<p><strong>ಚಿಕ್ಕಮಗಳೂರು</strong>: ಸಾಲ ಪಾವತಿಸದ ಕಾರಣಕ್ಕೆ ಕೊಪ್ಪದಲ್ಲಿನ ಸಹಕಾರ ಸಾರಿಗೆ ಕಚೇರಿಗೆ ಬೀಗ ಜಡಿಯಲಾಗಿದೆ.</p>.<p>ಸಹಕಾರ ಸಾರಿಗೆ ಸಂಸ್ಥೆಯುಶ್ರೀರಾಮ ಟ್ರಾನ್ಸ್ ಪೋರ್ಟ್ ಫೈನಾನ್ಸ್ ಕಂಪನಿಯಿಂದ ಸಾಲ ಪಡೆದಿದ್ದು, ಮರುಪಾವತಿ ಮಾಡಿಲ್ಲ. ಫೈನಾನ್ಸ್ ಕಂಪನಿಯು ಜಿಲ್ಲಾಧಿಕಾರಿ ಕೋರ್ಟ್ನಲ್ಲಿ ದಾವೆ ಹೂಡಿತ್ತು. ಸ್ಥಿರಾಸ್ತಿ ಸುಪರ್ದಿಗೆ ಪಡೆಯಲು ಕೋರ್ಟ್ ಆದೇಶವಾಗಿದೆ.</p>.<p>'ಡಿ.ಸಿ ಕೋರ್ಟ್ ಆದೇಶದಂತೆ ಸಹಕಾರ ಸಾರಿಗೆ ಸಂಸ್ಥೆ ಕಚೇರಿಸುಪರ್ದಿಗೆ ಪಡೆದು ಬೀಗ ಹಾಕಲಾಗಿದೆ. ಶ್ರೀರಾಮ ಸಂಸ್ಥೆಯವರಿಗೆ ಬೀಗ ನೀಡಲಾಗಿದೆ' ಎಂದು ಕೊಪ್ಪ ತಹಶೀಲ್ದಾರ್ ಪರಮೇಶ್'ಪ್ರಜಾವಾಣಿ'ಗೆ ತಿಳಿಸಿದರು.</p>.<p>ಮಲೆನಾಡಿನ ಸಂಪರ್ಕ ಕೊಂಡಿಯಂತಿದ್ದ ಸಹಕಾರ ಸಾರಿಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಎರಡು ವರ್ಷಗಳಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿದೆ. ಸಹಕಾರ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯಮಟ್ಟದಲ್ಲಿ ಹೆಸರು ಗಳಿಸಿದ್ದ ಸಂಸ್ಥೆ ಸಾಲದ ಸುಳಿಗೆ ಸಿಲುಕಿದೆ. ಸಂಸ್ಥೆಯಲ್ಲಿ<br />250ಕ್ಕೂ ಹೆಚ್ಚು ನೌಕರರು ಇದ್ದು, ಅತಂತ್ರರಾಗಿದ್ದಾರೆ.</p>.<p>ಸಹಕಾರ ಸಾರಿಗೆ ಸಂಸ್ಥೆಯು ಶ್ರೀ ರಾಮ ಟ್ರಾನ್ಸ್ ಪೋರ್ಟ್ ಫೈನಾನ್ಸ್ನಿಂದ ₹ 1.20 ಕೋಟಿ ಸಾಲ ಪಡೆದಿದೆ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು</strong>: ಸಾಲ ಪಾವತಿಸದ ಕಾರಣಕ್ಕೆ ಕೊಪ್ಪದಲ್ಲಿನ ಸಹಕಾರ ಸಾರಿಗೆ ಕಚೇರಿಗೆ ಬೀಗ ಜಡಿಯಲಾಗಿದೆ.</p>.<p>ಸಹಕಾರ ಸಾರಿಗೆ ಸಂಸ್ಥೆಯುಶ್ರೀರಾಮ ಟ್ರಾನ್ಸ್ ಪೋರ್ಟ್ ಫೈನಾನ್ಸ್ ಕಂಪನಿಯಿಂದ ಸಾಲ ಪಡೆದಿದ್ದು, ಮರುಪಾವತಿ ಮಾಡಿಲ್ಲ. ಫೈನಾನ್ಸ್ ಕಂಪನಿಯು ಜಿಲ್ಲಾಧಿಕಾರಿ ಕೋರ್ಟ್ನಲ್ಲಿ ದಾವೆ ಹೂಡಿತ್ತು. ಸ್ಥಿರಾಸ್ತಿ ಸುಪರ್ದಿಗೆ ಪಡೆಯಲು ಕೋರ್ಟ್ ಆದೇಶವಾಗಿದೆ.</p>.<p>'ಡಿ.ಸಿ ಕೋರ್ಟ್ ಆದೇಶದಂತೆ ಸಹಕಾರ ಸಾರಿಗೆ ಸಂಸ್ಥೆ ಕಚೇರಿಸುಪರ್ದಿಗೆ ಪಡೆದು ಬೀಗ ಹಾಕಲಾಗಿದೆ. ಶ್ರೀರಾಮ ಸಂಸ್ಥೆಯವರಿಗೆ ಬೀಗ ನೀಡಲಾಗಿದೆ' ಎಂದು ಕೊಪ್ಪ ತಹಶೀಲ್ದಾರ್ ಪರಮೇಶ್'ಪ್ರಜಾವಾಣಿ'ಗೆ ತಿಳಿಸಿದರು.</p>.<p>ಮಲೆನಾಡಿನ ಸಂಪರ್ಕ ಕೊಂಡಿಯಂತಿದ್ದ ಸಹಕಾರ ಸಾರಿಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಎರಡು ವರ್ಷಗಳಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿದೆ. ಸಹಕಾರ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯಮಟ್ಟದಲ್ಲಿ ಹೆಸರು ಗಳಿಸಿದ್ದ ಸಂಸ್ಥೆ ಸಾಲದ ಸುಳಿಗೆ ಸಿಲುಕಿದೆ. ಸಂಸ್ಥೆಯಲ್ಲಿ<br />250ಕ್ಕೂ ಹೆಚ್ಚು ನೌಕರರು ಇದ್ದು, ಅತಂತ್ರರಾಗಿದ್ದಾರೆ.</p>.<p>ಸಹಕಾರ ಸಾರಿಗೆ ಸಂಸ್ಥೆಯು ಶ್ರೀ ರಾಮ ಟ್ರಾನ್ಸ್ ಪೋರ್ಟ್ ಫೈನಾನ್ಸ್ನಿಂದ ₹ 1.20 ಕೋಟಿ ಸಾಲ ಪಡೆದಿದೆ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>