<p><strong>ಚಿಕ್ಕಮಗಳೂರು</strong>: ‘ಕೊಪ್ಪ ತಾಲ್ಲೂಕಿನ ಅಗಲಿ ಗ್ರಾಮದಲ್ಲಿ ಆಟೊ ರಿಕ್ಷಾ ಚಾಲಕ ದೇವರಾಜ್ ಅವರ ಮನೆಯಲ್ಲಿ ಕುಕ್ಕರ್ ಸಿಡಿದು ಮುಚ್ಚಳ ಹಾರಿದೆ.</p>.<p>ರಾಜಕೀಯ ಪಕ್ಷವೊಂದರ ಕಾರ್ಯಕರ್ತರು ಈಚೆಗೆ ಗ್ರಾಮದಲ್ಲಿ ಕುಕ್ಕರ್ ಹಂಚಿದ್ದರು’ ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ. ‘ಆಹಾರ ಬೇಯಿಸಲು ಸ್ಟೌ ಮೇಲೆ ಇಟ್ಟಿದ್ದ ಕುಕ್ಕರ್ ಸಿಡಿದು, ಮುಚ್ಚಳ ಹಾರಿತು. ಜೋರಾಗಿ ಶಬ್ಧವಾಯಿತು. ಯಾರಿಗೂ ಯಾವುದೇ ಅಪಾಯವಾಗಿಲ್ಲ’ ಎಂದು ಕುಟುಂಬದವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ತೋಟದಲ್ಲಿ 65 ಕುಕ್ಕರ್ ಪತ್ತೆ ಜಯಪುರ(ಬಾಳೆಹೊನ್ನೂರು): ಇನ್ನೊಂದು ಪ್ರಕರಣದಲ್ಲಿ, ಸಮೀಪದ ಅಗಳಗಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಟ್ಟೆಕೊಪ್ಪದ ತೋಟದಲ್ಲಿ 65 ಕುಕ್ಕರ್ಗಳನ್ನು ಜಯಪುರ ಪೊಲೀಸರು ಪತ್ತೆ ಮಾಡಿದ್ದಾರೆ.</p>.<p>ಚುನಾವಣೆ ಹಿನ್ನೆಲೆಯಲ್ಲಿ ಹಂಚಿಕೆ ಮಾಡಲು ತಂದಿದ್ದರೆನ್ನಲಾದ ಆರೋಪದ ಅಡಿಯಲ್ಲಿ ಪೊಲೀಸರು ಸುಮಾರು ₹90 ಸಾವಿರ ಮೌಲ್ಯದ ಈ ಕುಕ್ಕರ್ಗಳನ್ನು ವಶಪಡಿಸಿಕೊಂಡು, ಸಂಜ್ಞಾರಹಿತ ಅಪರಾಧ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು</strong>: ‘ಕೊಪ್ಪ ತಾಲ್ಲೂಕಿನ ಅಗಲಿ ಗ್ರಾಮದಲ್ಲಿ ಆಟೊ ರಿಕ್ಷಾ ಚಾಲಕ ದೇವರಾಜ್ ಅವರ ಮನೆಯಲ್ಲಿ ಕುಕ್ಕರ್ ಸಿಡಿದು ಮುಚ್ಚಳ ಹಾರಿದೆ.</p>.<p>ರಾಜಕೀಯ ಪಕ್ಷವೊಂದರ ಕಾರ್ಯಕರ್ತರು ಈಚೆಗೆ ಗ್ರಾಮದಲ್ಲಿ ಕುಕ್ಕರ್ ಹಂಚಿದ್ದರು’ ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ. ‘ಆಹಾರ ಬೇಯಿಸಲು ಸ್ಟೌ ಮೇಲೆ ಇಟ್ಟಿದ್ದ ಕುಕ್ಕರ್ ಸಿಡಿದು, ಮುಚ್ಚಳ ಹಾರಿತು. ಜೋರಾಗಿ ಶಬ್ಧವಾಯಿತು. ಯಾರಿಗೂ ಯಾವುದೇ ಅಪಾಯವಾಗಿಲ್ಲ’ ಎಂದು ಕುಟುಂಬದವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ತೋಟದಲ್ಲಿ 65 ಕುಕ್ಕರ್ ಪತ್ತೆ ಜಯಪುರ(ಬಾಳೆಹೊನ್ನೂರು): ಇನ್ನೊಂದು ಪ್ರಕರಣದಲ್ಲಿ, ಸಮೀಪದ ಅಗಳಗಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಟ್ಟೆಕೊಪ್ಪದ ತೋಟದಲ್ಲಿ 65 ಕುಕ್ಕರ್ಗಳನ್ನು ಜಯಪುರ ಪೊಲೀಸರು ಪತ್ತೆ ಮಾಡಿದ್ದಾರೆ.</p>.<p>ಚುನಾವಣೆ ಹಿನ್ನೆಲೆಯಲ್ಲಿ ಹಂಚಿಕೆ ಮಾಡಲು ತಂದಿದ್ದರೆನ್ನಲಾದ ಆರೋಪದ ಅಡಿಯಲ್ಲಿ ಪೊಲೀಸರು ಸುಮಾರು ₹90 ಸಾವಿರ ಮೌಲ್ಯದ ಈ ಕುಕ್ಕರ್ಗಳನ್ನು ವಶಪಡಿಸಿಕೊಂಡು, ಸಂಜ್ಞಾರಹಿತ ಅಪರಾಧ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>