗಳಿದ್ದು, ಗ್ರಾಮಸ್ಥರು ತಮ್ಮ ಜಾನುವಾರುಗಳ ಬಗ್ಗೆ ಜಾಗ್ರತೆ ವಹಿಸಬೇಕಿದೆ. ರಾತ್ರಿ ವೇಳೆ ಹೊಲ–ಗದ್ದೆಗಳಿಗೆ ಹೋಗುವ ರೈತರು ಒಂಟಿಯಾಗಿ ಹೋಗದೆ ಗುಂಪಾಗಿ ಹೋಗಬೇಕು. ಯಾವುದೇ ವನ್ಯಮೃಗಗಳು ಕಂಡರೆ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಅವರು ಕೋರಿದರು.