ಬಳ್ಳಾವರ ಗ್ರಾಮದ ಸರ್ವೆ ನಂಬರ್ 22ರಲ್ಲಿ 353 ಎಕರೆ ಭೂಮಿಯನ್ನು 1930ರಲ್ಲೇ ಅರಣ್ಯ ಭೂಮಿ ಎಂದು ಅಧಿಸೂಚಿಸಲಾಗಿದೆ. ಇದೇ ಜಾಗದಲ್ಲಿ 1999, 2005, 2022ರಲ್ಲಿ ಖಾಸಗಿ ವ್ಯಕ್ತಿಗಳಿಗೆ ಭೂಮಿ ಮಂಜೂರು ಮಾಡಲಾಗಿದೆ. ಈ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ತಹಶೀಲ್ದಾರ್ಗಳಾದ ಕೆ.ಎನ್.ನಾರಾಯಣಪ್ಪ, ಜಿ.ಎಸ್.ನಾಗರಾಜ್ ಮತ್ತು ಪೂರ್ಣಿಮಾ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.