ಚಿಕ್ಕಮಗಳೂರು: ಗಣಪತಿ ವಿಸರ್ಜಿಸಿ ಟ್ರಾಕ್ಟರ್ ನಲ್ಲಿ ಹಿಂದಿರುಗುವಾಗ ಅದರಲ್ಲಿದ್ದ ಮಂಟಪಕ್ಕೆ ವಿದ್ಯುತ್ ತಂತಿ ತಾಗಿ ಮೂವರು ಮೃತಪಟ್ಟು, ಮೂವರು ಅಸ್ವಸ್ಥಗೊಂಡಿರುವ ಅವಘಡ ಮೂಡಿಗೆರೆ ತಾಲ್ಲೂಕಿನ ಬಿ.ಹೊಸಹಳ್ಳಿಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.
ರಾಜು (47), ರಚನಾ (35), ಪಾರ್ವತಿ(26) ಮೃತಪಟ್ಟವರು.
ಅಸ್ವಸ್ಥರಾಗಿರುವ ಪಲ್ಲವಿ,ಸಂಗೀತಾ, ಗೌರಮ್ಮ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಣಕಲ್ ಠಾಣೆ ಪೊಲೀಸರು ತಿಳಿಸಿದ್ದಾರೆ.
ಮಂಟಪಕ್ಕೆ ವಿದ್ಯುತ್ ತಂತಿ ತಾಗಿ, ವಿದ್ಯುತ್ ಪ್ರವಹಿಸಿ ಅವಘಡ ಸಂಭವಿಸಿದೆ. ತಕ್ಷಣವೇ ಅಸ್ವಸ್ಥರನ್ನು ಮೂಡಿಗೆರೆಯ ಎಂಜಿಎಂ ಆಸ್ಪತ್ರೆಗೆ ಒಯ್ಯಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಮೂವರು ಮೃತಪಟ್ಟಿದ್ದಾರೆ. ಪಲ್ಲವಿ, ಸಂಗೀತಾಅವರನ್ನು ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ಒಯ್ಯಲಾಗಿದೆ.